Sunday, January 3, 2021

ಮಕ್ಕಳು ಕವನ ೦೧/೦೧/೨೦೨೧

 ಕವನದ ಶೀರ್ಷಿಕೆ

"ಮಕ್ಕಳು"


ಮಕ್ಕಳು ಕಂಡ

ಕನ್ಸು ನನಸಾಗಲು

ಏಕಾಗ್ರತೆಯ

ಓದು ಸತತವಾದ

ಪ್ರಯತ್ನ,ಪರಿಶ್ರಮ


ನಾಳಿನ ಭವ್ಯ

ಪ್ರಜೆಗಳಿಗೆ ನಾವು

ಮಾನವೀಯತೆ

ಅನುಕಂಪ ತುಂಬಲು

ಸತ್ಪ್ರಜೆಯಾಗುವರು


ತಂದೆ ತಾಯಿಯ

ನೀತಿಯ ಮಾತುಗಳು

ಕೇಳಿ ಅವರ

ಸೇವೆ ಮಾಡುವ ಬುದ್ಧಿ

ಸಂಸ್ಕಾರ ಅಗತ್ಯವು


ತಾವು ಪಟ್ಟಣ

ಸೇರಿದ ಪಾಲಕರು

ಮಕ್ಕಳಿಗೆಲ್ಲ

ಸಂಬಂಧಗಳ ಬೆಲೆ

ತಿಳಿಸಬೇಕು ಆಗ


ಯಾರ ಜೊತೆಗೆ

ಹೇಗೆ ನಡೆಯಬೇಕು

ಎಂಬ ಸಾಮಾನ್ಯ

ಜ್ಞಾನ ಬೆಳೆಯುವುದು

ಹಾಗೆ ನಡೆಯುವರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

No comments:

Post a Comment

Videos