ಕವನದ ಶೀರ್ಷಿಕೆ
"ನನ್ನ ಓಟು ಹರಾಜಿಗಿಲ್ಲ"
ಚುನಾವಣೆಯಲ್ಲಿ ಹೆಂಡ ಸಾರಾಯಿ ಕುಡ್ಸುತ
ಇಲ್ಲದ ಆಸೆ ಆಮಿಷಗಳ ತೋರಿಸಿ ಹೆಚ್ಚು ಹಣ
ಕೊಟ್ಟವರಿಗೆ ಮತ ನೀಡಲು ನನ್ನ ಓಟು ಹರಾಜಿಗಿಲ್ಲ
ನಿಮ್ಮ ಮುಲಾಜಿಗೆ ಬೀಳಲು ನಾನು ಬಯಸಲ್ಲ
ಈಗ ಓಟು ಆಕಿಸಿಕೊಂಡು ಕಳೆದು ಹೋದವರು
ಐದು ವರ್ಷಗಳ ಕಾಲ ಈಕಡೆ ಸುಳಿಯದವರು
ಹಣ ಚೆಲ್ಲಾಡಿದರೆ ಯಾರು ಬೇಕಾದರೂ ಗೆಲ್ಲುವೆವು
ಎಂದು ತಿಳಿದವರಿಗೆ ಬುದ್ಧಿ ಕಲಿಸಿ ಮನೆಗೆ ಕಳಿಸಬೇಕು
ನಾನು ನಮಗಾಗಿ ದುಡಿಯುವರಿಗೆ ಹಾಕುವೆ ಮತ
ಗ್ರಾಮಗಳ ಉದ್ದಾರಕ್ಕೆ ಶ್ರಮಿಸುವರಿಗೆ ನನ್ನ ಮತ
ಕಷ್ಟ ಸುಖಗಳಲ್ಲಿ ಜೊತೆಯಾಗಿರುವವರಿಗೆ ನನ್ನ ಮತ
ಜನತೆಗೆ ಗೌರವನೀಡಿ ಬೆರೆಯುವವರಿಗೆ ನನ್ನ ಮತ
ಬದಲಾವಣೆ ಬಯಸಿ ಅಭಿವೃದ್ಧಿ ಮಾಡುವವರನ್ನು
ಜನಹಿತ ಕಾರ್ಯ ಮಾಡುತ ಜನಕ್ಕೆ ಇಷ್ಟವಾದವರನ್ನು
ಜಾತಿ ಮತ ಪಂಥ ಎಂಬ ಕಟ್ಟುಪಾಡುಗಳಿಗೆ ಬೀಳದೆ
ಕೆಟ್ಟ ವ್ಯಕ್ತಿಗಳ ದಿಕ್ಕರಿಸಿ ಒಳ್ಳೆಯವರನ್ನು ಗೆಲ್ಲಿಸೋಣ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment