Tuesday, January 12, 2021

ಸಂಕ್ರಾಂತಿ ಹಬ್ಬದ ಹಿಗ್ಗು ಕವನ

 ಸಿರಿಗನ್ನಡ ಕವನ ಸ್ಪರ್ಧೆ

ಕವನದ ಶೀರ್ಷಿಕೆ

"ಸಂಕ್ರಾಂತಿ ಹಬ್ಬದ ಹಿಗ್ಗು"


ಸಂಕ್ರಾಂತಿಯು ಬರಲು ಪಥ ಬದಲಿಸಿಹನು

ಸೂರ್ಯ ಉತ್ತರಾಯಣದ ಪುಣ್ಯ ಸ್ಪರ್ಶಕ್ಕೆ

ರೈತರೆಲ್ಲರೂ ಹಿಗ್ಗಿಹರು ಕಬ್ಬು ಬೆಲ್ಲವ ತಿಂದು

ಬಂಧು ಬಾಂಧವರೊಂದಿಗೆ ಹಬ್ಬ ಆಚರಿಸುತ


ಜೋಳದ ತೆನೆಯ ಸೀತನೆಯ ರಸ ಸವಿದಿಹರು

ಪರಮ ಪಾವನ ನದಿಯಲ್ಲಿ ಮಿಂದೆದ್ದಿಹರು

ದೈವದ ದರುಶನ ಪಡೆದು ರಕ್ಷೆಯ ಬೇಡಿಹರು

ನರ ನಾಡಿಗೆಲ್ಲ ಒಳಿತನು ತಾವೆಲ್ಲ ಬಯಸಿಹರು


ಸೇಂಗದ ಹೋಳಿಗೆ ಊಟ ಮಾಡಿ ನಾರಿಯರು

ಹೆಮ್ಮರದ ರೆಂಬೆ ಕೊಂಬೆಗೆ ಜೋಕಾಲಿಯ ಕಟ್ಟಿ

ಹೆಂಗೆಳೆಯರ ದಂಡು ಹಂಚಿಕೊಳ್ಳುತಲೇ ಭಾವ

ಬಾನಂಗಳದಲ್ಲಿ ಚಿತ್ತಾರದ ಆಸೆಗಳ ಕಲ್ಪನೆ ಒಡ್ಡಿ


ಸುಗ್ಗಿಯ ಕಾಲ ಬಂದೈತೆಂದು ಸದ್ದು ಮಾಡುತ್ತಾ

ಚಿಕ್ಕವರು ದೊಡ್ಡವರು ಗುಂಪುಕಟ್ಟಿ ಗೆಜ್ಜೆ ಕಟ್ಟಿ

ಹೆಜ್ಜೆ ಆಕಿ ನಾಟ್ಯ ನಟನೆ ಮಾಡಿ ಡೋಲು ತಮಟೆ

ತಾಳ ಮದ್ದಲೆಗೆ ಗತ್ತು ಗಾಂಭೀರ್ಯದಿ ಕುಣಿಯುವರ


ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣವೆಂದು

ಪ್ರೀತಿ ಪ್ರೇಮದ ವಾತ್ಸಲ್ಯ ತೋರುತ ಶಾಂತಿ ಮಂತ್ರವ

ಪಠಿಸುತ ಗುರು ಹಿರಿಯರ ಆಶೀರ್ವಾದವ ಬೇಡುತಲೇ

ಸಂಕ್ರಾಂತಿಯ ಸೊಬಗನು ಸವಿಯುತ ನಲಿದಾಡಿಹರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ










No comments:

Post a Comment

Videos