Friday, December 11, 2020

ಕದನ ಕಲಿಗಳು ಕವನ 07/12/2020

ಕವನದ ಶೀರ್ಷಿಕೆ

ಕದನ ಕಲಿಗಳು

(ಕುಸುಮ ಷಟ್ಪದಿ)


ಕದನದಲಿ ಹೋರಾಡಿ

ಸದ್ದಡಗಿಸೊ ಕಲಿಗಳು

ಗೆದ್ದು ಕೊಡುವರು ವಿಜಯ ಮಾಲೆಯು ದಿಟ

ಬದುಕಿನಲಿ ಜೀವ ಭಯ

ಹೊಂದದೆಯು ನಾಡಗುಡಿ

ಎದೆಯೊಡ್ಡಿ ನಿಂತುಗಡಿ ಕಾಯುವವರು ||೧||


ಭರತ ಖಂಡದ ಮಹಾ

ವೀರರು ಅತಿ ಕಲಿಯಲಿ

ಮರಣಕ್ಕೆ ಅಂಜದೆಯು ಹೋರಾಡುವ

ವರ ಪಡೆದ ಶೂರ ಜನ

ಹರಿಹರರ ರಕ್ಷಣೆಯು

ಹರಸುವರು ಸೈನಿಕರ ಆರೈಕೆಗೆ ||೨||


ನಮನ ಸಲ್ಲಿಸುವವರು

ನಮ್ಮೆದೆಯ ಗೂಡಿನಲಿ

ನಮ್ಮ ಗಂಡೆದೆಯ ಸೈನಿಕರಿಗೆ ಸದಾ

ನಮ್ಮ ನಾಡಿನ ಜನರು

ಹಮ್ಮಿನಲಿ ಸಂತಸದಿ

ನಮ್ಮ ವಿಜಯ ದಿವಸವ ಆಚರಿಸುವೆ ||೩||


ರಚನೆ

ಯಗುಮಾಶ(ಕಾವ್ಯನಾಮ)

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ

ಪಿನ್ ಕೋಡ್ -೫೮೫೨೧೮

ಮೊಬೈಲ್ - ೮೬೫೫೨೪೪೩೩೪










 

No comments:

Post a Comment

Videos