Saturday, December 19, 2020

ಓ.. ಶಿಕ್ಷಕ ಕವನ ೨೩/೧೧/೨೦೧೮

 ಸ್ಪರ್ಧೆಗೆ,

ಕವನದ ಶೀರ್ಷಿಕೆ : “ಓ ಶಿಕ್ಷಕ”


ಕಲಿಯುಗದ ದೈವ ಕರುಣಾಕರ

ಕರವಿಡಿದು ಎತ್ತುವ ಸಹನೆಯ ಸರ್ದಾರ

ಸಂಭ್ರಮದಿ ಕಲಿಸುವ ಸಾಹುಕಾರ

ವಿದ್ಯಾರ್ಥಿಗೆಲ್ಲ ನೆಚ್ಚಿನ ನಟಭಯಂಕರ


ದೈರ್ಯದಿ ನಡೆಯಲು ಕಲಿಸುವವನು

ಮಾನವಿಯ ಮೌಲ್ಯಗಳ ಬೋಧಿಸುವವನು

ಸಮಾಜದಲಿ ತಲೆಯತ್ತಿ ಬಾಳಲು ತಿಳಿಸುವವನು

ಜೀವನದಿ ಶಿಸ್ತು,ಶಾಂತಿ ಬೆಳೆಸುವವನು


ಜಾತಿ-ಬೇದವನು ಅಳಿಯಲು ಪ್ರಯತ್ನಿಸುವವ

ನೀತಿ ಮಾರ್ಗದಿ ಬಾಳಲು ಕಲಿಸುವವ

ಏಕತೆಯ ತತ್ವವನು ಸಾರುವವ

ಜಗದಿ ನಿನಗೆ ಗೌರವಾದಾರವನು ಪಡೆದವ


ನಿನ್ನಿಚ್ಛೆಯಲಿ ಸಾಮಾನ್ಯನು ಅಸಮಾನ್ಯನಾಗುವ

ಹೇಡಿಯು ಶೂರನಾಗಿ ಜಯಶಾಲಿಯಾಗುವ

ದಡ್ಡನೂ ಕವಿಯಾಗುವ ವರನೀಡುವವ

ಓ ಶಿಕ್ಷಕ ನೀ ಜಗದ್ರಕ್ಷಕ ನೀನಾಗಿರುವೆ


ಇಂತಿ,

ಶರಣಬಸಪ್ಪ ಗುಳೇದ


No comments:

Post a Comment

Videos