ಕವನದ ಶೀರ್ಷಿಕೆ
*ಮಾನವನ ಮಾನವೀಯತೆ*
(ರುಬಾಯಿ ಪ್ರಕಾರ)
ಮನುಜಮತ ವಿಶ್ವಪಥ ಸರ್ವೋದಯ
ಸಮತೆ ಸಹೃದಯತೆ ಸದಾಚಾರ ಸಮನ್ವಯ
ಜಾತ್ಯಾತೀತ ಪರಂಪರೆ ಬೆಳೆಸಿಕೊಂಡು ನಲಿ
ಕವಿಗಳ ವಚನಕಾರರ ದಾರ್ಶನಿಕರ ಸದಾಶಯ
ಕೋಮು ಸೌಹಾರ್ದತೆಯ ಗಾಢಾಂಧಕಾರ
ದುರಾಡಳಿತ ಭ್ರಷ್ಟಾಚಾರ ಅತ್ಯಾಚಾರ
ದೌರ್ಜನ್ಯ ವಿರೋಧಿಸಿ ದಾರಿದ್ರ್ಯ ತೊಲಗಲಿ
ಮಾನ ಉಳಿಯಲಿ ರೈತ ಕೂಲಿ ಕಾರ್ಮಿಕರ
ಕಲೆ ಸಾಹಿತ್ಯ ಸಂಸ್ಕೃತಿ ಪುಸ್ತಕಗಳಿಗೆ ಬೆಲೆ
ನೀಡಿ ಸಹೃದಯಿ ಓದುಗರ ಸವಿ ಕರೆಯೋಲೆ
ಕಾವ್ಯ ಕೃತಿ ಜಾನಪದ ಗೀತೆ ಪಾಡಿ ನೃತ್ಯ ಮಾಡಲು
ಸಲಹೆ ಮಾರ್ಗದರ್ಶನ ನೀಡಿ ಒಂದಾಗಲಿ ಭಾವದಲಿ
ಭವ್ಯ ಭಾರತದ ನಿರ್ಮಾಣ ಯುವಕರ ಕನಸು
ಜ್ಞಾನ ವಿಜ್ಞಾನ ತಂತ್ರಜ್ಞಾನ ಕಲಿತರೆ ಸೊಗಸು
ಸಂಬಂಧಗಳ ಗಟ್ಟಿಯಾಗಿ ಒಲುಮೆಯು ಚಿಮ್ಮಲು
ಬೇಕು ಮಾನವನ ಮಾನವೀಯತೆಯ ಬಹುವಿಕಾಸ
ರಚನೆ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment