ಕವನದ ಶೀರ್ಷಿಕೆ
"ಅನಿವಾರ್ಯತೆ ಕಾಡಿದಾಗ"
ಬದುಕಿನ ಭವಣೆಗೆ ಜೋತುಬಿದ್ದು ಕಷ್ಟಗಳ
ಬಲೆಗೆ ಸಿಲುಕಿ ಒದ್ದಾಡಿ ದಡ ಸೇರುವ ತವಕ
ಮನದಲ್ಲಿದ್ದರೂ ಸುಖಾಸುಮ್ಮನೆ ಬರುವ
ಸಂಪತ್ತಿಗೆ ಆಸೆ ಪಟ್ಟು ಒಲ್ಲದ ಕಾರ್ಯಕ್ಕೆ ಒಗ್ಗುವ
ಸ್ವತಂತ್ರನಾದ ಮನುಜ ಸ್ವೇಚ್ಛೆಯಿಂದ ಬಾಳೋ
ಕನಸ ಕಂಡು ಕಲ್ಪನೆಗಳ ಲೋಕದಲ್ಲಿ ವಿಹರಿಸಿ
ಆಸೆಗಳು ಅನೇಕ ಹೀಡೇರದಾದಾಗ ಕೊನೆಗೆ ತಾನು
ಇದ್ದುದ್ದರಲ್ಲಿ ಹೊಂದಿಕೊಂಡು ಸಾಗಿವನು ಜೀವನ
ಸಂಬಂಧಗಳು ಸಡೀಲಗೊಂಡು ಅಳಿಸಿ ಹಾಕಿ
ಬೇಡವೇ ಬೇಡ ಇವರ ಸಹವಾಸ ಎಂದವರು
ಯಾರದೋ ಮಾತಿಗೆ ಕಟ್ಟುಬಿದ್ದು ಅನಿವಾರ್ಯತೆ ಕಾಡಿದಾಗ ಮೆತ್ತೆ ಜೊತೆಗೂಡಿ ಬಾಳುವರು ಒಂದಾಗಿ
ಕಷ್ಟಗಳ ಸುರಿ ಮಳೆಯೇ ಸುರಿಯಲಿ ಅಂಜದಿರು
ಅಳುಕದಿರು ನೋವು ನಲಿವುಗಳು ಕ್ಷಣಕಾಲ ತಿಳಿ
ನೀನು ಅನುಭವಿಸಿದ ದುಃಖ ದುಮ್ಮಾನಗಳ ಮರೆತು
ಮುಂದಿಹದು ಬಹು ಸ್ವಾರಸ್ಯಕರ ಗಳಿಗೆ ನಿನಗಾಗಿ ತಿಳಿ
ಕಾಣದ ಆಸೆಗಳೆಂಬ ಮೂಟೆಗಳ ಹೊತ್ತು ತಿರುಗದೆ
ತನ್ನ ಯೋಗ್ಯತೆಯ ಪರಿಮಿತಿಯನು ಅರಿತು ನಡೆದರೆ
ಸುಖ ಸಂಸಾರಕ್ಕೆ ರಹದಾರಿ ಎಂಬ ಸತ್ಯ ತಿಳಿದುಕೊಂಡು
ಸ್ವಚ್ಛ ಮನದಿ ಬಿಚ್ಚು ಭಾವದಿ ಬಾಳಿ ತೋರಬಾರದೇ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment