ಕವನದ ಶೀರ್ಷಿಕೆ
*ಮಕ್ಕಳ ಭವ್ಯ ಕನಸುಗಳು*
ವಿಷಯ : ಮಕ್ಕಳ ಮನೋಲೋಕ
ನೀರಲ್ಲಿ ಮೀನಾಗಿ ಈಜಾಡುವ ಆಸೆ
ಹಕ್ಕಿಗಳಂತೆ ಆಕಾಶದಿ ಹಾರುವ ಬಯಕೆ
ನಕ್ಷತ್ರ ಪುಂಜಗಳ ಮುಟ್ಟುವ ತವಕ ನನಗೆ
ಚಂದಿರನ ಮೇಲೆ ಆಟ ಆಡುವ ಕನಸ ಕಾಣೆ
ಮಿಂಚಂತೆ ಓಡೋಡಿ ಬರುವ ಶಕ್ತಿಬೇಕು
ಜನರ ಮನಸು ಅರ್ಥ ಮಾಡಿಕೊಳ್ಳಬೇಕು
ಕತ್ತಲನು ಓಡಿಸುವ ಬೆಳಕು ನನಾಗಬೇಕು
ಬರೆಯಲು ಬೇಕಾಗುವ ಲೆಕ್ಕಣಿಕೆಯಾಗಬೇಕು
ಸೂರ್ಯನಂತೆ ದೃಢವಾಗಿ ನಿಲ್ಲುವ ಗುಣ ಸಾಕು
ಜಲದಂತೆ ಹರಿಯೋ ವಿಶಾಲ ಮನಸು ನನಗಿರಲಿ
ನದಿಗಳು ಸಮುದ್ರ ಸೇರುವಂತೆ ಐಕ್ಯತೆ ಭಾವ ಬೇಕು
ರಾಜಾಧಿರಾಜರಂತೆ ಮೆರೆಯುವ ಕನಸು ನಿಜವಾಗಲಿ
ದೀನ ದಲಿತರ ಸೇವೆ ಮಾಡೋ ಅವಕಾಶ ಸಿಗಲಿ
ಜಾತಿ ವೈಷಮ್ಯವಿರದ ನಾಡು ಕಟ್ಟೋ ನಿರ್ಧಾರ
ಜನಾನುರಾಗಿ ರಾಜಕಾರಣಿ ಆಗಿ ಕೆಲಸ ಮಾಡುತು
ರಾಮ ರಾಜ್ಯದ ಕನಸು ಕಂಡು ನನಸಾಗಿಸೋ ಒಲವು
ದೇವರ ಧ್ಯಾನ ಮಾಡಿ ದೇಶದ ಒಳಿತು ಬೇಡುವೆ
ಸ್ವಾತಂತ್ರ್ಯ ವೀರ ಸೇನಾನಿಗಳ ಧ್ಯೇಯ ಪಾಲಿಸುವೆ
ಮಾನವೀಯ ಮೌಲ್ಯಗಳ ನೆಲೆಯಲ್ಲಿ ಬದುಕುವೆ
ಸತ್ಯ ಅಹಿಂಸೆ ತ್ಯಾಗ ಬಲಿದಾನದ ಮಹತ್ವ ಅರಿಯುವೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment