Sunday, January 3, 2021

ವಿಸ್ಮಯ ಪ್ರಕೃತಿ ಕವನ ೦೨/೦೧/೨೦೨೧

 ಕವನದ ಶೀರ್ಷಿಕೆ

*"ವಿಸ್ಮಯ ಪ್ರಕೃತಿ"*


ಪ್ರಕೃತಿಯಲ್ಲಿ

ಗಿಡಮರಗಳನ್ನು

ನೆಟ್ಟವರಾರು

ಧುಮ್ಮಿಕ್ಕುವ ನದಿಗೆ

ನೀರು ಬಿಟ್ಟವರಾರು?


ಕ್ರೀಮಿ ಕೀಟಕ್ಕೆ

ಆಹಾರ ನೀಡುವಂತ

ಕಾಣದ ಕೈಯ

ನೋಡಿದವರು ಇಲ್ಲ

ಕೇಳಿದವರೂ ಇಲ್ಲ ..


ಸೂರ್ಯ ಚಂದ್ರರ

ನಡುವಿನ ಅಂತರ

ಕೊಟ್ಟು ಬೆಳಕು

ನೀಡುವ ಆದೇಶವ

ಕೊಟ್ಟವರಾರು ಒಮ್ಮೆ


ಯೋಚಿಸಿದರೆ

ಪ್ರಕೃತಿಯ ರಮ್ಯತೆ

ಅರಿವಾಗ್ತದೆ

ಆ ದೇವರು ಎಲ್ಲವೂ

ಒದಗಿಸಿರುವನು


ಮಾನವ ಮಾತ್ರ

ತನಗೆ ಇಷ್ಟ ಬಂದ

ಹಾಗೆ ಗಾಳಿಯ

ನೀಡುವ ಮರಗಳ

ಕಡಿದು ಹಾಕುವನು


ತನ್ನ ಬುಡಕ್ಕೆ

ತಾನೆ ಕೊಡಲಿ ಹಾಕಿ

ವಿನಾಶದೆಡೆ

ಪಯಣ ಬೆಳೆಸಿಹ

ಎಚ್ಚತ್ತರೆ ಉಳಿವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*









No comments:

Post a Comment

Videos