ಕವನದ ಶೀರ್ಷಿಕೆ
ಕದನ ಕಲಿಗಳು
(ಕುಸುಮ ಷಟ್ಪದಿ)
ಕದನದಲಿ ಹೋರಾಡಿ
ಸದ್ದಡಗಿಸೊ ಕಲಿಗಳು
ಗೆದ್ದು ಕೊಡುವರು ವಿಜಯ ಮಾಲೆಯು ದಿಟ
ಬದುಕಿನಲಿ ಜೀವ ಭಯ
ಹೊಂದದೆಯು ನಾಡಗುಡಿ
ಎದೆಯೊಡ್ಡಿ ನಿಂತುಗಡಿ ಕಾಯುವವರು ||೧||
ಭರತ ಖಂಡದ ಮಹಾ
ವೀರರು ಅತಿ ಕಲಿಯಲಿ
ಮರಣಕ್ಕೆ ಅಂಜದೆಯು ಹೋರಾಡುವ
ವರ ಪಡೆದ ಶೂರ ಜನ
ಹರಿಹರರ ರಕ್ಷಣೆಯು
ಹರಸುವರು ಸೈನಿಕರ ಆರೈಕೆಗೆ ||೨||
ನಮನ ಸಲ್ಲಿಸುವವರು
ನಮ್ಮೆದೆಯ ಗೂಡಿನಲಿ
ನಮ್ಮ ಗಂಡೆದೆಯ ಸೈನಿಕರಿಗೆ ಸದಾ
ನಮ್ಮ ನಾಡಿನ ಜನರು
ಹಮ್ಮಿನಲಿ ಸಂತಸದಿ
ನಮ್ಮ ವಿಜಯ ದಿವಸವ ಆಚರಿಸುವೆ ||೩||
ರಚನೆ
ಯಗುಮಾಶ(ಕಾವ್ಯನಾಮ)
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಯರಗೋಳ ತಾ.ಜಿ. ಯಾದಗಿರಿ
ಪಿನ್ ಕೋಡ್ -೫೮೫೨೧೮
ಮೊಬೈಲ್ - ೮೬೫೫೨೪೪೩೩೪
No comments:
Post a Comment