ಕವನದ ಶೀರ್ಷಿಕೆ
"ಭೀಕರ ಬರಗಾಲದ ಛಾಯೆ"
ಬರಗಾಲ ಬಂದು ಕೂಲಿ-ನಾಲಿ ನೆಲೆಗಾಣದೆ
ಆಗಸದ ಕಡೆ ನೋಡುತ್ತಿರುವನು ಹಸಿವಿನಿಂದ
ರೈತನ ಗೋಳು ಕೇಳುವವರಿಲ್ಲ ಈ ನಾಡಿನಲ್ಲಿ
ಶ್ರೀಮಂತರ ಸೊಕ್ಕು ಹೆಚ್ಚುತ್ತಿದೆ ಇನ್ನೂ ಇನ್ನೂ..
ದುಡಿದು ನಾಲ್ಕು ಜನಕ್ಕೆ ಅನ್ನ ನೀಡೋ ರೈತ
ಅನ್ನಕ್ಕಾಗಿ ಬೇರೆಯವರಿಗೆ ಕೈ ಒಡ್ಡುವ ಸ್ಥಿತಿ
ಕರುಣೆಯ ತೋರೋ ಮಹಾದೇವ ಕೃಷಿಕನ
ಹೊಟ್ಟೆ ಮೇಲೆ ಹೊಡೆದರೆ ಜಗವೆಲ್ಲ ನಲುಗೀತು
ನ್ಯಾಯ ನೀತಿ ಧರ್ಮ ಉಳಿದಿರುವುದು ಅವನಲ್ಲಿ
ಮೋಸ ವಂಚನೆಯ ತಿಳಿಯದ ಪರಿಶುದ್ಧ ಮನ
ಲೋಕಕ್ಕೆ ಸಲಹೋ ನಾಯಕನ ಬೆನ್ನು ಬಿಡಬ್ಯಾಡ
ನಿನ್ನ ನಂಬಿ ಬೀಜ ಬಿತ್ತಲು ಕಾಯ್ದಾನ ಮಳೆರಾಯ
ಪರುಕಿಸದಿರು ಮಹಾರಾಯ ನೆಚ್ಚಿದವರ ಕಣ್ಣೀರ
ಬರಿಸದಿರು, ಮೋಡ ಮುಸುಕಿ ಮುಗಿಲರಿದು ಇಳೆಗೆ
ಧಾರಕಾರ ಮಳೆಬಂದು, ಕೆರೆ ಹಳ್ಳ ಕೊಳ್ಳ ತುಂಬಿ ರೈತ
ಬೆಳೆ ಬೆಳೆದು ಕೈ ಸೇರಲು ಆನಂದಕ್ಕೆ ಪಾರವೇ ಇಲ್ಲ ದೇವ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment