ಕವನದ ಶೀರ್ಷಿಕೆ
"ಓದುವ ಇಚ್ಚೆ,ಓದಲಾಗುತ್ತಿಲ್ಲ"
ಚಂಚಲ ಮನ ಚಂಗನೆ ಜಿಗಿಯುತ್ತಿದೆ
ಮರದಿಂದ ಮರಕ್ಕೆ ಮರಕೋತಿ ಆಟ
ಹೊತ್ತಿಗೆ ಹಿಡಿದರೆ ಸಾಕು ನಿದ್ದೆ ಬರುವುದು
ಆಟ ಆಡು ಎನ್ನು ಕುಣಿದು ಕುಪ್ಪಳಿಸುವುದು
ಗೆಳೆಯರೊಂದಿಗೆ ಒಣ ಹರಟೆ ಹೊಡೆಯುತ್ತ
ಕಿಲ ಕಿಲ ನಕ್ಕು ಹೊತ್ತು ಹೋದದ್ದೇ ಗೊತ್ತಿಲ್ಲ
ಟಿವಿ ಪೋನು ನೋಡಲು ಅತೀ ಉತ್ಸಾಹ
ಬರೆಯೋಣ ಬಾ ಎಂದು ಕರೆಯಲು ಮನ ಭಾರ!
ದಿನ ಬೆಳಗಾದರೆ ಶಾಲೆಗೆ ಹೋಗೆಂಬ ಬೈಗುಳ
ಇಂದು ರಜೆ ಇದ್ದರೆ ಚೆನ್ನಾಗಿತ್ತು ಅನ್ನೊ ಬಯಕೆ
ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಇರಲು
ಬೇಡುವುದಿಲ್ಲ ಇಂದು ಒಂದೂ ಮತ್ತೊಂದನು
ಓದಿ ಜೀವನದಿ ಮುಂದೆ ಬರುವ ಅಗಾಧ ಕನಸು
ಪರಿಶ್ರಮವಿಲ್ಲದೆ ಯಾರೂ ಬಾರರು ಮುಂದೆ!
ತಿಳಿದರೂ ಯಾಕೋ ಒಪ್ಪುತ್ತಿಲ್ಲ ನನ್ನ ಮನವು
ನಾಳೆ ಓದಿದರಾಯ್ತು ಬಿಡು ಅನ್ನೋ ಭಂಡ ಧೈರ್ಯ
ಇಂದು ನಾಳೆಗಳಿಗೆ ಕೊನೆ ಎಂಬುದಿಲ್ಲ ಈಗಾಗಲೆ
ಕಳೆದಿರುವೆ ಹಲವು ದಿನಗಳೆ ಕೆಟ್ಟ ಮೇಲೆ ಯಾರಿಲ್ಲ
ಕಳೆದು ಹೋದ ಸಮಯ ಮತ್ತೆ ಬಾರದು ಗೊತ್ತ
ಜತನಾಗಿ ಅರಿತು ಬಾಳಿದರೆ ಹಸನಾಗುವುದು ಬಾಳ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
No comments:
Post a Comment