ಕವನದ ಶೀರ್ಷಿಕೆ
*ವಿಶ್ವ ಮಾನವ*
(ಟಂಕಾ ಪ್ರಕಾರ)
ನೀ ಅಗಣಿತ
ತಾರೆಗಳ ನಡುವೆ
ಹೊಳೆಯುವಂತ
ಸೂರ್ಯನಾದೆ ಕಾವ್ಯದ
ಗಿರಿ ಶಿಖರ ಏರಿ
ವಿಶ್ವ ಮಾನವ
ಸಂದೇಶ ಸಾರಿದಿರಿ
ಜಗತ್ತಿಗೆಲ್ಲ
ಜಾತಿ ಮತ್ಸರ್ರಹಿತ
ಪುಣ್ಯ ಪುರುಷ ನೀವು
ಮಲೆನಾಡಿನ
ಪರಿಸರದಿ ಹುಟ್ಟಿ
ಕವಿಶೈಲದಿ
ಕಾನೂರು ಹೆಗ್ಗಡತಿ
ಕೃತಿಯನು ರಚಿಸಿ
ಮಲೆಗಳಲ್ಲಿ
ಮದುಮಗಳು ಮತ್ತು
ಕಲಾಸುಂದರಿ
ಕೊಳಲು,ನವಿಲು,ಶ್ರೀ
ರಾಮಾಯಣದರ್ಶನಂ
ಪದ್ಮಭೂಷಣ
ಕೇಂದ್ರ ಸಾಹಿತ್ಯ ಮತ್ತು
ಪಂಪ ಪ್ರಶಸ್ತಿ
ಜ್ಞಾನ ಪೀಠ, ರಾಷ್ಟ್ರ
ಕವಿಯಾದ ಕುವೆಂಪು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment