ಕವನದ ಶೀರ್ಷಿಕೆ
ದುಃಖ ಕಲಿಸುವುದು ಜೀವನ ಪಾಠ
ಸುಖ ಶಾಂತಿ ನೆಮ್ಮದಿ ಮಾನವನ ಬಯಕೆ
ನೋವ ನುಂಗಿ ನಗುವ ಸೂಸಿಹರು ಸಜ್ಜನರು
ಕಷ್ಟ ಸಹಿಷ್ಣುತೆಯ ಪೆಟ್ಟು ತಿಂದು ಬೆಂಕಿಯಲಿ
ಬೆಂದ ಬಂಗಾರದಿ ಹೊಳೆಯೋ ಅಳಲ ಮರೆತು
ನಿತ್ಯ ದುಡಿ ಸತ್ಯ ನುಡಿ ನೀತಿಯ ಕಲಿಸುವದು
ಬಯಸದೆ ಬರುವ ಅತಿಥಿಗಳಂತೆ ಬಾಳ ಬುತ್ತಿ
ಬಿಚ್ಚಿ ಉಂಡಾಗಲೇ ಅರ್ಥವಾಗುವದು ಒಳ ಆಳ
ತಿಳಿದವಗೆ ತಿಳಿದೀತು ಅವುಗಳ ಮಹಿಮೆ ಅಪಾರ
ಲೋಕ ರೂಢಿಯ ನಡುವೆ ನಡೆವ ಮನುಜ
ಹಾದಿ ತಪ್ಪಲು ನೋಡಿ ನಗುವರು ಹಲವರು
ಎಲ್ಲರೊಳಗೊಂದಾಗಿ ಅತೀ ಆನಂದದಿ ನಕ್ಕು
ನಲಿವುದನು ಮರೆಯದಿರು ನೀ ಎಂದೆಂದೂ
ಸಂಸಾರದ ನೋಗಕ್ಕೆ ಗಂಡ ಹೆಂಡತಿ ಹೆಗಲಿಗೆ
ಹೆಗಲು ಗೊಟ್ಟು ಸಾಗಲು ಸರಸ ವಿರಸಗಳೆಂಬ
ಮಿಶ್ರಣದಿ ಬೆಂದು ಸವಿಜೇನ ಸವಿದಂತೆ ರಸಬಾಳೆ
ಹಣ್ಣ ಮೆದ್ದಂತೆ ಸುಖಾನುಭವವ ಅನುಭವಿಸು
ಸುಖ ಬಂತೆಂದು ಹಿಗ್ಗದಿರು ದುಃಖಕ್ಕೆ ಕುಗ್ಗದಿರು
ಸುಖ ದುಃಖಗಳನ್ನು ಸಮವಾಗಿ ನೀ ಸ್ವೀಕರಿಸು
ಕನಸಿನಿರುಳಂತೆ ಕಳೆದು ಹೋಗುವವು ಪಯಣದಿ
ನೆನೆಯುತ್ತಿರು ಸವಿ ನೆನಪಿನ ಜಾಡಲ್ಲಿ ಜೀವನವಿಡೀ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment