Saturday, December 19, 2020

ವಿಶ್ವಪ್ರೇಮ ಕವನ ೦೩/೧೧/೨೦೧೮

 ಸ್ಪರ್ಧೆಗೆ,


ಕವನದ ಶೀರ್ಷಿಕೆ : “ವಿಶ್ವಪ್ರೇಮ”


ಜಗದಲಿ ಮೂಡುತಿದೆ ಅಭದ್ರತೆಯನು

ಮನೆಯಿಂದ ಹೊರನಡೆದರೆ ಮರಳುವೆನೊ

ಎಂಬ ಭಯದಿ ಹೆಣ್ಣುಮಗಳು ಕಾತರಿಸುವಳು

ಹೆಚ್ಚುತ್ತಿದೆ ದ್ವೇಷ ಅಸೂಯಯ ಜ್ವಾಲೆಯನು


ಜಾತಿಯತೆಯು ತಿಳಿದ ಜಾಣರಿಂದಲೆ ಹೆಚ್ಚುತಿದೆ

ಕೋಮು-ಗಲಭೆಗಳ ಮೂಲ ಬೆಳೆಯುತಿದೆ

ನಮ್ಮ ದೇಶದ ಅಧಿಕಾರಶಾಹಿ ಮೂಲದಿ

ದಬ್ಬಾಳಿಕೆ ಮಿತಿಮೀರುತಿದೆ ಧನಿಕರಿಂದ


ಸತ್ಯ ಸಂಧತೆಗೆ ಬೆಲೆಯಿಲ್ಲದಾಗಿದೆ

ಕಳ್ಳಕಾಕರ,ಮೋಸ-ವಂಚಕರ ಮದ

ಅತ್ಯಾಚಾರಿಗಳ ಹುಟ್ಟಡಗಿಸಬೇಕಾಗಿದೆ

ದೇಶದ ಶಾಂತಿಗೆ ಭಂಗತರುವವರ ಹರಣವಾಗಬೇಕಾಗಿದೆ


ರಾಷ್ಟ್ರದ ರಕ್ಷಣೆಗೆ ಪಣತೊಡುವಂತಾಗಲು

ಏಕತೆ-ಐಕ್ಯತೆ ಸಾಮರಸ್ಯದಿ ಬದುಕಲು

ಸತ್ಯ,ಮಾನ ಪ್ರಾಣ ಜ್ಯಾತ್ಯಾತೀತತೆ ಮೂಡಲು

ಅನುರಾಗ ಅರಳಿ ಭ್ರಾತೃತ್ವ ಬೆಳಗಲು

ನಿಷ್ಕಲ್ಮಷವಾದ ವಿಶ್ವಪ್ರೇಮ ಎಲ್ಲರಲಿ ಅರಳಲಿ.


ಇಂತಿ,

ಶರಣಬಸಪ್ಪ ಎಂ ಗುಳೇದ



No comments:

Post a Comment

Videos