Monday, August 31, 2020

ಹತ್ತನೇ ತರಗತಿ ಸಂಕಲ್ಪ ಗೀತೆ ಪದ್ಯ ವೀಡಿಯೊ-೨ ೩೧/೦೮/೨೦೨೦

 


ಕನ್ನಡ ಭಾಷಾ ಶಿಕ್ಷಕರಿಗೆ ಆನ್ಲೈನ್ ಪುನಶ್ಚೇತನ ತರಬೇತಿ ಸಂಪನ್ಮೂಲಗಳು


 ಪುನಶ್ಚೇತನ ತರಬೇತಿ ವೇಳಾಪಟ್ಟಿ

ಕ್ರಿಯಾ ಸಂಶೋಧನೆ

ರಚನಾವಾದ

ಭಾಷಾ ಪ್ರಯೋಗ

ಭಾಷಾ ಕೌಶಲ್ಯಗಳು

ಸೇತುಬಂಧ

ಚಟುವಟಿಕೆ ಶಿಕ್ಷಕರ ಉಪಯುಕ್ತ

ಚಟುವಟಿಕೆಗಳ ಮೌಲ್ಯಮಾಪನ

ವ್ಯಾಕರಣ ಬೋಧನೆ

ಕನ್ನಡ ಛಂದಸ್ಸು ತರಬೇತಿ

ಕ್ಲಿಷ್ಟಾಂಶಗಳು



ಸ್ವರಚಿತ ಕವನ ೩೧/೦೮/೨೦೨೦

 ಕವನದ ಶೀರ್ಷಿಕೆ

"ಕನ್ನಡ ಸವಿ ನುಡಿ"

ಪ್ರಕಾರ- *ವೃತ್ತ್ಯನುಪ್ರಾಸ*


ನದಿಗಳು ಎರಡು ದಂಡೆಯ ದಡವನು

ಕೆಲವು ಕಾಲ ಗತಿಸಿದಂತೆ ಕಲ್ಪನೆಗೆ

ಸಿಗದೆ ಸರ ಸರನೆ ಹಾವಿನ ಹಾಗೆ

ಊರಿನ ಜನಕೆ ಜನ ಸಮುದಾಯಕ್ಕೆ

ತಿಳಿಯದೆ ತಡಿ ತಟಗಳು ಉಕ್ಕುವವು


ಕಾವೇರಿ ಕೃಷ್ಣಾ  ಕಾಳಿ ತುಂಗಾ ಭದ್ರಾ

ಭೀಮಾ ಶರಾವತಿ ಯಮುನಾ ನದಿಗಳು

ಗಗನ ಚುಕ್ಕಿ ಭರಚುಕ್ಕಿ ಶಿವನ ಸಮುದ್ರ

ಹಳ್ಳಿ ಹಳ್ಳಿಗಳಲ್ಲಿ ಹಳ್ಳ ಕೊಳ್ಳಗಳೂ

ಬರದಿಂದ ಹರಿದು ಕರುನಾಡ ತುಂಬುವವು


ಕನ್ನಡ ಸವಿ ನುಡಿ ಸಿರಿ ನುಡಿ ಹಿತವಾಗಿ

ಸರಳವಾಗಿದೆ ಸರಸ ವಿರಸವಿಲ್ಲದೆ

ಬಿಂಕದ ಬಿನ್ನಾಣದ ಬೆಡಗಿನ ಬೆರಗು

ನುಡಿಯ ನುಡಿಯಲು ನಡೆಚನ್ನ 

ನುಡಿ ಚೆನ್ನ ನವ ನವೀನವಾದ ಕನ್ನಡ ನುಡಿ


ಕವಿ ಕಾವ್ಯ ಸಬ್ಬವಕಾರರ ಬೀಡು

ಪಂಪ ಪೊನ್ನ ಜನ್ನ ರನ್ನರಂತಹ

ಕುವೆಂಪು ಕನ್ನಡವ ಉಳಿಸಿ ಬೆಳೆಸಿದರೆ

ಬೇಂದ್ರೆ ಬರಹ ಸಖಿಗೀತ ಸುಖ ದಾಂಪತ್ಯ

ಮುಂದಿನ ಜನರಿಗೆ ದಾರಿ ದೀಪವಾಗಿದೆ


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

*ಸಾ||ಯರಗೋಳ ತಾ||ಜಿ|| ಯಾದಗಿರಿ*


*೧೪೫ ನೇ ಗೋಷ್ಠಿ* 

          🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

           *ಹೂವಿನಹಡಗಲಿ* 

           🍀🍀

ವಾರ- *ಸೋಮವಾರ* 

ದಿನಾಂಕ- *೩೧.೦೮.೨೦೨೦* 

             🌷🌷

ವಿಷಯ- *ನಿಮಗಿಷ್ಟವಾದ ವಿಷಯ* 

              🌻

ಪ್ರಕಾರ- *ವೃತ್ತ್ಯನುಪ್ರಾಸ* 

              🌸🌸

ನಿರ್ವಹಣೆ- *ಶ್ರೀಉಮೇಶ ನರಗುಂದ* 

               🌺🌺


 *ವೃತ್ತ್ಯನುಪ್ರಾಸ ಎಂದರೆ* 


ಪದ್ಯದ ಪ್ರತೀ ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು

ಉದಾ-ಕಟ್ಟಾಣಿ ಕಟ್ಯಾಳ ಕಟ್ಟಿಮ್ಯಾನ ನಿಂತಾಳ

ಇಲ್ಲಿ *ಕ* ಮತ್ತು *ಟ* ಅಕ್ಷರಗಳು ಮತ್ತೆ ಬಂದಿರುವಹಾಗೇ ಬರಬೇಕು

               🌹🌹

ಐದು ಸಾಲಿನ ಒಂದು ಪದ್ಯ

ನಾಲ್ಕು ಪದ್ಯ ಬರೆಯಬೇಕು

ಪ್ರತೀ ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು

             🙏🙏🙏

 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*

Sunday, August 30, 2020

ಸ್ವರಚಿತ ಕವನ ೩೦/೦೮/೨೦೨೦

 ಕವನದ ಶೀರ್ಷಿಕೆ:

"ಈ ಹಾಳು ಕರೋನ ಬಾರದಿದ್ದರೆ"

(ಸಿಂಹ ಪ್ರಾಸ)


ವಿದ್ಯಾರ್ಥಿಗಳ ಗುಂಪು ಇಲ್ಲದೆ ಶಾಲೆಗಳು

ಸದಾ ಬಿಕೋ ಎನ್ನುತ್ತಿವೆ ಆಟದ ಮೈದಾನ

ಸದ್ದು ಗದ್ದಲಗಳಿಂದ ಗಿಜಿಗಿಡುವುದು ಕಂಡು

ಗದರಿಸಲು ಶಿಕ್ಷಕರು ಹರಸಾಹಸ ಪಡುವುದು

ಗದ್ಯ,ಪದ್ಯ,ಪಾಠ ಆಟೋಟಗಳನು ಆಡುವುದು

ಅದನ್ನೆಲ್ಲ ನೆನಸಿಕೊಂಡರೆ ದುಃಖವಾಗುವದು


ದಿನಾಲು ಪ್ರಾರ್ಥನೆ ಮಾಡುವುದು

ಅನುದಿನವು ಶಿಕ್ಷಕರಗೆ ಗೌರವ ಕೊಟ್ಟು

ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯ

ಜನಪದರ ಜೀವನ ತಿಳಿಸಿ ಕೊಡುವುದು

ಮನೆಗೆಲಸ ನೀಡಿ ಕಳುಹಿಸುವುದು ಸದಾ

ನೆನಪಿಗೆ ಬಂದು ಕಾಡುತ್ತಿದೆ ನನ್ನ ಮನವನು


ನಮ್ಮ ಶಾಲೆ ಯಾವಾಗ ತೆರೆಯುವುದೋ

ಅಮ್ಮ ಅಪ್ಪ ನಮಗೆ ಯಾವಾಗ ಬಿಟ್ಟು ಬರುವರೋ

ಸುಮ್ಮನೆ ಮನೆಯಲ್ಲಿ ಕೂಡುವ ಬದುಕು

ನಮಗೆ ಬೇಸರ ತರುತ್ತಿದೆ ಯಾಕಾದರೂ ಬಂತು

ನಮ್ಮ ಜಗಕೆ ಈ ಹಾಳು ಕರೋನ ಬಾರದಿದ್ದರೆ

ನಮ್ಮ ಸಂತಸಕೆ ಸಾಟಿಯೇ ಇದ್ದಿಲ್ಲ ಅನ್ನೊ ಕೊರಗು ಕಾಡುತ್ತಿದೆ.


ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ||ಯಾದಗಿರಿ*


೧೪೪ನೇಗೋಷ್ಠಿ 

             ‌      🌷🌷🌷

  *ಬರಹಗಾರರ ಬಳಗ ರಾಜ್ಯ ಘಟಕ* 

            *ಹೂವಿನಹಡಗಲಿ* 

                   🌸🌸🌸

        *ದಿನಾಂಕ-೩೦.೦೮.೨೦೨೦* 

                   🌻🌻🌻

           *ವಾರ-ಬಾನುವಾರ* 

                    🍀🍀🍀

              *ವಿಷಯ-ನಿಮ್ಮ ಅಯ್ಕೆಯ ವಿಷಯ* 

               *(ಸಿಂಹಪ್ರಾಸ)* 

                    🌼🌼🌼

                  *ನಿರ್ವಹಣೆ* 

             *ಶ್ರೀ ನಾಗೇಶ ಚವ್ಹಾಣ್*


 *ಸಿಂಹಪ್ರಾಸ* (ಷಟ್ಪದಿ)

ಪ್ರಾಸ ಅಕ್ಷರದ ಹಿಂದಿನ ಅಕ್ಷರವು

ಹ್ರಸ್ವಸ್ವರ ಆಗಿರಬೇಕು


 *ಉದಾಹರಣೆ*

ಕೆಲವಂ ಬಲ್ಲವರಿಂದ ಕಲ್ತು

ಕೆಲವಂ ಮಾಳ್ವರಿಂದ ಕಲ್ತು


ಇಲ್ಲಿ


ಲ ಅಕ್ಷರ ಪ್ರಾಸ


ಕೆ ಇದರಲ್ಲಿ  ಕ+ಎ=ಕೆ ಇದರಲ್ಲಿ ಎ ಹ್ರಸ್ವಸ್ವರ

ಎ.ಒ.ಅ.ಇ.ಉ


ಇವುಗಳ ಜೊತೆ ವ್ಯಂಜನಗಳು ಬರಬಹುದು

ಕೆ,ಗೆ,ಚೆ,ಕು,ತೆ,ದೆ ಮೆ ನೆ.ಅ,ರ,ರೊ,ಲೊ,ಮೊ,ಗೊ,ಉ,ದು,ನು,ಮು,ನೆ,ರೆ ಯೆ ಗಿ ಕಿ ದಿ ರಿ ಚಿ ಸಿ ವಿ ಹಿ ..ಹೀಗೆ ಬರಬಹುದು


ಕೊಟ್ಟ ವಿಷಯವನ್ನು ಕವಿತೆಯಲ್ಲಿ ಹಿಡಿದಿಡಬೇಕು


ಆರು ಸಾಲಿನ ಒಂದು ಷಟ್ಪದಿ


ಮೂರು ಷಟ್ಪದಿ ಬರೆಯಿರಿ


೨.ಕೊಟ್ಟ ವಿಷಯಕ್ಕೆ ಪೂರಕವಾಗಿರಬೇಕು


೩.ಆರು ಸಾಲುಗಳ ಪದ್ಯ ಮೂರು ಪದ್ಯ ಬರೆಯಿರಿ


೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*









Saturday, August 29, 2020

ಸ್ವರಚಿತ ಕವನ ೨೯/೦೮/೨೦೨೦

 *೧೪೩ ನೇಗೋಷ್ಠಿ* 

             ‌ 🌷🌷🌷

  *ಬರಹಗಾರರ ಬಳಗ ರಾಜ್ಯ ಘಟಕ* 

            *ಹೂವಿನಹಡಗಲಿ* 

                   🌸🌸🌸

        *ದಿನಾಂಕ-೨೯.೦೮.೨೦೨೦* 

                   🌻🌻🌻

               *ವಾರ-ಶನಿವಾರ* 

                    🍀🍀🍀

           ವಿಷಯ-ಕಾಮನಬಿಲ್ಲು* 

               *(ವೃಷಭಪ್ರಾಸ)* 

                    🌼🌼

                       ೧

ಕಂದನ ಸಂತಸಪಡಿಸಲು ಆತುರದಿಂದ

ಚಂದಿರನ ಕರೆಯಲು ಬಂದಂತೆ ಕಂಡಿತು

ಅಂದವಾದ ಆಕಾಶದಿ ಕಂಗೊಳಿಸುವ

ಸುಂದರ ಕಿರಣವು ಮನವ ಸೆಳೆವುದು

ಗಂಧವ ಚಲ್ಲಿಹದು ಆಕಾಶದ ಅಗಲಕೆ

ಸಂದಿರುವ ಕಾಮನ ಬಿಲ್ಲಲಿ ಏಳು ಬಣ್ಣಗಳು

                       ೨

ಇಂಚಿಂಚು ಬಿಡದೆ ಕಾಮನ ಬಿಲ್ಲಿನ

ಸಂಚನು ತಿಳಿಸುವೆ ಜನರಿಗೆ ನಿನಗಿಂತ

ಮುಂಚೆ ಎನ್ನುತ ವೇಗದಿಂದಲೆ ಧಾವಿಸಿ

ಸಂಚರಿಸಿ ಬಂದು ಜನರ ಮನಸನು ಗೆದ್ದು

ಚುಂಚನು ಚಾಚಿದೆ ಭುವಿ ಆಕಾಶದ ಕಡೆಗೆ

ಚಂಚಲ ಬಿಟ್ಟು ಕಾಮನ ಬಿಲ್ಲನು ನೋಡುವರು

                           ೩

ಅಂಬರದಿ ನೇಸರನ ಬೆಳಕು ಪಡೆದು

ಅಂಬುವನು ಬಾನಂಗಳದಿ ಮೂಡಿದೆ

ಬೆಂಬೆತ್ತಿ ಬಿಡದೆ ನೋಡುವರು ಭೂಜನರು

ಕಂಬದ ಮೇಲೇರಿ ನೋಡಲು ಸಿಗುವುದು

ಎಂಬ ಭ್ರಮೆಯಲಿ ಇರುತ ಮಕ್ಕಳು

ಸಂಭ್ರಮಗೊಳ್ಳಲು ಕಾಮನ ಬಿಲ್ಲು ಮುಳುಗುವದು



ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*



*೧೪೩ ನೇಗೋಷ್ಠಿ* 

             ‌      🌷🌷🌷

  *ಬರಹಗಾರರ ಬಳಗ ರಾಜ್ಯ ಘಟಕ* 

            *ಹೂವಿನಹಡಗಲಿ* 

                   🌸🌸🌸

        *ದಿನಾಂಕ-೨೯.೦೮.೨೦೨೦* 

                   🌻🌻🌻

               *ವಾರ-ಶನಿವಾರ* 

                    🍀🍀🍀

           *ವಿಷಯ-ಕಾಮನಬಿಲ್ಲು* 

               *(ವೃಷಭಪ್ರಾಸ)* 

                    🌼🌼🌼

                  *ನಿರ್ವಹಣೆ* 

             *ಶ್ರೀ ಹರೀಶ ಕಜೆ*


೧.ಆರು ಸಾಲಿನ ಪದ್ಯ ಪ್ರತಿಸಾಲಿನ ಪ್ರಾಸ ಅಕ್ಷರದ ಹಿಂದಿನ ಅಕ್ಷರ ಅನುಸ್ವಾರ ಬರಬೇಕು


*ವೃಷಭಪ್ರಾಸ*(ಷಟ್ಪದಿ)


ಪ್ರಾಸ ಅಕ್ಷರದ ಹಿಂದೆ ಅಂದರೆ ಆದಿಪ್ರಾಸದ ಹಿಂದಿನ ಅಕ್ಷರ

ಅನುಸ್ವಾರವಿರಬೇಕು


 *ಉದಾಹರಣೆ*

ಸಂದಕಾರಿರುಳು

ತಿಂದು ಬಂದರು..


ಇಲ್ಲಿ     *ದ* ಪ್ರಾಸಾಕ್ಷರ

ಇದರ ಹಿಂದಿನ ಅಕ್ಷರ. ಂ ಅನುಸ್ವಾರ ಬರಬೇಕು

ಅಂ ಸಂ,ತಿಂ,ಎಂ,ಕೊಂ,ಲಂ,ಹಂ

ಕಂ,ಮಂ,ನಿಂ,ಗೆಂ,ಡಂ,ಪಂ,ವಂ

ದಂ,ಚಂ,ವೆಂ,ಸೆಂ,ಡಂ,ಟಂ,ಬೆಂ

ಗಂ,ನೆಂ,ಮೆಂ ,ರಂ,ರೊಂ,ಗೊಂ

ರಂ,ತೊಂ,ಜೊಂ,ಹೀಗೇ ಬರಬೇಕು


೨.ಕೊಟ್ಟ ವಿಷಯಕ್ಕೆ ಪೂರಕವಾಗಿರಬೇಕು


೩.ಆರು ಸಾಲುಗಳ ಪದ್ಯ ಮೂರು ಪದ್ಯ ಬರೆಯಿರಿ


೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


ಕವನದ ಶೀರ್ಷಿಕೆ :

"ಭಾವೈಕ್ಯತೆಯ ಮೊಹರಂ"


ಚಂದಿರನು ಕಂಡಾಗ ಗುದ್ದಲಿಯನು ಹಾಕುವರು

ಅಂದಿನಿಂದ ಹಬ್ಬದ ಸಡಗರವು ಒಡಮೂಡುವುದು

ಗಂಧದ ಕಡ್ಡಿ,ಲೋಭಾನ ಹಾಕುವರು ಪಂಜಾಗಳಿಗೆ 

ಹಿಂದುಗಳು ಅನೇಕರು ಫಕೀರರಾಗುವರು

ಒಂದಾಗಿ ಕುಣಿಯುತಲಿ ಹಿಂದು ಮುಸ್ಲಿಂರು

ಚಂದದ ಸಡಗರ ನಡೆವದು ಹತ್ತು ದಿನಗಳವರೆಗೆ


ಶೋಕಾಚರಣೆಯು ಹಬ್ಬದ ಮೂಲವಾದರೂ

ಸಕಲ ಹಿರಿ-ಕಿರಿಯರು ಸಂಭ್ರಮಿಸುವರು

ಮಕ್ಕಳು ಗಂಡಸರು ಹಲಾವಿ ಕುಣಿದರೆ

ಐಕಳು ಹೆಂಗೆಳೆಯರು ಉಯ್ಯಾಲೆ ಆಕುವರು

ಜೈಕಾರ ಹಾಕುತ್ತಾ ಪಂಜಾ ಹೊರುವರ ನಮಿಸಿ

ಕೇಕೆಯಾಕುತ ನಲಿದು ಕುಣಿದು ಕುಪ್ಪಳಿಸುವರು


ಹಾಡುವರು ಮೊಹರಂ ಪದಗಳನು

ಬೇಡುವರು ಕೈಮುಗಿದು ವರವನು

ಕೊಡಲಿ,ಸುರಾಯಿ,ಕೋಲು ಹಿಡಿದು ಕುಣಿದು

ಕುಡಿದು ಕುಪ್ಪಳಿಸಿ ಹರ್ಷ ವ್ಯಕ್ತಪಡಿಸುವರು

ಸಡಗರದಿ ಊರು ತುಂಬೆಲ್ಲ ಮೆರವಣಿಗೆ

ಮಾಡುತ ಭಾವೈಕ್ಯತೆಯ ಮೊಹರಂ ಆಚರಿಸುವರು


ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*





ಸ್ವರಚಿತ ಕವನ ೨೮/೦೮/೨೦೨೦

 *೧೪೨ನೇ ಗೋಷ್ಠಿ*

                🌺🌺🌺

  *ಬರಹಗಾರರ ಬಳಗ ರಾಜ್ಯ ಘಟಕ* 

            *ಹೂವಿನಹಡಗಲಿ*

                🌺🌺🌺

            *ವಾರ-ಶುಕ್ರವಾರ*

                🌺🌺🌺

       *ದಿನಾಂಕ-೨೮.೦೮.೨೦೨೦*

                🌺🌺🌺

         *ವಿಷಯ-ಸೌಂದರ್ಯ*

               *(ಆದಿಪ್ರಾಸ)* 

                 🌺🌺🌺

                     ೧

ಕನ್ನಡ ನಾಡಿನ ನಿಸರ್ಗ ಸೌಂದರ್ಯ

ಏನೇನು ಎಂದು ಬರೆಯಲು ಸಾಲದು

ಕಾನನದ ಸಸ್ಯಗಳು, ಹೂಗೊಂಚಲುಗಳು

ಕನಕಾಂಬರ,ಮಲ್ಲಿಗೆ,ಸಂಪಿಗೆ,ದಾಸವಾಳ

ಕನಕದಿಂದಲು ಸಮೃದ್ಧಿಯಾದ ನಾಡು ನಮ್ಮದು

ಕನ್ನಡಿಗರ ಹೆಮ್ಮೆಯ ಭವ್ಯ ಬೀಡು ನಮ್ಮದು


                            ೨

ಮಗುವಿನ ಮುಖ ಸೌಂದರ್ಯ ಮನಕೆ ಮುದ

ಮಗು ಅತ್ತರೆ ಸಂಬಾಳಿಸುವದು ಕಷ್ಟವೇ ಸರಿ

ತಗಾದೆ ತೆಗೆದರೆ ತಾಯಿಯ ಹೊರತು ಸಮನಿಸಲು

ಗಗನ ಚಂದಿರನೋ ಭೂ ರವಿಯೋ ನಕ್ಷತ್ರವೋ

ತೆಗೆದು ಕೊಡುವೆ ಸಮಧಾನವಾಗೆಂದರು ಮಗು

ನಗದು ಆಗ ತಿಳಿಯುವುದು ತಾಯಿಯೇ ಹೆಚ್ಚೆಂದು


ರಚನೆ:

ಯಗುಮಾಶ

*ಶ್ರೀ ಶರಣಬಸ್ಸಪ್ಪ ಗುಳೇದ*

*೧೪೨ನೇ ಗೋಷ್ಠಿ*
                🌺🌺🌺
  *ಬರಹಗಾರರ ಬಳಗ ರಾಜ್ಯ ಘಟಕ* 
            *ಹೂವಿನಹಡಗಲಿ*
                🌺🌺🌺
            *ವಾರ-ಶುಕ್ರವಾರ*
                🌺🌺🌺
       *ದಿನಾಂಕ-೨೮.೦೮.೨೦೨೦*
                🌺🌺🌺
         *ವಿಷಯ-ಸೌಂದರ್ಯ*
               *(ಆದಿಪ್ರಾಸ)* 
                 🌺🌺🌺
                *ನಿರ್ವಹಣೆ*  *ಶ್ರೀನಿಸಾರ್ ಸಾಲಿನ್ ಹೊಳಗುಂದಿ* 
                  🌺🌺🌺
೧.ಆರು ಸಾಲಿನ ಪದ್ಯ
೨.ಪ್ರತಿ ಸಾಲಿನ ಪ್ರಾರಂಭದಲ್ಲಿ ಪ್ರಾಸ ಪದಗಳು ಬಂದರೆ ಅದು ಆದಿಪ್ರಾಸ

*ಆದಿಪ್ರಾಸ*(ಷಟ್ಪದಿ)

ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು

 *ಉದಾಹರಣೆ*

ಸ ತ್ತ ವರ ಕಥೆಯಲ್ಲ ಜನನದಿ
ಕು ತ್ತ ದಲ್ಲಿ ಕುದಿಕುದಿದು ಕರ್ಮದಿ
ಕ ತ್ತ ಲೆಯ ಸೀಮೆಗರ ಸಿಲುಕುವರು 

ಇಲ್ಲಿ ಸಾಲಿನ ಎರಡನೇ ಅಕ್ಷರ

ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ
ಮಂಡಿತವಾಗಬೇಕು

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

*೧೪೨ನೇ ಗೋಷ್ಠಿ*
                🌺🌺🌺
  *ಬರಹಗಾರರ ಬಳಗ ರಾಜ್ಯ ಘಟಕ* 
            *ಹೂವಿನಹಡಗಲಿ*
                🌺🌺🌺
            *ವಾರ-ಶುಕ್ರವಾರ*
                🌺🌺🌺
       *ದಿನಾಂಕ-೨೮.೦೮.೨೦೨೦*
                🌺🌺🌺
         *ವಿಷಯ-ಸೌಂದರ್ಯ*
               *(ಆದಿಪ್ರಾಸ)* 
                 🌺🌺🌺
                *ನಿರ್ವಹಣೆ*  *ಶ್ರೀನಿಸಾರ್ ಸಾಲಿನ್ ಹೊಳಗುಂದಿ* 
                  🌺🌺🌺
೧.ಆರು ಸಾಲಿನ ಪದ್ಯ
೨.ಪ್ರತಿ ಸಾಲಿನ ಪ್ರಾರಂಭದಲ್ಲಿ ಪ್ರಾಸ ಪದಗಳು ಬಂದರೆ ಅದು ಆದಿಪ್ರಾಸ

*ಆದಿಪ್ರಾಸ*(ಷಟ್ಪದಿ)

ಚರಣದ(ಸಾಲಿನ) ಎರಡನೇ ಅಕ್ಷರವು ಒಂದೇ ಆಗಿರಬೇಕು

 *ಉದಾಹರಣೆ*

ಸ ತ್ತ ವರ ಕಥೆಯಲ್ಲ ಜನನದಿ
ಕು ತ್ತ ದಲ್ಲಿ ಕುದಿಕುದಿದು ಕರ್ಮದಿ
ಕ ತ್ತ ಲೆಯ ಸೀಮೆಗರ ಸಿಲುಕುವರು 

ಇಲ್ಲಿ ಸಾಲಿನ ಎರಡನೇ ಅಕ್ಷರ

ತ್ತ...ಇದರಹಾಗೆಯೇ ಆರು ಸಾಲಿನಲ್ಲಿ ಬರಬೇಕು ವಿಷಯ ಸಂಪೂರ್ಣವಾಗಿ
ಮಂಡಿತವಾಗಬೇಕು

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*



ಕವನದ ಶೀರ್ಷಿಕೆ :

"ಜೋಕುಮಾರನ ನೆನಪು"


ದೊಡ್ಡ ಬಾಯಿ ಅದರ ತುಂಬಾ ಬೆಣ್ಣೆ

ದಡುಸಾದ ಮೀಸೆ ಹಣೆಗೆ ವಿಭೂತಿ

ಗೌಡರ ಮನೆಯಲ್ಲಿ ಮೊದಲ ಪೂಜೆ

ಗಾಡಿ ಮೋಟಾರು ಬಯಸುವವನಲ್ಲ

ಬಂಡಿ,ಎತ್ತು ಬೇಕೆಂದು ಕೇಳುವವನಲ್ಲ

ಬಡವರ ಗಣಪನೆಂದು ಹೆಸರಾದಾತ


ಬೇವಿನ ಸೊಪ್ಪು ಕೆಂಪು ಚಂದ್ರ

ಹೂವಿನ ಅಲಂಕಾರವ ಗೈದುಕೊಂಡು

ದವಸ ಧಾನ್ಯವ ಬೇಡುತ ಬರುವರು

ನವೀರಾದ ಹಾಡನು ಹಾಡುತ ಊರಲ್ಲಿ

ದೇವ ಜೋಕುಮಾರನ ಒತ್ತು ತಿರುಗುವರ

ವಿವಿಧ ರೀತಿಯ ವರವ ಬೇಡುವರು ಜನರು


ಜೋಕುಮಾರ ಬಂದಾನ ಮನೆ ಮುಂದ ನಿಂತಾನ

ಜ್ವಾಕೀಲಿ ಏನಾರ ಕೊಡರವ್ವ ಎಂದು ಆಡುತಲೇ

ಮಕ್ಕಳು ಮರಿಗೆಲ್ಲ ಒಳ್ಳೆಯದು ಆಗಲೆವ್ವ ಎಂದು

ಜೋಕು ಪದವ ಆಡುವರು ಊರಲಿ ಗಂಗೆ ಮಕ್ಕಳು

ಯಾಕೋ ಹಳ್ಳಿಯ ಸೊಗಡು ಕಡಿಮೆ ಆಗುತ್ತಿದೆ

ಜೋಕುಮಾರನ ನೆನಪು ಮರೆಯಾಗದಿರಲಿ ನಮಗೆ


ರಚನೆ :

ಯಗುಮಾಶ

*ಶರಣಬಸಪ್ಪ ಎಂ‌ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*











Thursday, August 27, 2020

ಸ್ವರಚಿತ ಕವನ 27/08/2020

 *೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 

ಸಾಮಾನ್ಯವಾಗಿ ಮನಸನು ಮರ್ಕಟ ಎಂಬರು

ಸೀಮೆ ಎಂಬುದಿಲ್ಲ ಇದರ ಮಾಯಾ ಬಜಾರಕೆ

ಮಾಮರದ ಕೊಂಬೆಯಲಿ ಒಂದು ಕ್ಷಣವಿದ್ದರೆ

ಸಾಮ್ರಾಜ್ಯದ ಅರಸನಾಗುವ ಕನಸು ಕಾಣುತ್ತಾ

ಸಾಮಂತರೊಂದಿಗಿನ ಒಡನಾಟ ಒಂದೆಡೆ

ಸಾಮಾನ್ಯ ಪ್ರಜೆಗಳೊಡನೆ ಬೆರೆಯುವ ಆತುರಬೇರೆ


ಸಾಕು ಸಾಕಾಗಿ ಹೊಯ್ತು ಈ ಮನಸಿನ ಬಗೆಗೆ

ಕಾಕುತ್ಸ ಬುದ್ಧಿಯ ಬಿಡಲೊಲ್ಲದು ಈ ಮನವು

ಕ್ಯಾಕರಿಸಿ ಉಗಿದರು ಬುದ್ಧಿಯ ಬಾರದು ಇದಕೆ

ತಾಕಲಾಟವ ಮಾಡುವುದು ತಕರಾರು ತೆಗೆವದು

ಟೀಕು ಪಾಕು ಮಾತಲಿ ಮರುಳ ಮಾಡಿದೆ ಜನಕೆ

ತಾಕುವ ಮನಸನು ನಿಗ್ರಹಿಸಿದರೆ ಕುನ್ನಿಯಂತೆ ಬೀಳುವುದು


ರಚನೆ :

ಯಗುಮಾಶ

*ಶರಣಬಸಪ್ಪ ಗುಳೇದ*








            



*೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 

ಸಾಮಾನ್ಯವಾಗಿ ಮನಸನು ಮರ್ಕಟ ಎಂಬರು

ಸೀಮೆ ಎಂಬುದಿಲ್ಲ ಇದರ ಮಾಯಾ ಬಜಾರಕೆ

ಮಾಮರದ ಕೊಂಬೆಯಲಿ ಒಂದು ಕ್ಷಣವಿದ್ದರೆ

ಸಾಮ್ರಾಜ್ಯದ ಅರಸನಾಗುವ ಕನಸು ಕಾಣುತ್ತಾ

ಸಾಮಂತರೊಂದಿಗಿನ ಒಡನಾಟ ಒಂದೆಡೆ

ಸಾಮಾನ್ಯ ಪ್ರಜೆಗಳೊಡನೆ ಬೆರೆಯುವ ಆತುರಬೇರೆ


ಸಾಕು ಸಾಕಾಗಿ ಹೊಯ್ತು ಈ ಮನಸಿನ ಬಗೆಗೆ

ಕಾಕುತ್ಸ ಬುದ್ಧಿಯ ಬಿಡಲೊಲ್ಲದು ಈ ಮನವು

ಕ್ಯಾಕರಿಸಿ ಉಗಿದರು ಬುದ್ಧಿಯ ಬಾರದು ಇದಕೆ

ತಾಕಲಾಟವ ಮಾಡುವುದು ತಕರಾರು ತೆಗೆವದು

ಟೀಕು ಪಾಕು ಮಾತಲಿ ಮರುಳ ಮಾಡಿದೆ ಜನಕೆ

ತಾಕುವ ಮನಸನು ನಿಗ್ರಹಿಸಿದರೆ ಕುನ್ನಿಯಂತೆ ಬೀಳುವುದು


ರಚನೆ :

ಯಗುಮಾಶ

*ಶರಣಬಸಪ್ಪ ಗುಳೇದ*


*೧೪೧ನೇಗೋಷ್ಠಿ*

                  🍀🍀

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ* 

                  🌸🌸

     *ದಿನಾಂಕ-೨೭.೦೮.೨೦೨೦* 

                  🌹🌹

          *ವಾರ- ಗುರುವಾರ* 

                  🌼🌼

           *ವಿಷಯ-ಮನಸು* 

              *(ಗಜಪ್ರಾಸ)* 

                 🌿🌿

              ನಿರ್ವಹಣೆ

   *ಶ್ರೀಮತಿ ಮಂಗಳ ಕೆ.ಹೆಚ್* 


*ಗಜಪ್ರಾಸ*(ಷಟ್ಪದಿ)


ಪ್ರಾಸಾಕ್ಷರದ ಹಿಂದಿನ ಅಕ್ಷರವು ದೀರ್ಘಸ್ವರವಾಗಿರಬೇಕು


 *ಉದಾಹರಣೆ*


ಈ ಶನ ಕರುಣೆಯ

ನಾ ಶಿಸು ವಿನಯದಿ

ದಾ ಸನ ಹಾಗೆಯೇ ನೀಮನವೇ


ಶ,ಶಿ.ಸ ಇವು ಪ್ರಾಸ ಅಕ್ಷರಗಳು


ಇವುಗಳ ಹಿಂದಿನ ಅಕ್ಷರಗಳು


ಈ,ನಾ, ದಾ ಇವು ದೀರ್ಘಸ್ವರಗಳು

ವಿಷಯಕ್ಕೆ ತಕ್ಕಂತೆ ಕವಿತೆ ಸಾಗಬೇಕು

ಅರು ಸಾಲಿಗೂ 

ಬರುವಂತೆ ನೋಡಿಕೊಳ್ಳಬೇಕು

ಜೊತೆಗೆ ವಿಷಯ ವಿವರಿತವಾಗಬೇಕು

೧.ಆರು ಸಾಲಿನ ಪದ್ಯ ಎರಡು ಅಥವಾ ಮೂರು ಪದ್ಯ ಬರೆಯಿರಿ

೨.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

              🙏🙏🙏

 *ಮಧುನಾಯ್ಕ.ಲಂಬಾಣಿ*

 *ಬ.ಬ.ರಾ.ಘ.ಹೂ.ಹಡಗಲಿ*


*ಪ್ರಾಸ*


ಪದ್ಯದ ಪ್ರತಿಯೊಂದು ಸಾಲಿನಲ್ಲಿ ನಿಯತವಾದ ಸ್ಥಳದಲ್ಲಿ ಒಂದೇ ರೀತಿಯ  ಅಕ್ಷರಗಳು ನಿಯತವಾಗಿ ಬಂದರೆ ಅದನ್ನು ಪ್ರಾಸ ಎನ್ನಲಾಗುತ್ತದೆ 


ಈ ಪ್ರಾಸದ ಪ್ರಸ್ತಾಪ ಕನ್ನಡದಲ್ಲಿ ಮೊದಲು ಲಕ್ಷಣ ಗ್ರಂಥವಾದ ಕವಿರಾಜ ಮಾರ್ಗದಲ್ಲಿ ಕಂಡುಬರುತ್ತದೆ


 ಲಾಕ್ಷಣಿಕರು ೧೬ ವಿಧದಲ್ಲಿ ಪ್ರಾಸಗಳ ಗುರುತಿಸಿದ್ದಾರೆ..


ಒಂದನೇ ನಾಗವರ್ಮ ತನ್ನ ಛಂಧೋಬುದಿಯಲ್ಲಿ  ಪ್ರಾಸದಲ್ಲಿ ಆರು ವಿಧಗಳ ಗುರುತಿಸಿದ್ದಾನೆ... ಎಲ್ಲವೂ ಪದ್ಯದಲ್ಲಿ ಆದಿ ಪ್ರಾಸಗಳಾಗಿಯೇ ಗುರುತಿಸಿದ್ದಾನೆ..

ಆದಿ ಪ್ರಾಸಗಳಲ್ಲಿ ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವಾಗಿ ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.


ಇವುಗಳನ್ನು ಇಂದು ಪ್ರಮುಖವಾಗಿ ಬಳಸಲಾಗುತ್ತಿದೆ..

ಅವುಗಳಲ್ಲಿ ಒಂದಾದ ಈ


*ಗಜ ಪ್ರಾಸ* ದ ವಿವರಣೆ ಬಗ್ಗೆ ನೋಡೋಣ..


*ಗಜ ಪ್ರಾಸ*


ಆದಿ ಪ್ರಸಾಕ್ಷರದ ಹಿಂದಿನ ಅಕ್ಷರ.ದೀರ್ಘಾ ಸ್ವರವಾಗಿದ್ದರೆ ಅದನ್ನು ಗಜ ಪ್ರಾಸ ಎನ್ನುತ್ತಾರೆ


೧) ಉದಾ:-


*ಮಾತಾ ಪಿತರನು ಬಳಲಿಸಿದಾತನು*

*ಯಾತ್ರೆ ಮಾಡಿದರೇನು ಫಲ*



ಇಲ್ಲಿ  ತಾ, ತ್ರೆ ಗಳು ಪ್ರಾಸ ಪದಗಳು (ತ,ತಿ,ತು,ತೆ


ಮಾ, ಯಾ ಇವು ಪ್ರಾಸಾಕ್ಷರದ ಹಿಂದಿನ ಪದಗಳು

ಇವು ಧೀರ್ಘ ವಾಗಿದ್ದರೆ ಮುಗಿಯಿತು  


೨) ಉದಾ:-ಅದರಂತೆ ಮತ್ತೊಂದು ಪದ್ಯ.. ಗಮನಿಸಿ ನೋಡಿ


ಈಶನ ಕರುಣೆಯ

ನಾಶಿಸು ವಿನಯದಿ

ದಾಸನ ಹಾಗೆಯೆ ನೀ ಮನವೇ

ಕ್ಲೇಶದ ವಿಧ ವಿಧ

ಪಾಶದ ಹರಿದು ವಿ

ಲಾಸದಿ ಸತ್ಯವ ತಿಳಿ ಮನವೇ



ಈ ಮೇಲಿನಂತೆ  ಗಜಪ್ರಾಸವಿರುವ ಒಟ್ಟು ಆರು  ಸಾಲುಗಳುಳ್ಳ ೨, ೩ ಪದ್ಯಗಳನ್ನು ರಚಿಸುತ್ತೀರಲ್ಲವೇ 



 ಧನ್ಯವಾದಗಳು..






            





ಹತ್ತನೇ ಕನ್ನಡ ಸಂಕಲ್ಪ ಗೀತೆ ಪದ್ಯ 27/08/2020


 

Wednesday, August 26, 2020

ಸ್ವರಚಿತ ಕವನ ೨೬/೦೮/೨೦೨೦

 *೧೪೦ನೇಗೋಷ್ಠಿ*

                  🍀🍀

ಬರಹಗಾರರ ಬಳಗ ರಾಜ್ಯ ಘಟಕ

         ಹೂವಿನಹಡಗಲಿ

                  🌸🌸

     ದಿನಾಂಕ-೨೬.೦೮.೨೦೨೦

                  🌹🌹

          ವಾರ- ಬುಧವಾರ

                  🌼🌼

           ಕವನದ ಶೀರ್ಷಿಕೆ-ಪ್ರವಾಹ

                 (ಅಂತ್ಯಪ್ರಾಸ)

                      🌿🌿

ಜಲ ಪ್ರಳಯವಾದಾಗ ಎಲ್ಲೆಲ್ಲೂ ಆಕ್ರಂದನದಿ

ಅಬ್ಬರಿಸುವವು ಪ್ರಾಣಿಗಳು, ಪಕ್ಷಿಗಳು ನೆಲೆ ಇಲ್ಲದೆ

ಮನೆ-ಮಠ ಕಳೆದುಕೊಂಡವರ ಗೋಳು ನೋಡಲಾಗದು ಮನೆಯಲ್ಲಿ ಧಾನ-ಧರ್ಮ ಮಾಡಿದ ಕೈ ಕಾಣದು

ಒಂದೊತ್ತಿನ ಊಟ,ವಸ್ತ್ರ ಆಗ ಅರ್ಥವಾಗೋದು

ಜೀವ ಜೀವನದ ಬೆಲೆ ಈ ಹಾಳು ಪ್ರವಾಹದಿಂದ


ಜಗದಲಿ ಹಲವು ಪ್ರವಾಹಗಳ ನೋಡುತ್ತೇವೆ

ಜೀವನದಲಿಯ ಪ್ರವಾಹ ಸದಾ ಹರಿಯುತ್ತವೆ

ಸೂತ್ರವೆಂಬ ದಾರ ಕೈಗೆ ಸಿಗದೆ ಓಡುತ್ತಿವೆ

ಗಾಳಿಯು ಅದಕ್ಕೆಲ್ಲ ದಿಕ್ಕು ತಪ್ಪಿಸುತ್ತಿವೆ

ಒಯ್ದಾಟ ಒದ್ದಾಟಗಳ ನಡುವೆ ಸಾಗುತ್ತಿವೆ

ಜೀವನದಲಿ ಗೆಲ್ಲುಲು ಬೇಕು ಸಂಸಾರದ ಹಿಡಿತವ


ಸಿರಿತನದ ಸುಪ್ಪತ್ತಿಗೆಯನು ನೀ ನೆಚ್ಚದಿರು

ಮನುಜ ಶಾಶ್ವತವಲ್ಲದ ಜೀವನವ ಮರೆಯದಿರು

ಯಾವಾಗ ಬಿರುಗಾಳಿ ಬೀಸುವುದೋ ಹೆದರಿ

ಅಂಜಿಕೆಯ ಬಲೆಯಲಿ ದೊಪ್ಪನೆ ಬೀಳದಿರು

ನಿನ್ನಲ್ಲಿ ಇರುವತನಕ ಹಂಚಿಕೊಂಡು ತಿಂದು ಜನರ

ಕಷ್ಟಕೆ ಭಾಗಿಯಾಗಿ ಜೀವನ ಪ್ರವಾಹಕೆ ಮಾಡು ಪ್ರಹಾರ


ರಚನೆ:

