ಕವನದ ಶೀರ್ಷಿಕೆ
"ನಾದಮಯ ಈ ಲೋಕ"
ಬ್ರಹ್ಮಾಂಡದಲಿ ಸಂಗೀತ ಸಾಧನಗಳನೇಕ
ಮನಸೂರೆಗೊಳ್ಳುವವು ಮನುಜರೆಲ್ಲರಲಿ
ಪ್ರಾಣಿ ಪಕ್ಷಿಗಳೂ ತಲೆದೂಗುವವು ನಾದಕ್ಕೆ
ನಾದಮಯ ಈ ಲೋಕವೆಲ್ಲ ಮರೆಯದಿರು
ಬಾಜಾ ಭಜಂತ್ರಿ ಶಹನಾಯಿ ಪಿಟಿಲು ಕೊಳಲು
ತಂಬೂರಿ ಪೇಟಿ ತಾಳ ತಬಲ ಮದ್ದಲೆ ಗೆಜ್ಜೆ
ಪುಂಗಿ ಪೀಪಿ ಡೋಲು ತಮಟೆ ನಗಾರಿಯು
ಡಮರುಗ ಸದ್ದು ಪರಮಾತ್ಮನಿಗೆ ಪ್ರಿಯವು
ಕೊಳಲಿಡಿದು ಶ್ರೀ ಕೃಷ್ಣ ನುಡಿಸಲು ಹಸುಗಳು
ಬರುವವು ದೇವಲೋಕದ ಇಂದ್ರಾದಿ ದೇವಾನು
ದೇವತೆ ರಂಭೆ ಊರ್ವಶಿ ಮೇನಕೆರ ಅಚ್ಚುಮೆಚ್ಚು
ವೀಣಾ ಪಾಣಿ ಸರಸ್ವತಿ ತಂಬೂರಿಯ ನಾರದರು
ಪಿಟಿಲು ಚೌಡಯ್ಯ ಶಹನಾಯಿ ಅಪ್ಪಣ್ಣನವರು
ಪಂಡೀತ ಪುಟ್ಟರಾಜ ಗವಾಯಿಗಳು ಜೀವತುಂಬಿ
ಹಾಡುಗಳ ಹಾಡಿ ಶ್ರೇಷ್ಠ ಮಹನಿಯರು ಸಂಗೀತ
ಸರಸ್ವತಿ ಶಾರದೆಯ ಕೃಪಾಕಟಾಕ್ಷದಿಂದ ಮೆರೆದರು
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment