ಆಧುನಿಕ ವಚನಗಳು
ವಿಷಯ : "ಭಕ್ತಿ"
೧
ಅಜ್ಞಾನಿಗೆ ಜ್ಞಾನದ ಬೆಳಕು ಬೇಕು
ಸಿರಿವಂತರಿಗೆ ದಾನ ಗುಣವೇ ಬೇಕು
ಬಡವನಿಗೆ ಸಿರಿತನವೇ ಬೇಕು ಇರ್ವರಿಗೂ
ಭಕ್ತಿ ಇತ್ತು ಸಲಹು ಶ್ರೀ ಗುರು ಗೂಳಿ ಬಸವ
೨
ವ್ಯಾಪಾರಿಯ ಮನ ಮಾರಾಟಕ್ಕೆ ಎಳೆವುದು
ಪೂಜಾರಿಯ ಮನ ತಟ್ಟೆಯ ಹಣಕ್ಕೆ ಎಳೆವುದು
ಭಕ್ತನ ಮನವನ್ನು ಚಂಚಲತೆಯು ಎಳೆವುದನು
ತಡೆದು ದೇವರ ಧ್ಯಾನಕ್ಕೆ ಎಳೆದು ತಾ ಗೂಳಿ ಬಸವ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment