*ಆಧುನಿಕ ವಚನಗಳು*
ಕೆಲರು ನ್ಯಾಯ ಅನ್ಯಾವನು ಅರಿಯರು ನೋಡಯ್ಯ
ಕೆಲರು ಸತ್ಯ ಅಸತ್ಯವನ್ನು ಲೆಕ್ಕಿಸದೆ ನುಡಿವರಯ್ಯ
ಕೆಲರು ಹಿಂಸೆ ಅಹಿಂಸೆಯನು ಗಣಿಸದೆ ಆಚರಿಸುವರಯ್ಯ
ಕೆಲರು ಮೋಸ ವಂಚನೆಯ ಜಾಲ ಸುಳಿಗೆ ಸಿಕ್ಕಿಸುವರಯ್ಯ
ಕಾಲನ ಹೆಗಲೇರಿ ಕುಳಿತವರಂತೆ ಆಡುವವರಿಗೆ ಗಂಟೆ ಕಟ್ಟುವವರಾರಯ್ಯ
ಗೂಳಿ ಬಸವ ಇಂತವರನು ಒಳ್ಳೆ ಮಾರ್ಗದಿ ನಡೆಸಯ್ಯ
ರಚನೆ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment