ಕವನದ ಶೀರ್ಷಿಕೆ
"ಲಾಕ್ ಡೌನ್ ಮದುವೆ"
ಸಾವಿರಾರು ಲಗ್ನ ಪತ್ರಿಕೆ ಹಂಚಿ ಪ್ರಭಾವಿ
ರಾಜಕಾರಣಿಗಳ ಕರೆಸಿ ಅದ್ದೂರಿಯಾಗಿ
ಬಟ್ಟೆಗಳ ತೊಟ್ಟು ಮದುವಣಿಗರಾಗಿ ಪುರ
ಜನರ ಮಧ್ಯೆ ನಾವಿಬ್ಬರು ಏರುವೆವು ಹಸೆಮಣೆ
ಎಂದೆಲ್ಲಾ ಮದುವೆಯ ಕಲ್ಪನೆಯ ಕಟ್ಟಿ
ಕನಸ ಕಾಣುತ್ತಿದ್ದ ಯುವಕರೆಲ್ಲರೂ ಇಂದು
ಆದರು ನಿರಾಸೆ ಏಕೆಂದರೆ? ಲಾಕ್ ಡೌನ್
ಎನ್ನೋ ಭೂತ! ಬಿಡದೆ ಕಾಡಿತ್ತು ನಿದ್ದೆಗೆಡಿಸಿ.
ದೇಗುಲದ ಪೂಜಾರಿಯ ಮಂತ್ರ ಘೋಷಗಳ
ನಡುವೆ ಬೆರಳೆಣಿಕೆಯ ನೆಂಟರಿಷ್ಟರ ಮುಂದೆ
ಆಡಂಬರ ವೈಭೋಗದ ಖರ್ಚಿಲ್ಲದೆ ಯಾವ ಸದ್ದು
ಗದ್ದಲಗಳ ಜಂಜಾಟವಿಲ್ಲದೆ ತಾಳಿಯ ಕಟ್ಟಿದರು
ದೂರದ ಬಂಧು-ಬಾಂಧವರು ಬಾರದೆ
ತಂಗಾಳಿಯ ಚುಮುಚುಮು ಚಳಿಯ ಲೆಕ್ಕಿಸದೆ
ಮುಂಜಾವಿನ ಸೂರ್ಯ ನಡುಬಾನ ಸೇರುವ
ಮುಂಚೆ ನಡದೆ ಬಿಟ್ಟವು ಹಲವು ಮದುವೆಗಳು
ಯಾವ ಆಯರಿ ಉಡುಗೊರೆಗಳಿಲ್ಲದೆ
ಅತ್ಯಾಧುನಿಕ ಧ್ವನಿವರ್ಧಕ ಸಂಗೀತ ಕಲಾ
ತಂಡಗಳ ಹಾಡು ನೃತ್ಯದ ಸಂಭ್ರಮವಿಲ್ಲದೆ
ಸರಳ ಜೀವನ ಪ್ರತೀಕದ ಹೆಗ್ಗುರುತಾಗಿ ಉಳಿದು
ಕಾಲ ಬದಲಾದರೇ ಹೀಗೂ ಮಾಡಬಹುದು
ಮದುವೆಗಳು ಎಂಬ ಸಂದೇಶವನು ಸಾರಿ ಸಾರಿ
ಹೇಳಿದಂತೆ ಈ ವರ್ಷದ ಮದುವೆಗಳು ನಡೆದು
ಮಾನವ ಸಂಕುಲಕ್ಕೆ ಕಲಿಸಿದವು ಪಾಠ ಮರೆಯದಂತೆ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment