ಕವನದ ಶೀರ್ಷಿಕೆ
*ತಮಂಧದಿಂದ ಬೆಳಕಿನೆಡೆಗೆ*
ನಾಗರಿಕತೆಯ ಕಾಲದಿಂದಲೂ ಬುದ್ಧಿಯು
ಚುರುಕಾಗಿ ಮಂಗನಿಂದ ಮಾನವನೆಡೆಗೆ
ಸಾಗಿದೆ ಪಯಣ ಆ ಹಾದಿಯಲಿ ಹಿಡಿಯಿತು
ಹಲವು ವರುಷಗಳ ಕಾಲ ಬಾಳ ನೆಲೆಯಡೆಗೆ
ಋಷಿ ಮುನಿಗಳು ಅವಿರತ ಶ್ರಮವಹಿಸಿ ತಾವು
ಕಲಿಸಿಹರು ಸಾವಿರಾರು ಶ್ಲೋಕ ಕಾವ್ಯ ಪುರಾಣ
ಆಗಮ ಶಾಸ್ತ್ರ ಚರಿತ್ರೆ ಅರವತ್ತು ನಾಲ್ಕು ವಿದ್ಯಗಳ
ಜ್ಞಾನ ಧಾರೆಯೆರೆದು ಇದು ಅಲ್ಲವೆ ವಿದ್ಯ ಎಂದ್ರೆ
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ
ಮುಕುತಿ ಎಂದು ಸಾರಿದ ದಾರ್ಶನಿಕರ ಅನುಭವ
ನೆಲೆ ಸೆಲೆಯಾಗಿ ಗೌರವಾದರ್ಶಗಳನು ರೂಢಿಸಿದ
ಹಿರಿಯರ ತಮಂಧದಿಂದ ಬೆಳಕಿನೆಡೆಗಿನ ಪಯಣ
ನಾಡಿಗೆ ಬೆಳಕಾಗಿ ಬುದ್ಧ ಬಸವ ಗಾಂಧಿ ಅಂಬೇಡ್ಕರ
ಬಂದು ಜನ ಜಾಗೃತಿಯ ಮೂಡಿಸಿದರು ಜಾತಿ ಮತ
ಭೇದ ಮರೆತು ಮಾನವೀಯ ಮೌಲ್ಯಗಳ ನೆಲೆಯಲಿ
ಬದುಕಿ ನೀತಿಯ ಮಾರ್ಗ ತೋರಿದ ಮಹನೀಯರು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment