ಕವನದ ಶೀರ್ಷಿಕೆ
"ನಾಡ ದೊರೆಗೆ ಆತ್ಮೀಯ ಸ್ವಾಗತ"
ಜನ ನಾಯಕ ನಾಡ ದೊರೆಯು ಬರುವನು
ಗಿರಿನಾಡಿಗೆ ಜಿಲ್ಲೆಯ ಕಿರೀಟ ತೊಡಿಸಿದವರು
ಇಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯ
ನೀಡಿ ಆರೋಗ್ಯ ದೇಗುಲದ ಉದ್ಘಾಟನೆ ಮಾಡಿ
ಹೊಸ ವರ್ಷದ ಶುಭ ಗಳಿಗೆಯಲ್ಲಿ ಹೊಸದಾದ
ಯೋಜನೆ ಜನರಿಗೆ ಅರುಹಿ ಮೆಚ್ಚುಗೆ ಪಡೆವರು
ತಮ್ಮೊಂದಿಗೆ ಸಚಿವರ ದಂಡು ಕಾರ್ಯಕರ್ತರು ರಾಜಕೀಯ ಪಕ್ಷಗಳ ಮುಖಂಡರು ಬರುವರು
ಹೊಸದಾಗಿ ಪಂಚಾಯಿತಿಗೆ ಆರಿಸಿ ಬಂದಂತ
ಸದಸ್ಯರು ತಮ್ಮನ್ನು ನಾಡ ದೊರೆಯು ಬಂದು
ಸನ್ಮಾನಿಸುವರು ಎಂಬ ಸಣ್ಣ ಆಸೆಯು ಮನದಲಿ
ಹೊತ್ತು ಗಿರಿ ನಗರಕ್ಕೆ ನವನವೀನ ಪಿತಾಂಬರಗಳ
ಧರಿಸಿ ತಮ್ಮ ಜನ ಬೆಂಬಲಿಗರೊಂದಿಗೆ ಹೋಗುವರು
ದೊರೆಯು ಬರುವ ದಾರಿಯುದ್ದಕ್ಕೂ ತಮ್ಮ ದೊಡ್ಡ
ದೊಡ್ಡ ಕಟೌಟ್ ಗಳ ಅಲಂಕಾರ ಮಾಡಿ ಭೇಷ್
ಎನಿಸಿಕೊಂಬರು ಸ್ಥಳೀಯ ಪ್ರಮುಖ ಮುಖಂಡರು
ಸರ್ವರಿಗೂ ಹಾರ್ಧಿಕ ಶುಭಾಶಯಗಳು ಕೋರುವೆವು
ಎಲ್ಲರ ಅಭಿಮತದಂತೆ ಅಭಿವೃದ್ಧಿ ಕಾರ್ಯಗಳಿಗಿಂದು
ಚಾಲನೆ ನೀಡಲು ಬರುತ್ತಿರುವ ಮಾನ್ಯ ಮುಖ್ಯಮಂತ್ರಿ,
ಸಚಿವರು, ಶಾಸಕರಿಗೆ ಆತ್ಮೀಯ ಸ್ವಾಗತ ಕೋರುವೆವು
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment