ಕವನದ ಶೀರ್ಷಿಕೆ
*ಭೂ ಒಡಲಾಳ*
ಭೂ ಜೀವ ರಾಶಿ
ಒಡಲಲ್ಲಿ ತುಂಬಿದ
ಚಮತ್ಕಾರವ
ಎಂತಹದು ಅದುವೇ
ಪರಮಾಶ್ಚರ್ಯ ಮಾಯೆ
ಕಡಲು ಬೆಟ್ಟ
ಗುಡ್ಡ ಪರ್ವತಗಳ
ಶ್ರೇಣಿ ಇರಲು
ಎಂಬತ್ತನಾಲ್ಕು ಲಕ್ಷ
ಕೋಟಿ ಪ್ರಬೇಧಗಳು
ಅದರಲ್ಲಿಯೂ
ಈ ನರ ಮಾನವನ
ಕೃತಕ ಸೃಷ್ಟಿ
ಸಮಷ್ಟಿಗೆ ಸಿಗದು
ಧುತ್ತೆಂದು ಬರುವವು
ಗಾಡಿ ಮೋಟಾರು
ಅದು ಮೀರಿಯೂ ತಾನು
ತನ್ನಂತೆ ಇರುವ
ರೋಬೋಟ್ಗಳ ಬುದ್ಧಿಯ
ಕ್ಷಮತೆಯ ಕಗ್ಗಂಟು
ಕೃಷಿಯ ಯಂತ್ರ,
ಸಲಕರಣೆಗಳು
ಆಸ್ಪತ್ರೆಯಲ್ಲಿ
ಬಳಸುವಂತ ಶಸ್ತ್ರ
ಚಿಕಿತ್ಸೆಯ ಸಾಮಾನು
ಕೈಗಾರಿಕೆಗೆ
ಬೇಕಾಗುವಂತ ಕಚ್ಚಾ
ವಸ್ತು,ಕಂಪನಿ
ಜನ ನಗರಗಳು
ಭೂ ಒಡಲು ತುಂಬಿವೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment