Saturday, December 12, 2020

ಕನ್ನಡ ನಾಡು ನುಡಿ ಕವನ 12/12/2020

ಕವನದ ಶೀರ್ಷಿಕೆ

*ಕನ್ನಡ ನಾಡು ನುಡಿ*


ಕವಿಗಳ ಬೀಡು ಕನ್ನಡ ನಾಡು

ಚಿನ್ನಾ.. ರನ್ನಾ.. ತಿಳಿಯೋ ನೀನು

ಸವಿಜೇನು ಸವಿದಂತೆ ಈ ನುಡಿಯ ಕೇಳು

ಅಕ್ಕರೆಯ ಅಕ್ಕರಗಳು ನೀ ಕಾಣು ಓ....


ತುಂಬೆ ತೇಗ ಬೀಟೆ ಗಂದ ಮರಗಳ ನೋಡು

ಮಾಮರ ಕೋಗಿಲೆಯ ಇಂಪಾದ ಹಾಡು

ಅಣ್ಣಾ ನೀ ಬಾಳಲೇ ಬೇಕು ಒಂದಾಗಿ ಚಂದಾಗಿ

ಜಾತಿ ಮತ ಭೇದವ ಮರೆತು.....ಬಾಳೋ.. ನೀ...


ಕಲ್ಪತರು ನಾಡು ಶಿಲೆಗಳ ಬೀಡು ಅಹ..ಅಹಾ.

ಚಾಲುಕ್ಯ ಹೊಯ್ಸಳ ಶೈಲಿಯ ಕಲೆಗಳ ನೋಡು

ಬಾದಾಮಿ ಬನಶಂಕರಿ ತಾಯಿಯ ವರದಿಂದ

ನಾವು.. ನೀವು.. ಒಲವೆತ್ತಿ ಬಾಳಿ ಬದುಕ ಬೇಕು


ಬೇಲೂರು ಹಳೇಬೀಡು ಹಂಪೆಯ ನೋಡು...

ಜೋಗಿ ಜಲಪಾತದಿ ಧುಮುಕುವ ವೈಭವವು...

ಕಾವೇರಿ ನದಿಯ ಜುಳು ಜುಳು ನಿನಾದವ ಕೇಳು

ಮೈಸೂರು ಅರಮನೆಯ ದಸರಾ ಮೆರವಣಿಗೆಗೆ ಹೋಗು....


ಊಟಿ ಉದಕ ಮಂಡಲದ ಮೈಮಾಟದ ಬೆರಗ..

ಮಡಿಕೇರಿ ಮಣ್ಣಿನ ಕಾಫಿಯ ಪರಿಮಳವ ಹೀರು

ಬೀದರ್ ಬಿಜಾಪುರ ಕಲ್ಬುರ್ಗಿಯ ಕೋಟೆಯ ಸುತ್ತು

ಕನ್ನಡ ಕನ್ನಡ ಎನ್ನುತ ನಲಿದು ಬಾರಿಸು ಕನ್ನಡ ಡಿಂಡಿಮವ..


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*









No comments:

Post a Comment

Videos