ಕವನದ ಶೀರ್ಷಿಕೆ
"ಶಬ್ದ ಗಾರುಡಿಗನ ಮೋಡಿ"
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು
ಸಾಧನಕೇರಿಯ ಗುಂಟ ಚಿಕ್ಕಂದಿನಲಿ ಅಡ್ಡಾಡಿ
ತಿರುಗಿ ತುಂಟತನದಿ ಪಂಟೆ ಪಂಟೆ ಜಿಗಿದಾಡಿ
ಮನೆಯ ಅಜ್ಜಿ ಅಮ್ಮನ ಸಲುಗೆಯಿಂದ ಬೆಳೆದು
ಕಾಮನ ಕಟ್ಟೆಯ ಶಾಲೆಯಲಿ ಆಟಪಾಠ ಕಲಿತು
ಊರಿಂದೂರಿಗೆ ಹೋಗಿ ಅನುಭವದ ಗಣಿಯಾಗಿ
ಸಹೋದರ ಸಹೋದರಿಯರ ಪ್ರೀತಿ ವಿಶ್ವಾಸ ಗೆದ್ದು
ಹೆಂಡತಿ ಮಕ್ಕಳ ಅನುಬಂಧದಿ ನೋವ ನುಂಗಿ
ತಾಯಿ ಶಾರದೆ ಲೋಕ ಮಾತೆಯ ವರಪುತ್ರನೀತ
ಬರೆದುದೆಲ್ಲ ಬಂಗಾರ ಸಿಗಲಿಲ್ಲ ಸಿರಿ ಸಂಪತ್ತು
ಬಡತನದ ಬೇಗೆಯಲ್ಲಿ ಬೆಂದು ನೊಂದ ಬೇಂದ್ರೆ
ಭಾರತಾಂಬೆಯ ಮುಡಿಗೆ ಮುಡಿಸಿದರು ಜ್ಞಾನಪೀಠ
ವರಕವಿ, ಶಬ್ದ ಗಾರುಡಿಗನ ಮೋಡಿಗೆ ಕನ್ನಡ ನುಡಿ
ಓದುಗರ ನರನಾಡಿಗೆಲ್ಲ ಮೀಟಿ ಹೃನ್ಮಂದಿರ ಸೇರಿ
ನೂರಾರು ವರ್ಷಗಳೇ ಸಂದರಿನ್ನೂ ನೆನಪಿನಂಗಳದಿ
ಸದಾ ರಾರಾಜಿಸುತ್ತಿಹೆ ಕನ್ನಡಿಗರ ಎದೆಯ ಗೂಡಲ್ಲಿ
ಗರಿ,ನಾದಲೀಲೆ,ನಾಕುತಂತಿ,ಸೂರ್ಯಪಾನ,ನರಬಲಿ, ಸಖಿಗೀತ,ಉಯ್ಯಾಲೆ,ಮೇಘದೂತ,ಅರಳು ಮರಳು,
ಗಂಗಾವತರಣ,ಹಾಡುಪಾಡು,ಕೃಷ್ಣಕುಮಾರಿ,ಶ್ರೀಮಾತಾ
ಹೀಗೆ ಹಲವಾರು ಕೃತಿಗಳು ಜನಮನಸೂರೆಗೊಂಡಿವೆ.
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment