ಕವನದ ಶೀರ್ಷಿಕೆ
*ಕಡಲ ವಿಹಂಗಮ ನೋಟ*
ಕಂಗಳ ನೋಟದವರೆಗೆ ವಿಶಾಲವಾದ ಕಡಲು
ತಂಗಾಳಿಯು ಬೀಸುವುದು ಅನುದಿನವು
ಅಂಗನೆಯರು ಈಜುವುದ ನೋಡಲು ತಾವು
ಸಂಗಡಿಗರೊಂದಿಗೆ ಬರುವರು ಬಹುತೇಕರು
ಅಬ್ಬರಿಸಿ ತೇಲಾಡುತ ಬರುವವು ಅಲೆಗಳು
ತಬ್ಬಿಕೊಳ್ಳಬೇಕೆಂದು ಕಾತರಿಸಿದರು ಕೈಗೆ ಸಿಗದು
ಉಬ್ಬರವಿಳಿತಳು ಏರುತಿರುವವು ಪೂರ್ಣಿಮೆಗೆ
ಇಬ್ಬನಿಯ ಹನಿಗಳು ಇಲ್ಲವೋ ಕಡಲ ತೀರಕ್ಕೆ
ಕಡಲ ಒಡಲಲ್ಲಿ ಇವೆ ಹಲವು ಜಲಚರಗಳು
ಬಿಡದೆ ಬಲೆಯ ಬೀಸುವರು ಮೀನುಗಳಿಗೆ
ಸಡಗರದಿ ಹರಿದಾಡೋ ಜೀವಗಳಾಗುವವು ಬಲಿ
ಹುಡುಗರು ತಲುಪುವರು ಆನಂದದ ಪರಾಕಾಷ್ಟೆಗೆ
ನಾನಾ ದೇಶ ವಿದೇಶಗಳಿಂದ ಬರುವರು ನೋಡಲು
ಬಾನಾಡಿಗಳು ಅರಸಿ ಬರುವವು ಆಶ್ರಯ ಹುಡುಕಿ
ತಾನಾಗಿಯೇ ಬರುವವರ ಕೈಬೀಸಿ ಕರೆಯುತ್ತಿದೆ ಸದಾ
ಅನಾನುಕೂಲವಿಲ್ಲ ಇಲ್ಲಿ ಸಿಗುವುದು ಎಲ್ಲ ಸೌಲಭ್ಯ
ಉದಯದಿ ಕಾಣುವುದು ನಯನ ಮನೋಹರ
ವದನದಲಿ ಮೂಡುವುದು ಅತಿಯಾದ ಉಲ್ಲಾಸ
ಬದುಕಿನ ಪಯಣದಲಿ ನೋಡಬೇಕು ಕಡಲು ಆಗ
ಎದೆಯಲಿ ಒಡಮೂಡಲಿ ಹೃದಯ ವೈಶಾಲ್ಯತೆಯು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment