ಕವನದ ಶೀರ್ಷಿಕೆ
*ಮೌನ ಮಾತಾಡಿದಾಗ*
ಇನಿಯನ ಬಯಸಿ ಆತುರಿದಿ ಓಡಿ ಬರುವೆ
ಸನಿಹಕ್ಕೆ ಬಂದು ಸವಿಮಾತನು ನುಡಿಯುವೆ
ಕಾನನ ಮಧ್ಯೆ ನಾವಿಬ್ಬರು ಜೊತೆಯಾಗಿರಲು
ಮನಕೆ ದುಗುಡವೆಂಬುದಿಲ್ಲ ನಿನಗೂ ನನಗೂ
ಭಾವನೆಗಳ ಪ್ರಪಂಚದಲ್ಲಿ ತೆಲುತ್ತಿರುವ ನಾವು
ಯಾವ ವಿರಹ ವೇದನೆಯು ಅನುಭವಿಸದಿರಲಿ
ನವೀನ ವಿಚಾರಲಹರಿಯಲಿ ವಿಹರಿಸುವ ಬಯಕೆ
ಆವಭಾವ ಮಾಡಿ ಮರೆಸಿಹಳು ಮನೆಯ ವಿಚಾರ
ಮತ್ಯಾವುದೋ ವಿಷಯಕ್ಕೆ ಮುನಿದು ಮಾತಿಲ್ಲ
ಆಕೆಗೂ ನನಗೂ ಬರೀ ಕಣ್ಣೋಟದಲೆ ಹುಸಿ
ನಗೆಯ ಬೀರಿ ಹೊರಸೂಸುವಳು ಆಸೆ ಚೆಲ್ಲಿ
ಕಾಡುವ ವಿರಹ ವೇದನೆಯ ಕಟ್ಟೆಯೊಡೆದು
ಮರುಮಾತಾಡದೆ ಮೌನ ಮುರಿದು ಬಂದವಳೆ
ತೋಳ ತೆಕ್ಕೆಯ ಬಿಗಿದಪ್ಪಿ ಅಳುತಿಹಳು ಬಿಕ್ಕಿ ಬಿಕ್ಕಿ
ನಿನ್ನ ಬಿಟ್ಟು ಇರಲಾರೆ ಕ್ಷಮಿಸೆಂದು ಅಂಗಾಲಾಚಿ
ಬೇಡಲು ಅನುರಾಗ ಅರಳಿ ಪ್ರೇಮ ಪಾಶದಿ ಬಿಗಿದಳು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment