Monday, December 14, 2020

ವೇದನೆ ಕವನ ೧೪/೧೨/೨೦೨೦

 ಕವನದ ಶೀರ್ಷಿಕೆ

*ವೇದನೆ*

(ಅಂತ್ಯ ಪ್ರಾಸ*


ಪ್ರೀತಿಯಲಿ ಸೋತವರು ಅನುಭವಿಸಿಹರು

ಸಂಸಾರದ ಜಂಜಾಟದಲಿ ಬೇಸರವಾದವರು

ತೊಂದರೆಗಗಳು ಬಂದು ಸಾಕು ಸಾಕಾದವರು

ಕ್ಷುಲ್ಲಕ ವಿಷಯಕ್ಕೆ ಬೇಗ ಕೋಪಗೊಳ್ಳುವವರು


ಬೇರೆಯವರ ನೋಡಿ ನಾನು ಆಗಾಲಿಲ್ಲವೆಂದವರು

ಅತಿಯಾದ ಆಸೆ ಇಟ್ಟುಕೊಂಡು ಹೀಡೇರದವರು

ಪರಸ್ತ್ರೀಯರ ನೋಡಿ ಮನದಲ್ಲೇ ಕೊರಗುವವರು

ತಮ್ಮವರ ಸಂಬಂಧಗಳು ಸರಿಯಾಗಿ ಇಲ್ಲದವರು


ಹೆಂಡತಿಯು ತನ್ನ ಅಂಕೆಗೆ ಸಿಗಲಾರಳು ಎಂದು

ಮಕ್ಕಳು ಒಳ್ಳೆಯ ದಾರಿಯಲ್ಲಿ ಸಾಗಲಾರರೆಂದು

ವ್ಯಾಪಾರದಲ್ಲಿ ನಾವಂದುಕೊಂಡಂತೆ ಆಗಿಲ್ಲವೆಂದು

ರೋಗ ಬಂದು ಹಾಸಿಗೆ ಹಿಡಿದು ಭಾರವಾದೆನೆಂದು


ಆತ್ಮೀಯ ಗೆಳೆಯ ಗೆಳತಿಯರು ಮಾತು ಆಡದಿದ್ದಾಗ

ತನ್ನ ಮೇಲಾಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದಾಗ

ಮುಪ್ಪಿನ ಕಾಲದಲ್ಲಿ ಮಕ್ಕಳು ನೋಡಿಕೊಳ್ಳದಿದ್ದಾಗ

ವೇದನೆ ಅನ್ನೋದು ಯಾರನ್ನು ಬಿಟ್ಟಿಲ್ಲವೇ ಜಗದಾಗ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



No comments:

Post a Comment

Videos