ಕವನದ ಶೀರ್ಷಿಕೆ
"ಬರಹಗಾರರ ಬಳಗದ ಹೆಮ್ಮೆ"
ಕರುನಾಡ ಕವಿ ಪುಂಗವರನು ಒಗ್ಗೂಡಿಸಿ
ಕನ್ನಡಮ್ಮನ ನುಡಿ ಸೇವೆಗೆ ಹಚ್ಚಿಹದು
ಕವನಗಳ ಬರೆಯುತಿಹರು ಹಲವು ಜನ
ಕತೆ ಕವನಗಳ ಹೊತ್ತಿಗೆ ಬರುತಿಹವು ಕೆಲವು
ಟಂಕ,ಅದ್ವಿಜೋ,ಅಲಂಕಾರಿಕ,ಪ್ರಾಸ, ಹಾಯ್ಕು
ಷಟ್ಪದಿ ಹೀಗೆ ಸಾಹಿತ್ಯ ಪ್ರಕಾರಗಳನು ಕಲಿಯಬೇಕು
ಅನುಭಾವದಿಂದ ಅನುಭವ ಗಳಿಸುತಿಹೆವು ನಾವು
ಬೆಳಗಿನಿಂದ ಸಂಜೆಯವರೆಗೆ ಬರೆಯಬೇಕು ಒಮ್ಮೆ
ಸಾಹಿತ್ಯ ದಿಗ್ಗಜರು ಸಲಹೆ ನೀಡುವರು ಖುಷಿಯಲಿ
ನಾವು ಅವರಂತಾಗಲು ಹಂಬಲಿಸಿ ಬರೆಯಬೇಕು
ಕನ್ನಡ ನಾಡು ನುಡಿ ನೆಲ ಜಲ ವೇಷ ಭಾಷೆ ಸಂಸ್ಕೃತಿ
ಪ್ರಕೃತಿ ಸೌಂದರ್ಯ ಮಾನವೀಯ ಮೌಲ್ಯಗಳ ರಚನೆ
ಸಂಬಂಧಗಳೇ ಅಳಿಸುತ್ತಿರುವ ಕಾಲದಲ್ಲಿ ನಾವೆಲ್ಲರೂ
ಒಂದಾಗಿ ತಾಯಿ ಭುವನೇಶ್ವರಿ ದೇವಿ ಉತ್ಸವ ಜಾತ್ರೆ
ಮಾಡಿ ಹುರಿದುಂಬಿಸಿ ಪ್ರರೇಪಿಸುವರು ನಲ್ಮೆಯ ಗುರು
ಮಿತ್ರರು ಹಿರಿ-ಕಿರಿಯರ ಬೆಳೆಸೋದು ಬಳಗದ ಹೆಮ್ಮೆ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment