ಕವನದ ಶೀರ್ಷಿಕೆ
"ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ"
ಬನ್ನಿ! ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ
ವಿದ್ಯೆಯ ಕಲಿತು ನಾವೆಲ್ಲ ಜಾಣರಾಗೋಣ!
ಹೊಸ ವರ್ಷದ ಹೊಸ ತರಗತಿಯ ಪಾಠಗಳ
ಓದುತ್ತ ನವೀನ ವಿಷಯ ಅರಿತು ಬೆಳೆಯೋಣ
ಭಾರತಾಂಬೆಯ ಹೆಮ್ಮೆಯ ವೀರರ ಸಾಹಸ
ಗಾಥೆಗಳ ಕೇಳುತ ಅವರಂತಾಗಲು ಮನಸ್ಸು
ಮಾಡೋಣ ವಿಜ್ಞಾನಿಗಳ ಸಂಶೋಧನೆ ತಿಳಿದು
ನಾವೂ ಮಾಡಿ ಅನುಭವ ಪಡೆದರೆ ಉಲ್ಲಾಸ
ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯದ
ಕುರಿತು ಕವಿ ನಾಣ್ನುಡಿ ಕೇಳಿ ನಲಿಯುತ ಅದೇ
ತರ ನಾವು ಬರೆಯಲು ಆರಂಭಿಸಿ ಹೆಚ್ಚಿಸುವೆವು
ಸಾಹಿತ್ಯ, ಶಾರದೆಯ ವರವ ಬೇಡುತ ಎಂದೆಂದು
ಗಣಿತದ ಸೂತ್ರಗಳ ಮೂಲಕ ಸೊಗಸಾಗಿ ಕಲಿತು
ಪ್ರಮೇಯಗಳ ಅರಗಿಸಿಕೊಂಡು ಮುನ್ನಡೆಯುತ
ಸಾಗಲು ಸರಳ ಸುಲಲಿತವಾಗಿ ಬಿಡುವುದು ನೊಡು
ಮೊಗ್ಗಿಗಳನು ಕಲಿತರೆ ಗುಣಿಸಲು ಸುಲಭದ ಮಾತು
ಆಂಗ್ಲ,ಹಿಂದಿ ಭಾಷೆಯ ಜ್ಞಾನ ಪ್ರಚಲಿತಕೆ ಬೇಕು
ಆಳ ಸಾರವ ತಿಳಿಯಲು ಅವಶ್ಯ ಉನ್ನತ ಶಿಕ್ಷಣ ಕಲಿಕೆ
ತಂತ್ರಜ್ಞಾನದ ತರಬೇತಿ ಪಡೆದು ಆವಿಷ್ಕಾರ ಬಗ್ಗೆ
ಮಾಹಿತಿ ಹೊಂದಿ ಅರ್ಥಪೂರ್ಣ ಬದುಕು ಸಾಗಬೇಕು
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಯರಗೋಳ ತಾ.ಜಿ. ಯಾದಗಿರಿ.
No comments:
Post a Comment