ಕವನದ ಶೀರ್ಷಿಕೆ
"ಕರುನಾಡ ಕವಿ ಕುವೆಂಪು"
ಕರುನಾಡಿನ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕುಡಿ
ಕುವೆಂಪರು ವಿಶ್ವ ಮಾನವತೆಯ ಸಂದೇಶ ಸಾರಿಹರು
ಕಾವ್ಯ ಪಯಣದ ಕವಲೊಳೆಗೆ ಕೈಯಾಡಿಸಿ ಎಲ್ಲಾ
ಸಾಹಿತ್ಯದಲಿ ಕೃತಿಯ ರಚಿಸಿ ಸೈ ಎನಿಸಿಕೊಂಡವರು
ತಾಯಿಯ ತವರು ಹಿರೇಕೂಡಿಗೆಯಲ್ಲಿ ಜನಿಸಿದರು
ಮರಳಿನ ಮೇಲೆ ಆರಂಭವಾಯಿತು ಅಕ್ಕರ ಬೀಜ
ಮುಂದೆ ಬಿತ್ತಿದ್ದೆಲ್ಲ ಕಾವ್ಯದಾರೆಯಾಗಿ ಹರಿಯಿತು
ಜ್ಞಾನ ಪೀಠದಂತ ಭವ್ಯ ಪ್ರಶಸ್ತಿಗಳ ಸೆಳೆಯುವಂತೆ
ಕಲಿಕೆಯ ವೇಳೆ ಮೂಡಿದವು ಹಲವು ಕಾವ್ಯ ಕವನ
ಮಹಾರಾಜ ಕಾಲೇಜಿನಲ್ಲಿ ಕಲಿತು ತಾ ಕಲಿಸಿದ್ದು
ಕೈಹಿಡಿದ ಹೇಮಾವತಿ ಹೆಗಲಿಗೆ ಹೆಗಲಾಗಿ ನಿಂತು
ನೀಡಿದಳು ಎರಡು ಗಂಡು ಎರಡೆಣ್ಣು ಮಕ್ಕಳನ್ನು
ಮಲೆನಾಡಿನ ರಮ್ಯ ಪ್ರಕೃತಿಯ ಮಡಿಲಲ್ಲಿ ಕವಿಮನೆ,
ಮನಸೆಳೆದುದು ಕವಿಶೈಲ ಒಡಮೂಡಿ ಬಂದವು
ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು,ಬೆರಳ್ಗೆ
ಕೊರಳು, ಶ್ರೀ ರಾಮಾಯಣದರ್ಶನಂ ಮಹಾಕಾವ್ಯಗಳು
ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ನುಡಿ
ವಿಶ್ವಮಾನವ, ವಿಶ್ವ ಚೇತನ ಆಗುವಂತೆ ಮಾಡಿಹದು
ಕೇಂದ್ರ ಸಾಹಿತ್ಯ,ಪದ್ಮಭೂಷಣ, ಪದ್ಮವಿಭೂಷಣ,
ರಾಷ್ಟ್ರ ಕವಿ ಪ್ರಶಸ್ತಿ ಬಂದವು ರಸ ಋಷಿಯ ಸಿರಿಮುಡಿಗೆ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ.
No comments:
Post a Comment