Friday, December 11, 2020

ಧನಿಕರ ದೌರ್ಜನ್ಯ ಕವನ 10/12/2020

ಕವನದ ಶೀರ್ಷಿಕೆ

*ಧನಿಕರ ದೌರ್ಜನ್ಯ*


ಬಡವರನು ಕಣ್ಣೆತ್ತಿಯೂ ನೋಡರು

ಅವರ ಮನೆಯ ಕೆಲಸಕ್ಕೆ ಇವರು ಬೇಕು

ಕರುಣೆಯಿಲ್ಲದೆ ದುಡಿಸಿಕೊಳ್ಳುವ ಮನ

ಒಂದಿಷ್ಟು ಹೆಚ್ಚು ದುಡ್ಡು ಕೇಳಲು ಕೋಪ


ಬಡವರನು ಬಡವರಾಗಿಯೇ ಇಡೋ ತಂತ್ರ

ಅವರು ಹಣವಂತರಾದ್ರೆ ಚಾಕರಿ ಮಾಡೋರಾರು

ಕೈಗೊಬ್ಬ ಕಾಲ್ಗೊಬ್ಬ ಆಳು ಇಟ್ಟುಕೊಂಡು ಶೋಕಿ

ಮಾಡುತ ಗುಲಾಮಗಿರಿಗೆ ತಳ್ಳುವ ತವಕ ಬೇರೆ


ಆಳುಗಳಿಗೆ ಬಾಯಿಗೆ ಬಂದಂತೆ ಬೈಯ್ಯುವುದು

ಅವಮಾನದಿ ಮುಖ ತಗ್ಗಿಸಿ ನಿಂತ್ರೇನು ಖುಷಿಯೋ

ಬಡ್ಡಿ ಚಕ್ರಬಡ್ಡಿ ಸೇರಿಸಿ ದುಡಿ ಮಗನ ಅನ್ನೋದು

ರೋಗ ರುಜಿನ ಬಂದ್ರೆ ತೋರಿಸಲು ದುಡ್ಡಿಲ್ಲದ ಜನ


ಬಡವರೇನು ಬಿಟ್ಟಿಗಿ ಬಿದ್ದಾರಂತ ತಿಳಿದಿರೇನ್ರೋ

ಬಡವನ ಸಿಟ್ಟು ದವಡೆಗೆ ಮೂಲಂತ ಸುಮ್ಮನಿರೋರು

ತಿರುಗಿ ಬಿದ್ರೆ ನಿಮ್ಮನೆ ಕಸ ಬಳಿಯೊಕ್ಕು ಜನ ಸಿಗೊಲ್ಲ

ದವಲತ್ತು ಬಿಟ್ಟು ಮನುಷತ್ವದಿಂದ ನೋಡೋದು ಕಲಿರಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




 

No comments:

Post a Comment

Videos