ಸ್ಪರ್ಧೆಗೆ,
ಕವನದ ಶೀರ್ಷಿಕೆ : “ಓ ಶಿಕ್ಷಕ”
ಕಲಿಯುಗದ ದೈವ ಕರುಣಾಕರ
ಕರವಿಡಿದು ಎತ್ತುವ ಸಹನೆಯ ಸರ್ದಾರ
ಸಂಭ್ರಮದಿ ಕಲಿಸುವ ಸಾಹುಕಾರ
ವಿದ್ಯಾರ್ಥಿಗೆಲ್ಲ ನೆಚ್ಚಿನ ನಟಭಯಂಕರ
ದೈರ್ಯದಿ ನಡೆಯಲು ಕಲಿಸುವವನು
ಮಾನವಿಯ ಮೌಲ್ಯಗಳ ಬೋಧಿಸುವವನು
ಸಮಾಜದಲಿ ತಲೆಯತ್ತಿ ಬಾಳಲು ತಿಳಿಸುವವನು
ಜೀವನದಿ ಶಿಸ್ತು,ಶಾಂತಿ ಬೆಳೆಸುವವನು
ಜಾತಿ-ಬೇದವನು ಅಳಿಯಲು ಪ್ರಯತ್ನಿಸುವವ
ನೀತಿ ಮಾರ್ಗದಿ ಬಾಳಲು ಕಲಿಸುವವ
ಏಕತೆಯ ತತ್ವವನು ಸಾರುವವ
ಜಗದಿ ನಿನಗೆ ಗೌರವಾದಾರವನು ಪಡೆದವ
ನಿನ್ನಿಚ್ಛೆಯಲಿ ಸಾಮಾನ್ಯನು ಅಸಮಾನ್ಯನಾಗುವ
ಹೇಡಿಯು ಶೂರನಾಗಿ ಜಯಶಾಲಿಯಾಗುವ
ದಡ್ಡನೂ ಕವಿಯಾಗುವ ವರನೀಡುವವ
ಓ ಶಿಕ್ಷಕ ನೀ ಜಗದ್ರಕ್ಷಕ ನೀನಾಗಿರುವೆ
ಇಂತಿ,
ಶರಣಬಸಪ್ಪ ಗುಳೇದ
No comments:
Post a Comment