Labels
- (3)
- ೧೦ನೇ ತರಗತಿ (51)
- ೮ನೇ ತರಗತಿ (27)
- ೯ನೇ ತರಗತಿ (26)
- Popular Links (9)
- Videos (2)
- ಕಥೆಗಳ ಸಂಗ್ರಹ (6)
- ಕನ್ನಡ ಕಾವ್ಯೋತ್ಸವ (31)
- ಜಯಂತಿಗಳು (2)
- ದಿನ ಪತ್ರಿಕೆಗಳು (3)
- ಪತ್ರಿಕೆಯಲ್ಲಿ ಪ್ರಕಟಿತ ಕವನಗಳು (56)
- ರಸಪ್ರಶ್ನೆ ಕಾರ್ಯಕ್ರಮ (7)
- ವ್ಯಾಕರಣ (2)
- ಶಿಕ್ಷಕರಿಗಾಗಿ (9)
- ಸ್ವರಚಿತ ಕವನಗಳು (181)
- ಹಳೆಯ ಪ್ರಶ್ನೆ ಪತ್ರಿಕೆಗಳು (2)
Friday, February 19, 2021
Tuesday, February 9, 2021
Saturday, February 6, 2021
ದುಃಖ ಕಲಿಸುವುದು ಜೀವನ ಪಾಠ ಕವನ
ಕವನದ ಶೀರ್ಷಿಕೆ
ದುಃಖ ಕಲಿಸುವುದು ಜೀವನ ಪಾಠ
ಸುಖ ಶಾಂತಿ ನೆಮ್ಮದಿ ಮಾನವನ ಬಯಕೆ
ನೋವ ನುಂಗಿ ನಗುವ ಸೂಸಿಹರು ಸಜ್ಜನರು
ಕಷ್ಟ ಸಹಿಷ್ಣುತೆಯ ಪೆಟ್ಟು ತಿಂದು ಬೆಂಕಿಯಲಿ
ಬೆಂದ ಬಂಗಾರದಿ ಹೊಳೆಯೋ ಅಳಲ ಮರೆತು
ನಿತ್ಯ ದುಡಿ ಸತ್ಯ ನುಡಿ ನೀತಿಯ ಕಲಿಸುವದು
ಬಯಸದೆ ಬರುವ ಅತಿಥಿಗಳಂತೆ ಬಾಳ ಬುತ್ತಿ
ಬಿಚ್ಚಿ ಉಂಡಾಗಲೇ ಅರ್ಥವಾಗುವದು ಒಳ ಆಳ
ತಿಳಿದವಗೆ ತಿಳಿದೀತು ಅವುಗಳ ಮಹಿಮೆ ಅಪಾರ
ಲೋಕ ರೂಢಿಯ ನಡುವೆ ನಡೆವ ಮನುಜ
ಹಾದಿ ತಪ್ಪಲು ನೋಡಿ ನಗುವರು ಹಲವರು
ಎಲ್ಲರೊಳಗೊಂದಾಗಿ ಅತೀ ಆನಂದದಿ ನಕ್ಕು
ನಲಿವುದನು ಮರೆಯದಿರು ನೀ ಎಂದೆಂದೂ
ಸಂಸಾರದ ನೋಗಕ್ಕೆ ಗಂಡ ಹೆಂಡತಿ ಹೆಗಲಿಗೆ
ಹೆಗಲು ಗೊಟ್ಟು ಸಾಗಲು ಸರಸ ವಿರಸಗಳೆಂಬ
ಮಿಶ್ರಣದಿ ಬೆಂದು ಸವಿಜೇನ ಸವಿದಂತೆ ರಸಬಾಳೆ
ಹಣ್ಣ ಮೆದ್ದಂತೆ ಸುಖಾನುಭವವ ಅನುಭವಿಸು
ಸುಖ ಬಂತೆಂದು ಹಿಗ್ಗದಿರು ದುಃಖಕ್ಕೆ ಕುಗ್ಗದಿರು
ಸುಖ ದುಃಖಗಳನ್ನು ಸಮವಾಗಿ ನೀ ಸ್ವೀಕರಿಸು
ಕನಸಿನಿರುಳಂತೆ ಕಳೆದು ಹೋಗುವವು ಪಯಣದಿ
ನೆನೆಯುತ್ತಿರು ಸವಿ ನೆನಪಿನ ಜಾಡಲ್ಲಿ ಜೀವನವಿಡೀ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಓದುವ ಇಚ್ಛೆ,ಓದಲಾಗುತ್ತಿಲ್ಲ ಕವನ
ಕವನದ ಶೀರ್ಷಿಕೆ
"ಓದುವ ಇಚ್ಚೆ,ಓದಲಾಗುತ್ತಿಲ್ಲ"
ಚಂಚಲ ಮನ ಚಂಗನೆ ಜಿಗಿಯುತ್ತಿದೆ
ಮರದಿಂದ ಮರಕ್ಕೆ ಮರಕೋತಿ ಆಟ
ಹೊತ್ತಿಗೆ ಹಿಡಿದರೆ ಸಾಕು ನಿದ್ದೆ ಬರುವುದು
ಆಟ ಆಡು ಎನ್ನು ಕುಣಿದು ಕುಪ್ಪಳಿಸುವುದು
ಗೆಳೆಯರೊಂದಿಗೆ ಒಣ ಹರಟೆ ಹೊಡೆಯುತ್ತ
ಕಿಲ ಕಿಲ ನಕ್ಕು ಹೊತ್ತು ಹೋದದ್ದೇ ಗೊತ್ತಿಲ್ಲ
ಟಿವಿ ಪೋನು ನೋಡಲು ಅತೀ ಉತ್ಸಾಹ
ಬರೆಯೋಣ ಬಾ ಎಂದು ಕರೆಯಲು ಮನ ಭಾರ!
ದಿನ ಬೆಳಗಾದರೆ ಶಾಲೆಗೆ ಹೋಗೆಂಬ ಬೈಗುಳ
ಇಂದು ರಜೆ ಇದ್ದರೆ ಚೆನ್ನಾಗಿತ್ತು ಅನ್ನೊ ಬಯಕೆ
ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಇರಲು
ಬೇಡುವುದಿಲ್ಲ ಇಂದು ಒಂದೂ ಮತ್ತೊಂದನು
ಓದಿ ಜೀವನದಿ ಮುಂದೆ ಬರುವ ಅಗಾಧ ಕನಸು
ಪರಿಶ್ರಮವಿಲ್ಲದೆ ಯಾರೂ ಬಾರರು ಮುಂದೆ!
ತಿಳಿದರೂ ಯಾಕೋ ಒಪ್ಪುತ್ತಿಲ್ಲ ನನ್ನ ಮನವು
ನಾಳೆ ಓದಿದರಾಯ್ತು ಬಿಡು ಅನ್ನೋ ಭಂಡ ಧೈರ್ಯ
ಇಂದು ನಾಳೆಗಳಿಗೆ ಕೊನೆ ಎಂಬುದಿಲ್ಲ ಈಗಾಗಲೆ
ಕಳೆದಿರುವೆ ಹಲವು ದಿನಗಳೆ ಕೆಟ್ಟ ಮೇಲೆ ಯಾರಿಲ್ಲ
ಕಳೆದು ಹೋದ ಸಮಯ ಮತ್ತೆ ಬಾರದು ಗೊತ್ತ
ಜತನಾಗಿ ಅರಿತು ಬಾಳಿದರೆ ಹಸನಾಗುವುದು ಬಾಳ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಭೀಕರ ಬರಗಾಲದ ಛಾಯೆ ಕವನ
ಕವನದ ಶೀರ್ಷಿಕೆ
"ಭೀಕರ ಬರಗಾಲದ ಛಾಯೆ"
ಬರಗಾಲ ಬಂದು ಕೂಲಿ-ನಾಲಿ ನೆಲೆಗಾಣದೆ
ಆಗಸದ ಕಡೆ ನೋಡುತ್ತಿರುವನು ಹಸಿವಿನಿಂದ
ರೈತನ ಗೋಳು ಕೇಳುವವರಿಲ್ಲ ಈ ನಾಡಿನಲ್ಲಿ
ಶ್ರೀಮಂತರ ಸೊಕ್ಕು ಹೆಚ್ಚುತ್ತಿದೆ ಇನ್ನೂ ಇನ್ನೂ..
ದುಡಿದು ನಾಲ್ಕು ಜನಕ್ಕೆ ಅನ್ನ ನೀಡೋ ರೈತ
ಅನ್ನಕ್ಕಾಗಿ ಬೇರೆಯವರಿಗೆ ಕೈ ಒಡ್ಡುವ ಸ್ಥಿತಿ
ಕರುಣೆಯ ತೋರೋ ಮಹಾದೇವ ಕೃಷಿಕನ
ಹೊಟ್ಟೆ ಮೇಲೆ ಹೊಡೆದರೆ ಜಗವೆಲ್ಲ ನಲುಗೀತು
ನ್ಯಾಯ ನೀತಿ ಧರ್ಮ ಉಳಿದಿರುವುದು ಅವನಲ್ಲಿ
ಮೋಸ ವಂಚನೆಯ ತಿಳಿಯದ ಪರಿಶುದ್ಧ ಮನ
ಲೋಕಕ್ಕೆ ಸಲಹೋ ನಾಯಕನ ಬೆನ್ನು ಬಿಡಬ್ಯಾಡ
ನಿನ್ನ ನಂಬಿ ಬೀಜ ಬಿತ್ತಲು ಕಾಯ್ದಾನ ಮಳೆರಾಯ
ಪರುಕಿಸದಿರು ಮಹಾರಾಯ ನೆಚ್ಚಿದವರ ಕಣ್ಣೀರ
ಬರಿಸದಿರು, ಮೋಡ ಮುಸುಕಿ ಮುಗಿಲರಿದು ಇಳೆಗೆ
ಧಾರಕಾರ ಮಳೆಬಂದು, ಕೆರೆ ಹಳ್ಳ ಕೊಳ್ಳ ತುಂಬಿ ರೈತ
ಬೆಳೆ ಬೆಳೆದು ಕೈ ಸೇರಲು ಆನಂದಕ್ಕೆ ಪಾರವೇ ಇಲ್ಲ ದೇವ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಶಬ್ಧ ಗಾರುಡಿಗನ ಮೋಡಿ ಕವನ
ಕವನದ ಶೀರ್ಷಿಕೆ
"ಶಬ್ದ ಗಾರುಡಿಗನ ಮೋಡಿ"
ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು
ಸಾಧನಕೇರಿಯ ಗುಂಟ ಚಿಕ್ಕಂದಿನಲಿ ಅಡ್ಡಾಡಿ
ತಿರುಗಿ ತುಂಟತನದಿ ಪಂಟೆ ಪಂಟೆ ಜಿಗಿದಾಡಿ
ಮನೆಯ ಅಜ್ಜಿ ಅಮ್ಮನ ಸಲುಗೆಯಿಂದ ಬೆಳೆದು
ಕಾಮನ ಕಟ್ಟೆಯ ಶಾಲೆಯಲಿ ಆಟಪಾಠ ಕಲಿತು
ಊರಿಂದೂರಿಗೆ ಹೋಗಿ ಅನುಭವದ ಗಣಿಯಾಗಿ
ಸಹೋದರ ಸಹೋದರಿಯರ ಪ್ರೀತಿ ವಿಶ್ವಾಸ ಗೆದ್ದು
ಹೆಂಡತಿ ಮಕ್ಕಳ ಅನುಬಂಧದಿ ನೋವ ನುಂಗಿ
ತಾಯಿ ಶಾರದೆ ಲೋಕ ಮಾತೆಯ ವರಪುತ್ರನೀತ
ಬರೆದುದೆಲ್ಲ ಬಂಗಾರ ಸಿಗಲಿಲ್ಲ ಸಿರಿ ಸಂಪತ್ತು
ಬಡತನದ ಬೇಗೆಯಲ್ಲಿ ಬೆಂದು ನೊಂದ ಬೇಂದ್ರೆ
ಭಾರತಾಂಬೆಯ ಮುಡಿಗೆ ಮುಡಿಸಿದರು ಜ್ಞಾನಪೀಠ
ವರಕವಿ, ಶಬ್ದ ಗಾರುಡಿಗನ ಮೋಡಿಗೆ ಕನ್ನಡ ನುಡಿ
ಓದುಗರ ನರನಾಡಿಗೆಲ್ಲ ಮೀಟಿ ಹೃನ್ಮಂದಿರ ಸೇರಿ
ನೂರಾರು ವರ್ಷಗಳೇ ಸಂದರಿನ್ನೂ ನೆನಪಿನಂಗಳದಿ
ಸದಾ ರಾರಾಜಿಸುತ್ತಿಹೆ ಕನ್ನಡಿಗರ ಎದೆಯ ಗೂಡಲ್ಲಿ
ಗರಿ,ನಾದಲೀಲೆ,ನಾಕುತಂತಿ,ಸೂರ್ಯಪಾನ,ನರಬಲಿ, ಸಖಿಗೀತ,ಉಯ್ಯಾಲೆ,ಮೇಘದೂತ,ಅರಳು ಮರಳು,
ಗಂಗಾವತರಣ,ಹಾಡುಪಾಡು,ಕೃಷ್ಣಕುಮಾರಿ,ಶ್ರೀಮಾತಾ
ಹೀಗೆ ಹಲವಾರು ಕೃತಿಗಳು ಜನಮನಸೂರೆಗೊಂಡಿವೆ.
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
ಲಾಕ್ ಡೌನ್ ಮದುವೆ ಕವನ
ಕವನದ ಶೀರ್ಷಿಕೆ
"ಲಾಕ್ ಡೌನ್ ಮದುವೆ"
ಸಾವಿರಾರು ಲಗ್ನ ಪತ್ರಿಕೆ ಹಂಚಿ ಪ್ರಭಾವಿ
ರಾಜಕಾರಣಿಗಳ ಕರೆಸಿ ಅದ್ದೂರಿಯಾಗಿ
ಬಟ್ಟೆಗಳ ತೊಟ್ಟು ಮದುವಣಿಗರಾಗಿ ಪುರ
ಜನರ ಮಧ್ಯೆ ನಾವಿಬ್ಬರು ಏರುವೆವು ಹಸೆಮಣೆ
ಎಂದೆಲ್ಲಾ ಮದುವೆಯ ಕಲ್ಪನೆಯ ಕಟ್ಟಿ
ಕನಸ ಕಾಣುತ್ತಿದ್ದ ಯುವಕರೆಲ್ಲರೂ ಇಂದು
ಆದರು ನಿರಾಸೆ ಏಕೆಂದರೆ? ಲಾಕ್ ಡೌನ್
ಎನ್ನೋ ಭೂತ! ಬಿಡದೆ ಕಾಡಿತ್ತು ನಿದ್ದೆಗೆಡಿಸಿ.
ದೇಗುಲದ ಪೂಜಾರಿಯ ಮಂತ್ರ ಘೋಷಗಳ
ನಡುವೆ ಬೆರಳೆಣಿಕೆಯ ನೆಂಟರಿಷ್ಟರ ಮುಂದೆ
ಆಡಂಬರ ವೈಭೋಗದ ಖರ್ಚಿಲ್ಲದೆ ಯಾವ ಸದ್ದು
ಗದ್ದಲಗಳ ಜಂಜಾಟವಿಲ್ಲದೆ ತಾಳಿಯ ಕಟ್ಟಿದರು
ದೂರದ ಬಂಧು-ಬಾಂಧವರು ಬಾರದೆ
ತಂಗಾಳಿಯ ಚುಮುಚುಮು ಚಳಿಯ ಲೆಕ್ಕಿಸದೆ
ಮುಂಜಾವಿನ ಸೂರ್ಯ ನಡುಬಾನ ಸೇರುವ
ಮುಂಚೆ ನಡದೆ ಬಿಟ್ಟವು ಹಲವು ಮದುವೆಗಳು
ಯಾವ ಆಯರಿ ಉಡುಗೊರೆಗಳಿಲ್ಲದೆ
ಅತ್ಯಾಧುನಿಕ ಧ್ವನಿವರ್ಧಕ ಸಂಗೀತ ಕಲಾ
ತಂಡಗಳ ಹಾಡು ನೃತ್ಯದ ಸಂಭ್ರಮವಿಲ್ಲದೆ
ಸರಳ ಜೀವನ ಪ್ರತೀಕದ ಹೆಗ್ಗುರುತಾಗಿ ಉಳಿದು
ಕಾಲ ಬದಲಾದರೇ ಹೀಗೂ ಮಾಡಬಹುದು
ಮದುವೆಗಳು ಎಂಬ ಸಂದೇಶವನು ಸಾರಿ ಸಾರಿ
ಹೇಳಿದಂತೆ ಈ ವರ್ಷದ ಮದುವೆಗಳು ನಡೆದು
ಮಾನವ ಸಂಕುಲಕ್ಕೆ ಕಲಿಸಿದವು ಪಾಠ ಮರೆಯದಂತೆ
ರಚನೆ
ಯಗುಮಾಶ
ಶ್ರೀ ಶರಣಬಸ್ಸಪ್ಪ ಎಂ ಗುಳೇದ
-
ಕನ್ನಡ ನಾಡು ನುಡಿ ಕವನ ದಿನಾಂಕ ೨೨/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ
-
ಕವನದ ಶೀರ್ಷಿಕೆ *ಕನ್ನಡ ನಾಡು ನುಡಿ* ಕವಿಗಳ ಬೀಡು ಕನ್ನಡ ನಾಡು ಚಿನ್ನಾ.. ರನ್ನಾ.. ತಿಳಿಯೋ ನೀನು ಸವಿಜೇನು ಸವಿದಂತೆ ಈ ನುಡಿಯ ಕೇಳು ಅಕ್ಕರೆಯ ಅಕ್ಕರಗಳು ನೀ ಕಾಣು ಓ.....