ಕವನದ ಶೀರ್ಷಿಕೆ
"ನೇತಾಜಿ ಎಂಬ ಕ್ರಾಂತಿ ಸಿಂಹ"
ಭಾರತಾಂಬೆಯ ವೀರ ಪುತ್ರ ದೇಶಕ್ಕಾಗಿ
ಪ್ರಾಣದ ಹಂಗು ತೊರೆದು ನಿಂತಿಹನು
ಆಂಗ್ಲರ ಗುಲಾಮಗಿರಿಗೆ ಸೆಡ್ಡು ಹೊಡೆದು
ಕ್ರಾಂತಿಯ ಕಹಳೆ ಮೊಳಗಿಸಿ ಸೈನ್ಯ ಕಟ್ಟಿ
ಯುವಕರ ಮನಸ್ಸಲ್ಲಿ ಸ್ವಾತಂತ್ರ್ಯ ಕನಸ ಬಿತ್ತಿ
ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ
ಕೊಡಿಸುವೆ ಎಂದು ಹೇಳುತ ಸಿದ್ಧಗೊಳಿಹನು
ಸೈನ್ಯವು ನಡುಕ ಹುಟ್ಟಿಸಿದೆ ಆಂಗ್ಲ ಅಧಿಕಾರಿಗಳಿಗೆ
ಗಲ್ಲಿಗೇರುವ ಧೀರನು ಕೂಗಿಹನು ವಂದೇ
ಮಾತರಂ ಅನ್ನೋ ಮಂತ್ರ ಒಂದೇ ಸಮನೆ
ತಾಯಿ ತಾಯ್ನಾಡಿಗೆ ಅರ್ಪಿಸಿಹರು ಪ್ರಾಣವ
ರವಿಯ ತೇಜಸ್ಸು ಹೊತ್ತಿಹರು ಎದೆಯಲ್ಲಿ
ಸತ್ಯ,ಶಾಂತಿ,ಅಹಿಂಸೆ,ತ್ಯಾಗ,ಬಲಿದಾನ ಮಾಡಿ
ಪಡೆಯುವೆವು ಸ್ವಾತಂತ್ರ್ಯ ಅನ್ನೋ ಭ್ರಮೆ ಬಿಟ್ಟು
ಧೈರ್ಯದಿ ಮುನ್ನುಗ್ಗಿ ಹೋರಾಡಿ ಆಂಗ್ಲ ಹೇಡಿಗಳ
ರುಂಡ ಚಂಡಾಡಿ ಪಡೆಯಲು ಸದಾ ಆತೋರೆದರು
ಕ್ರಾಂತಿ ಕಲಿಗಳನು ಸೇರಿಸಿ ದಿಟ್ಟತನದಿ ಹೋರಾಡುವ
ಸ್ವಾತಂತ್ರ್ಯ ಕಿಚ್ಚು ಹಚ್ಚುವ ಹುಚ್ಚು ತುಂಬಿದರು ಜನಕ್ಕೆ
ಆಂಗ್ಲರ ವಿರುದ್ಧ ಹೋರಾಡುವ ಆತ್ಮ ವಿಶ್ವಾಸ ತುಂಬಿ
ನಾಂದಿ ಹಾಡಿಹರು ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment