*ಆಧುನಿಕ ವಚನಗಳು*
೧
ಮೋಬೈಲ್ ಗೇಮ್ ಆಡದಿರಯ್ಯಾ
ಅದರೊಳ್ ಓದಿದಡೆ ಮಸ್ತಕದಿ ಉಳಿಯದಯ್ಯಾ
ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಒಳಿತಯ್ಯಾ
ಕಂಡ ಕಂಡಿದ್ದು ನೋಡೋದು ಬಿಡಬೇಕಯ್ಯ
ಒಳಿತಾದ ದಾರಿಗೆ ನಡೆದರೆ ಸಾಕಾರಗೊಳ್ಳುದಯ್ಯ
ಮಿತಿಯಾದರೆ ಆ ಗೂಳಿ ಬಸವನೂ ಕಾಯನಯ್ಯಾ
೨
ಮಕ್ಕಳು ಟಿವಿ ಮುಂದೆ ಕುಳಿತು ಕೆಟ್ಟರಯ್ಯ
ಆಟೋಟಗಳ ಮರೆತುಬಿಡುವರಯ್ಯ
ದೈಹಿಕ ಬಲಾಢ್ಯರಾಗದಿ ಮಾನಸಿಕ ಕುಗ್ಗುವರಯ್ಯ
ಗೆಳೆಯರೊಂದಿಗೆ ಕೂಡಿ ಆಟ ಹಾಡಿ ನಲಿಯಬೇಕಯ್ಯ
ತಲೆ ತಗ್ಗಿಸಿ ಓದಲು ಜೀವನ ಸಾಕಾರಗೊಳ್ಳುವುದಯ್ಯ ಗೂಳಿ ಬಸವ ತಿದ್ದಿ ನಡೆಯೋದು ಕರುಣಿಸಯ್ಯಾ
ರಚನೆ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment