Monday, January 18, 2021

ಭಕ್ತಿ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : "ಭಕ್ತಿ"


                  ೧

ಅಜ್ಞಾನಿಗೆ ಜ್ಞಾನದ ಬೆಳಕು ಬೇಕು

ಸಿರಿವಂತರಿಗೆ ದಾನ ಗುಣವೇ ಬೇಕು

ಬಡವನಿಗೆ ಸಿರಿತನವೇ ಬೇಕು ಇರ್ವರಿಗೂ

ಭಕ್ತಿ ಇತ್ತು ಸಲಹು ಶ್ರೀ ಗುರು ಗೂಳಿ ಬಸವ


                    ೨

ವ್ಯಾಪಾರಿಯ ಮನ ಮಾರಾಟಕ್ಕೆ ಎಳೆವುದು

ಪೂಜಾರಿಯ ಮನ ತಟ್ಟೆಯ ಹಣಕ್ಕೆ ಎಳೆವುದು

ಭಕ್ತನ ಮನವನ್ನು ಚಂಚಲತೆಯು ಎಳೆವುದನು

ತಡೆದು ದೇವರ ಧ್ಯಾನಕ್ಕೆ ಎಳೆದು ತಾ ಗೂಳಿ ಬಸವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


No comments:

Post a Comment

Videos