Tuesday, January 12, 2021

ಸಾಹಸ ಗಾಥೆ ಕವನ

 ಕವನದ ಶೀರ್ಷಿಕೆ

"ಸಾಹಸ ಗಾಥೆ"


ವೀರ ಯೋಧರು ರಣರಂಗದಲ್ಲಿ ಅಗಾಧ 

ಪರಾಕ್ರಮದಿ ಹೋರಾಡಿ ಮಡಿವರು ಕೆಲವರು

ಕೈ ಕಾಲುಗಳ ಕಳೆದುಕೊಂಡು ನರಳುತಿರುವರು

ಸಾವು ನೋವುಗಳ ಬೆಲೆ ಅರಿಯದವರು ಇಹರು


ಗುಂಡುಗಳ ಸುರಿಮಳೆಯೇ ಸುರಿದರೂ

ಸರಿಯೇ ಎದೆಯೊಡ್ಡಿ ನಿಲ್ಲುವರು ಅಂಜದೆ

ರುಂಡ ಮುಂಡವ ಕತ್ತರಿಸಿ ಬಿದ್ದರೂ ಕೂಡ

ಲೆಕ್ಕಿಸದೆ ನಿಂತು ಅಮರ ವೀರರಾಗಿಹರು ಪೂರ


ದೇಶದ ಉದ್ದಗಲಕ್ಕೂ ಸಂಚರಿಸಿ ಗಡಿ ಕಾಯೋ ಸೈನಿಕರು ಅನ್ನ ನೀಡೋ ರೈತರು ಕೂಲಿ ನಾಲಿ

ಮಾಡುವ ಕಾರ್ಮಿಕರು ತಮ್ಮ ಕೈ ಕೆಸರಾದರೇ 

ಬಾಯಿ ಮೊಸರು ತತ್ವವನು ನಂಬಿದವರು ತಾವು


ಶತಮಾನಗಳಿಂದ ರಾಜರು ಮಾತ್ರ ಅಧಿಕಾರ 

ದಾಹ ಸಾಮ್ರಾಜ್ಯ ವಿಸ್ತರಣೆ ಪರಾಕ್ರಮ ಪ್ರತಿಷ್ಠೆ

ತೋರಿಸಲು ಶತೃರಾಜರ ಹೊಟ್ಟೆಯ ಬಗೆದಿಹರು

ಮಣ್ಣಲ್ಲಿ ಮಣ್ಣಾಗಿ ಮುಚ್ಚಿ ಹೋಗಿಹರು ತಾವು


ಶಕ್ತಿ ಶಾಲಿ ಹೋರಾಟದ ಕಥಾನಕ ಕಥೆಗಳಲ್ಲಿ

ಲಕ್ಷಾಂತರ ಯೋಧರ ಬಾಹುಗಳ ರಕ್ತ ತರ್ಪಣ 

ಕೊಟ್ಟು ಯೋಧರ ಸಾಹಸ ಗಾಥೆಯ ಬಲ್ಮೆಯಿಂದ

ಇತಿಹಾಸದ ಪುಟಗಳಲ್ಲಿ ನಾಯಕರು ಉಳಿದಿಹರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ



No comments:

Post a Comment

Videos