Monday, December 14, 2020

ಜಾಗೃತ ಜಗತ್ತು ಕವನ ೧೩/೧೨/೨೦೨೦

 ಕವನದ ಶೀರ್ಷಿಕೆ

*ಜಾಗೃತ ಜಗತ್ತು*

(ರುಬಾಯಿ ಸಾಹಿತ್ಯ ಪ್ರಕಾರ)


ಕಲಿ ಕಾಲದ ಕಲಿಯುಗ ನಡದಿದೆ ಅಂತಾರ

ಹತ್ತು ವರ್ಷಗಳ ಹಿಂದೆ ಇದ್ದದ್ದು ಆಗ್ಯಾದ ಬ್ಯಾರೆ

ಬದಲಾವಣೆ ಅನ್ನೋದು ಜಗದ ನಿಯಮ ತಿಳಿ

ಅಂದಾರು ಇಷ್ಟು ಬದಲಾದುದ್ದು ಬಹಳ ಅಚ್ಚರಿ


ತಂತ್ರಜ್ಞಾನ ವೇಗವಾಗಿ ಬೆಳೆದು ಇದು ಸಾಧ್ಯವೇ

ಅಂದದ್ದು ಜಾಗತಿಕ ಮಾರುಕಟ್ಟೆಗೆ ಬಂದಿವೆ

ಏನೂ ಅರಿಯದ ಜನ ಹೊಂದಿಕೊಂಡಿರುವರು

ಆಡ್ತಾ ಆಡ್ತಾ ರಾಗ ಎನ್ನುವಂತೆ ತಾನಾಗೇ ಬಂದಿವೆ


ಮೊಬೈಲ್ ಬಳಕೆ ಕಂಪ್ಯೂಟರ್ ಜ್ಞಾನದ ಕಲಿಕೆ

ಸ್ವಲ್ಪ ಹೊತ್ತು ಹಾಗೆಯೇ ಮಾಡಿಹರು ಬಳಕೆ

ಅಂಗೈಯಲ್ಲಿ ಹಿಡಿದು ಇಡೀ ಜಗವ ನೋಡುವರು

ಹಳ್ಳಿ ಪಟ್ಟಣಗಳ ಐಕಳು ಸೇರಿ ಮಾಡಿಹರು ಬಳಕೆ


ಕ್ಷಣ ಮಾತ್ರದಲ್ಲಿ ತಲುಪುತ್ತದೆ ಮಾಹಿತಿ ಜ್ಞಾನ

ವ್ಯಾಟ್ಸಾಪ್ ಫೇಸ್ ಬುಕ್ ಕೊಟ್ಟಿವೆ ಆಹ್ವಾನ

ಪತ್ರಿಕೆ ಪುಸ್ತಕ ಅಂತರ್ ಜಾಲದಲ್ಲಿ ಕುಟುಕುವರು

ಜಗತ್ತಿನ ಜನರನ್ನು ಜಾಗೃತರನ್ನಾಗಿಸಿದೆ ತಂತ್ರಜ್ಞಾನ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


No comments:

Post a Comment

Videos