Tuesday, January 5, 2021

ಜೋಳದೊಲವ ನೋಡಿರಣ್ಣ ಕವನ ೦೫/೦೧/೨೦೨೧

 ಕವನದ ಶೀರ್ಷಿಕೆ

*"ಜೋಳದೊಲವ ನೋಡಿರಣ್ಣ"*


ರೈತನೋರ್ವ ಭುವಿಯ ಹುತ್ತಿ ಬೆಳೆಯ ತೆಗೆದು

ಅನ್ನವ ನೀಡುವ ಯೋಗಿಯು ತಾನಾಗಿರುವನು

ಉತ್ತಿರಿ ನೀವು ಬಿತ್ತಿರಿ ನಾ ಬರೋದಿದ್ರೆ ನೀವು ಸತ್ರಿ

ಎನ್ನೋ ಗಾದೆಯಂತೆ ಮಳೆ ನೋಡಿ ಬಿತ್ತುವನು


ಭುವಿಯು ಭಿರಿಯಲು ಮಳೆ ಬರಲು ಬೆಳೆಯು

ತಾನು ತಾನಾಗೆ ಮೊಳಕೆಯೊಡೆದು ಚಿಗುರಿಕೊಂಡು

ಬಂದೆ ಬರುವುದು ಅದರೊಂದಿಗೆ ಕಳೆ ಬರುವುದು

ಊಳುವ ಯೋಗಿಯ ನೋಡಿ ನಗುವುದು ಕಳೆ


ಮನಸೆಳೆಯುವ ಮಡದಿ ಜೊತೆಗಿರಲು ಹಾಯಾಗಿ

ಬಾಳುವ ಮನುಜನಂತೆ ಸಮಯಕ್ಕೆ ಸರಿಯಾಗಿ

ಎಡೆಯೊಡೆದು ಸ್ವಲ್ಪ ನೀರು ಕೊಡಲು ಕುಣಿಕುಣಿದು

ಬರುವುದು ಬೆಳೆಯು ಮನುಜನ ಎತ್ತರಕ್ಕೆ ಬೆಳೆದು


ಜೋಳದ ತೆನೆಯು ಮುತ್ತು ರತ್ನದಂತೆ ಕಾಣುತ್ತಿರಲು

ಹಕ್ಕಿಗಳ ಹಿಂಡು ಚಿಲಿಪಿಲಿ ಕಲರವ ಗೈಯುತ್ತ ಬಂದು

ಎಳೆಯ ಕಾಳುಗಳ ತಿಂದು ರಸವ ಕುಡಿದು ಸೀತನೆಯ

ಹಾಳು ಮಾಡುತ್ತಿರಲು ರೈತ ಬಂದೊಡಿಸುವಾಗ ಪುರ್ರನೆ


ರೆಕ್ಕೆಯ ಬೀಸುತ ಮಿತ್ರರ ಕೂಡ ಓಡಿ ಹೋಗುವವು

ಹಿಂಡನಗಲಿದ ಆನೆಯಂತೆ ನಿರಾಶನಾಗುವ ಮನುಜ

ದುಡಿತವೇ ದುಡ್ಡಿನ ತಾಯಿ ಎಂಬಂತೆ ಹಂಚಿಕೊಂಡು

ತಿನ್ನುವುದನ್ನು ರೈತರ ನೋಡಿ‌ ಕಲಿತು ಬಾಳಿದರಾಗದೇ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


No comments:

Post a Comment

Videos