Monday, January 18, 2021

ಪ್ರಸಾದ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಪ್ರಸಾದ


                                   ೧

ದೇಗುಲದಲ್ಲಿ ತಿಂದುಂಬರೆ ಪ್ರಸಾದ ಎನ್ನುವರಯ್ಯ

ಮನೆಯಲ್ಲಿ ಕುಳಿತುಂಡರೆ ಊಟ ಎಂಬುವರಯ್ಯ

ಅದೇ ಪ್ರೀತಿ ಇಲ್ಲದವರಿಗೆ ಬಡಿಸಲು ಕೂಳೆನ್ನುವರ

ನಾನಾ ರೀತಿ ಹೊಟ್ಟೆ ತುಂಬಿಸುವದು ಗೂಳಿ ಬಸವ 


                     ‌     ‌‌ ೨

ಭಕ್ತಿ ಇತ್ತು ಪ್ರಸಾದವ ಸೇವಿಸಯ್ಯ ಅದು ಶಕ್ತಿ 

ಉಲ್ಲಾಸವ ನೀಡುವುದಯ್ಯ ಅನ್ನದ ಅಗುಳಿಗೆ 

ಸೊಕ್ಕು ತೋರದಿರು ರೊಕ್ಕ ಎ‌ಷ್ಟಿದ್ದರೇನು ಅದು

ಎಂದಿಗೂ ರೊಟ್ಟಿಯಾಗದು ನೋಡ ಗೂಳಿ ಬಸವ


ರಚನೆ

ಯಗುಮಾಶ 

ಶ್ರೀ ಶರಣಬಸ್ಸಪ್ಪ ಎಂ ಗುಳೇದ

No comments:

Post a Comment

Videos