ಕವನ ಶೀರ್ಷಿಕೆ
*ಮತದಾನದ ಜಾಗೃತಿ ಮೂಡಿಸೋಣ*
ಚುನಾವಣೆಗಳು ಬಂದಿವೆ ನಾವು ಜಾಗೃತರಾಗೋಣ
ಕೆಲವು ದಿನ ಕೊಡುವ ಹೆಂಡ ಕಂಡಕೆ ಬಲಿಯಾಗದೆ
ಗೌರವದಿಂದ ಬಾಳಿ ಬದುಕುವ ಪಣ ತೊಡೋಣ
ಅವರ ಅಚ್ಚುಮೆಚ್ಚಿನ ಮಾತಿಗೆ ಮರಳಾಗಬೇಡಿ
ನಿಂತಿರುವ ವ್ಯಕ್ತಿಯ ಗುಣಾವಗುಣ ಲೆಕ್ಕಿಸೋಣ
ಸಂಬಂಧಗಳನು ಹಾಳು ಮಾಡಿಕೊಳ್ಳದೆ ಗಟ್ಟಿ
ಮಾಡಲು ಪ್ರಯತ್ನಿಸುವ ಕೆಲಸ ಸಾಗುತಿರಲಿ
ನಮಗೆ ಒಳಿತು ಬಯಸುವರನ್ನೆ ಚುನಾಯಿಸೋಣ
ಜಾತಿಯ ಕಟ್ಟುಪಾಡುಗಳನ್ನು ಮೀರಿ ಒಳ್ಳೆಯ
ವ್ಯಕ್ತಿಯನ್ನು ನಾಯಕನನ್ನಾಗಿ ಮಾಡೋಣ
ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಗೆ
ನೆನೆವ ನಯವಂಚಕರಿಗೆ ತಕ್ಕ ಉತ್ತರ ನೀಡೋಣ
ಆಸೆ ಆಮಿಷಗಳ ತೋರಿಸಿ ಹಣ ಸುರಿದು
ಓಟು ಆಕಿಸುವವರ ದುಡ್ಡಿಗೆ ಬೆಲೆ ನೀಡದಿರೋಣ
ನಮ್ಮ ಅಳಲು ತೋಡಿಕೊಂಡರೆ ನೀವು ಪುಕ್ಕಟೆ
ಓಟು ಆಕಿಲ್ಲವೆಂದು ಜರಿದಾಗ ಪೇಚಿಗೆ ಸಿಲುಕದಿರೋಣ
ಮತದಾರ ಪ್ರಭುಗಳಾದ ನಾವು ಉತ್ಸಾಹದಿ ಮತಗಟ್ಟೆಗೆ
ತೆರಳಿ ತಪ್ಪದೆ ಮತದಾನದ ಹಕ್ಕನ್ನು ಚಲಾಯಿಸೋಣ
ಗ್ರಾಮಗಳ ಉದ್ದಾರಕ್ಕೆ ದುಡಿವರನು ಗೆಲ್ಲಿಸಿ ತರುವ
ಸಂಕಲ್ಪ ತೊಟ್ಟು ಮತದಾನದ ಜಾಗೃತಿ ಮೂಡಿಸೋಣ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment