ಚುಟುಕು ಕವನಗಳು
ವಿಷಯ : ಅನ್ನದಾತ
೧
ದೇಶಕ್ಕೆ ಅನ್ನ ನೀಡೋ ರೈತನ ಬೆವರಿನ
ದುಡಿಮೆಗೆ ಬೆಲೆ ಇಲ್ಲದಂತಾಗಿದೆ ತಾನು
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ
ಋಣ ಭಾರದಲಿ ಕಂಗಾಲಾಗಿ ಅಂಗಲಾಚಿ
ಬೇಡಿದರೂ ಸಿಗದಾಗಿದೆ ಸಾಲವೇ ಶೂಲವಾಗಿ
ಕಾಡಿದಾಗ ತೀರಿಸಲಾಗದೆ ಮಡಿವನು ನಿರಾಶನಾಗಿ
೨
ಬದುಕಿನಲಿ ಕಷ್ಟ ಕೋಟಲೆಗಳು ನೂರಾರು
ನಂಬಿದ ಕುಟುಂಬಕ್ಕೆ ಆಸರೆಯಾಗಿ ನಿಂತು
ಕೇಳಿದಕ್ಕೆಲ್ಲ ಹಣ ನೀಡಿ ಬರೀ ಗೈಲಾದಾಗ
ಹುಸಿನಗುವ ಬೀರುವವನು ರೈತ ಕೃಷಿಯ
ನೆಚ್ಚಿ ಖುಷಿಯ ಕಳೆದುಕೊಂಡರು ಬಿಡೆನೆನ್ನುವ
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೆಂದು ನಂಬಿ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment