ಕವನದ ಶೀರ್ಷಿಕೆ
*ರೈತ ನಮ್ಮ ದೇವರು*
ಪ್ರಜೆಗಳಿಗೆ
ಅನ್ನ ನೀಡೋ ಕಾಯಕ
ಹಿಡಿದ ನೇಗಿಲ
ಯೋಗಿ ನೀನಯ್ಯ ಬೆಳೆ
ಬೆಳೆದು ನೀ ಸಾಕುವೇ
ನಂಬಿದವರ
ಕೈ ಬಿಡದೆ ಬಾಳನು
ಹಸನಾಗಿಸೋ
ವ್ಯಕ್ತಿ ನೀನಯ್ಯ ನಮ್ಮ
ನೆಚ್ಚಿನ ನಾಯಕ ನೀ
ದುಡಿಯೋದನು
ಕಲಿಸಿ ಬುದ್ಧಿ ಹೇಳೋ
ಸೇವಕ ನೀನು
ಕಾಣದೆ ದೇವರಿಗೆ
ಕೈ ಮುಗಿಯೋ ಬದಲು
ಹಗಲು ರಾತ್ರಿ
ಎನ್ನದೆ ಅನುದಿನ
ದುಡಿದು ಅನ್ನ
ನೀಡುವ ನಿಜವಾದ
ರೈತ ನಮ್ಮ ದೇವರು
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment