Sunday, January 3, 2021

ಸೃಷ್ಟಿಯ ವೈಚಿತ್ರ್ಯ ಕವನ ೦೩/೦೧/೨೦೨೧

 ಕವನದ ಶೀರ್ಷಿಕೆ

*"ಸೃಷ್ಟಿಯ ವೈಚಿತ್ರ್ಯ"*


ಸೃಷ್ಟಿಯಲ್ಲಿ ಅನೇಕ ವಿಸ್ಮಯ

ಭೂಮಿ ತಿರುಗುವುದು ಎನ್ನುವರು

ಅದು ನಮ್ಮ ಅನುಭವಕ್ಕೆ ಬಾರದು


ಆಕಾಶವು ವಿಶಾಲ ಅಂತ್ಯವೆಂಬುದೆ

ಇಲ್ಲ ಕಂಡವರಂತೂ ಯಾರಿಲ್ಲ

ಕಣ್ಣಿಗೆ ಗೋಚರಿದ್ದೆ ಕರೆ ಕರೆ...!


ಹಗಲು ರಾತ್ರಿ ಆಗುವುದೇ ಒಂದು

ವಿಚಿತ್ರ ಗೊತ್ತಿಲ್ಲ ಯಾರಿಗೂ... 

ಕತ್ತಲು ಬೆಳಕುಗಳ ಆಟ...


ಗ್ರಹಗಳು ಅನೇಕ ಎಂಬುವರು

ಸೂರ್ಯ ಚಂದ್ರರರಂತೆ ದೊಡ್ಡವರು

ಸಣ್ಣವರು ಅನಂತ ಅನಂತ....


ನಕ್ಷತ್ರ ಪುಂಜಗಳು ಬಹಳ..

ಹೊಳೆಯುವ ಕಂಗಳಂತೆ

ಗೋಚರ ಅಗೋಚರ ಅಪಾರ....


ಚಂದ್ರನ ಮೇಲೆ ನೀರು ಇದೆ

ಎಂಬರು ಗಾಳಿ ಇಲ್ಲವೆ ಇಲ್ಲಂತೆ

ಹೋಗಿ ಬರುವರು ಎಲ್ಲರೂ ಮುಂದೊಮ್ಮೆ..


ವಿಜ್ಞಾನದ ಗುಟ್ಟೊಂದು ತಿಳಿದರೆ

ಹೊಳೆಯುವದು ಎಲ್ಲಾ ವಿಸ್ಮಯಕ್ಕೆ

ಉತ್ತರ ಬಲ್ಲವರೇ ಬಲ್ಲರು ಜಾಣರು..


ಸಮಸ್ತ ಜನತೆಯು ವೈಜ್ಞಾನಿಕ

ನೆಲೆಗಟ್ಟಿನಲಿ ವಿಚಾರ ಮಾಡಿ ತಿಳಿದರೆ

ಏನಿಲ್ಲ ಎಲ್ಲಾ ಬಟ್ಟಬಯಲು ಬಯಲು..


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*








No comments:

Post a Comment

Videos