Monday, December 14, 2020

ಬದುಕು ಕಟ್ಟಿಕೊಳ್ಳುವ ತವಕ ಕವನ ೧೩/೧೨/೨೦೨೦

 ಕವನದ ಶೀರ್ಷಿಕೆ

*ಬದುಕು ಕಟ್ಟಿಕೊಳ್ಳುವ ತವಕ*


ಪ್ರವಾಹ ಬಂದು ಊರೊಳಗೆ ಹೊಕ್ಕು

ಮನೆ ತುಂಬ ನೀರೇ ನೀರು ತುಂಬಿಹದು

ಒಮ್ಮಿಂದೊಮ್ಮೆಲೆ ಹೋಗೆಂದರೆ ಹೇಗೆ

ಜೀವನಕ್ಕಿಂತ ಜೀವ ಮುಖ್ಯ ಎಂದು ತಿಳಿಸ್ಯಾರ


ನಾನು ನನ್ನದೆಂದು ಗಳಿಸಿದ್ದು ನಮಗಾಗಲಿಲ್ಲ

ಎಲ್ಲಾ ಬಿಟ್ಟು ಹೊರಟಾಗ ಶಾಶ್ವತವಲ್ಲ ಐಸಿರಿ

ನಮ್ಮ ಹೊಲ ನಮಗ ಸಿಗುತ್ತಿಲ್ಲ ಯಾರಿಗೆ ಗೊತ್ತು

ನಾಮ್ಮವರೆಲ್ಲಿ ಕೊಚ್ಚಿಕೊಂಡು ಹೋಗ್ಯಾರ ಅಂಥ


ಒಂದ್ಹೊತ್ತಿನ ಊಟಕ್ಕೂ ಕೈ ಚಾಚ ಬೇಕಾತು

ಗಂಜಿ ಕೇಂದ್ರದಾಗ ಕುಂತು ದಾರಿ ಕಾಯೋದಾತು

ಉಟ್ಟೆನೆಂದರ ಬಟ್ಟಿ ಇಲ್ಲ ಬರಿ ಇಲ್ಲ ಎಲ್ಲನೂ

ದವಸ ಧಾನ್ಯ ದನ ಕರು ಕೊಚ್ಚಿಕೊಂಡು ಹೋಗಿವೆ


ಊರು ದಾಟಿಸಲಿಕ್ಕೂ ಸೈನಿಕರ ಹರಸಾಹಸ 

ಮಕ್ಕಳ ಮರಿಯೊಂದಿಗೆ ಓಡೋಡಿ ಬಂದೇವ

ಜೀವ ಸತ್ತು ಹೋಗುವಾಗ ಗಳಿಸಿದ್ದೆಲ್ಲ ಶೂನ್ಯ

ನಾವು ನಮ್ಮವರ ಕೂಡಿ ಇರೋಣ ಒಂದಾಗಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

No comments:

Post a Comment

Videos