ಕವನದ ಶೀರ್ಷಿಕೆ : “ಅಂಬಿ ಅಣ್ಣ”
ಕರುನಾಡಿನ ಕಲಿಯುಗದ ಕರ್ಣ
ಮಂಡ್ಯದಗಂಡು ರಾಜಕೀಯ ಚತುರ
ನೇರನುಡಿಯ ದಿಟ್ಟದೀರ ನೇತಾರ
ಅಭಿಮಾನಿಗಳ ಮಿಡಿತವನರಿದವರು
ಬಲಗೈಲಿ ಮಾಡಿದ ದಾನ ಎಡಗೈಗೆ
ಗೊತ್ತಾಗದೆ ಹಾಗೆ ಇರುವಂತವರು
ಅಂಬಿ ಅಣ್ಣ ರಾಜನಾಗಿ ಮೆರೆದವರು
ಕರುನಾಡಿನ ಜನತೆಪರ ದೆಹಲಿ ಗದ್ದುಗೆಗೆರಿದವರು
ಕಾವೇರಿಗಾಗಿ ಜನಮನದಲಿ ನೆಲೆಸಿದವರು
ಅಂದು ನೀನು ಅಮರನಾದಾಗ
ಕನ್ನಡಿಗರ ಹೃದಯ ಒಡೆದಂತಾಯಿತು
ಕಂಬನಿ ಮಿಡಿದ ಕಂಗಳೆಷ್ಟೋ
ಕಂಪನದಿ ಸತ್ತ ಅಭಿಮಾನಿಗಳು ಕೆಲವರು
ಸೇರಿತೊ ಜನಸಾಗರ ನಿಮ್ಮ ದರುಶನಕೆ
ಅಚ್ಚಳಿಯದಿ ಉಳಿದಿರಿ ಜನ ಮಾನಸದಲಿ
ನಿಮ್ಮ ಪ್ರೀತಿ ಅಭಿಮಾನಕೆ ಸೋತೊರೊ ಸಜ್ಜನ
ಉಳಿಯಲಿ ನಿಮ್ಮ ನೆನಪು ಅಮರ..ಅಮರ
ಇಂತಿ,
ಶರಣಬಸಪ್ಪ ಗುಳೇದ
Date : 01-03-2018
No comments:
Post a Comment