Saturday, December 19, 2020

ತಾಯೇ ಭುವನೇಶ್ವರಿ ಕವನ೦೧/೧೧/೨೦೧೮

 ಕವನ : “ತಾಯೇ ಭುವನೇಶ್ವರಿ”


ಕನ್ನಡಾಂಬೆ ನಿನ್ನ ಮರೆಯಲೆಮ್ಮೆವು ಎಂಬುದು

ಅದು ಬರೀ ಬಿಂಕದ ಜಂಬದ ಮಾತಾಗಿಹದು

ನವೆಂಬರಲಿ ಮಾತ್ರ ಜೈಕಾರ ಹಾಕುವದು

ಮತ್ತೆ ನೆನಪಾಗುವುದು ಮುಂದಿನ ವರುಷದಿ.


ಕೃತಿಗಳಲಿ ಹಾಡಿ ಕೊಂಡಾಡಿಹರು ನಿನ್ನನು

ಅಜರಾಮರ ಕವಿಪುಂಗವರ ಮನದಲಿ ನೀನು

ನಡೆಯಲಿ ಮಾತ್ರ ಆಚರಿಸುವರು ಕಂಗ್ಲೀಸನು

ಇತ್ತ ಕನ್ನಡ ಅತ್ತ ಆಂಗ್ಲವೂ ಅಲ್ಲದ ಭಾಷೆ ಜನ.


ಬ್ರಿಟೀಷರಿಂದ ಪಡೆದ ವರವೆಂಬಂತಿವರು

ಬರ್ತಡೇ,ವ್ಯಾಲೆಂಟೆನ್ಸಡೇ ಮಾಡುವರು ಘೋರ

ದೀಪವ ಬೆಳಗಿಸುವದು ಮರೆತಿಹರು ಪೂರ

ಆರಿಸಲು ಮುಂದಾಗುವರು ದೀಪವ ಘೋರಾ..


ಎಲ್ಲಿ ನೋಡಿದರಲಿ ಪ್ರೀತಿಸುವಂತೆ ನಟಿಸುವರ

ವ್ಯಾಟ್ಸಾಪ್,ಫೇಸ್ಬುಕ್ನಲಿ ಪ್ರೀತಿಯ ತೋರುವರು

ಎದುರಿಗಿದ್ದರು ಅರಿಯದಾದರು ಪ್ರೀತಿ ಅವರು

ಯಾವಾಗಲೂ ಮೂಡಲಿ ಮಮತೆಯ ಸಾಕಾರ


ಮಮ್ಮಿ,ಡ್ಯಾಡಿ,ಅಂಕಲ್,ಆಂಟಿ ಎಂದಾರೋ

ತಂಗಿ,ತಮ್ಮ,ಅಪ್ಪ,ಅಮ್ಮನ ಮರತಾರೋ

ಮುಂದಿನ ಪೀಳಿಗೆಗೆ ಸಂಬಂಧದ ವರತೆಯ

ಹಬ್ಬಲಿ ತಾಯೇ ಭುವನೇಶ್ವರಿ ಈ ಜಗದಲಿ.


ಇಂತಿ

ಶರಣಬಸಪ್ಪ ಎಂ ಗುಳೇದ





No comments:

Post a Comment

Videos