ಯಗುಮಾಶ

*ಶ್ರೀ ಶರಣಬಸ್ಸಪ್ಪ ಗುಳೇದ*


              


*೧೪೦ನೇಗೋಷ್ಠಿ*
                  🍀🍀
ಬರಹಗಾರರ ಬಳಗ ರಾಜ್ಯ ಘಟಕ
         ಹೂವಿನಹಡಗಲಿ
                  🌸🌸
     ದಿನಾಂಕ-೨೬.೦೮.೨೦೨೦
                  🌹🌹
          ವಾರ- ಬುಧವಾರ
                  🌼🌼
           ವಿಷಯ-ಪ್ರವಾಹ
              (ಅಂತ್ಯಪ್ರಾಸ)
                 🌿🌿
              ನಿರ್ವಹಣೆ
         ಶ್ರೀ ಜ್ಯೋತಿನಾಯ್ಕ

*ಅಂತ್ಯಪ್ರಾಸ*(ಷಟ್ಪದಿ)

ಪದ್ಯದ ಪ್ರತಿ ಚರಣದ (ಸಾಲಿನ) ಕೊನೆಯ ಅಕ್ಷರ ಒಂದೇ ಆಗಿರಬೇಕು
 
*ಉದಾಹರಣೆ*

ನೀನಿರುವ ಮನೆಯಲ್ಲಿ ಹೊನ್ನ ದೀವಳಿಗೆ
ನನ್ನ ಮನಸ್ಸಿನ ತುಂಬ ನಿನ್ನ ನೆನಪಿನ ಮೆರವಣಿಗೆ.

ಗೆ...ಗೆ ಹೀಗೆ ಅರು ಸಾಲಿಗೂ ಗೆ
 ಬರುವಂತೆ ನೋಡಿಕೊಳ್ಳಬೇಕು
ಜೊತೆ ವಿಷಯ ವಿವರಿತವಾಗಬೇಕು
೧.ಆರು ಸಾಲಿನ ಪದ್ಯ ಎರಡು ಅಥವಾ ಮೂರು ಪದ್ಯ ಬರೆಯಿರಿ
೨.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
              🙏🙏🙏
 *ಮಧುನಾಯ್ಕ.ಲಂಬಾಣಿ*
 *ಬ.ಬ.ರಾ.ಘ.ಹೂ.ಹಡಗಲಿ*


Tuesday, August 25, 2020

ಸ್ವರಚಿತ ಕವನ ೨೫/೦೮/೨೦೨೦

 ಕವನದ ಶೀರ್ಷಿಕೆ:

"ಪ್ರಗತಿಯ ಪಥ"

                

               ೧

ನಮ್ಮ ಜನತೆಯ ಸತತ ದುಡಿಮೆ

ನಿರಂತರ ವೈಜ್ಞಾನಿಕ ಅನ್ವೇಷಣೆ

ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯನು

ಯುವ ಶಕ್ತಿಯ ಸದ್ಭಳಕೆಯನು

ಕೃಷಿ ಉತ್ಪನ್ನಗಳ ಅಭಿವೃದ್ಧಿಯಲಿ 

ಸಾಗಿದ ದೇಶ ಮುನ್ನಡೆಯುವದು ಪ್ರಗತಿ ಪಥದಲಿ 


                        ೨

ಮಾನವ ತನ್ನಲಿನ ಅಂಧಕಾರವ ಕಳೆದು

ಸುಜ್ಞಾನ,ಸದ್ಗುಣ, ಸದಾಚಾರ ಪಡೆದು 

ದುರ್ಗುಣ, ದುರಹಂಕಾರವ ತೊರೆದು

ದುಶ್ಚಟ, ದುರ್ಜನರ ಸಹವಾಸ ಬಿಟ್ಟುಬಿಡುವುದು

ಮಮಕಾರ,ಕರುಣೆ,ಸರಳ ಜೀವನಶೈಲಿ ರೂಢಿಯಿಂದ

ಜೀವನವೆಂಬ ಬಂಡಿ ಪ್ರಗತಿ ಪಥದಲಿ ಸಾಗುವುದು


ರಚನೆ:

ಯಗುಮಾಶ

*ಶರಣಬಸಪ್ಪ ಗುಳೇದ*


🌺 *೧೩೯ ನೇಗೊಷ್ಠಿ*


🍀 *ಬರಹಗಾರರ ಬಳಗ ರಾಜ್ಯ* *ಘಟಕ* 

         *ಹೂವಿನಹಡಗಲಿ* 


🌷ದಿನಾಂಕ- *೨೫.೦೮.೨೦.೨೦* 


🌹ವಾರ- *ಮಂಗಳವಾರ* 


🌼ವಿಷಯ- *ಪ್ರಗತಿಯ ಪಥ* 


✍️ ನಿರ್ವಹಣೆ- *ಶ್ರೀಮತಿ ಲಲಿತ* *ಕಪ್ಪರ್ ಮಠ* 


೧.ಕವಿತೆಯನ್ನು ಹನಿಗವನದಲ್ಲಿ ಬರೆಯಿರಿ


೨.ಹನಿಗವಿತೆ ಆರು ಸಾಲಿರುತ್ತದೆ


೩ ಆರು ಸಾಲಿನ ಎರಡು ಅಥವಾ ಮೂರು ಹನಿಗವಿತೆ ಬರೆಯಬೇಕು


೪ ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ



 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



          




ಸ್ವರಚಿತ ಕವನ ೨೪/೦೮/೨೦೨೦

 ಕವನದ ಶೀರ್ಷಿಕೆ:

"ಜೀವನ ಕಲಿಸೋ ಪಾಠ"

                     ೧

ಮಾನವ ತಾನು ದಿನಾಲು ಗಮನಿಸುತ ನಾನಾ

ವಿಧದ ವಿನೋದವಾದ ನವೀನತರ  ನಮ್ಮ ಭಾನು

ಭುವಿ,ಬಾನಿನಲಿ ನಿತ್ಯ ನೂತನ ವಿಚಾರಗಳನು

ನೋಡುತ ತನ್ನ ಆಯುಷ್ಯವನು ಕಳೆಯುವನು

ತನ್ನ ನೆಚ್ಚಿನರೊಟ್ಟಿಗೆ ಆನಂದದಿ ನಕ್ಕು ನಲಿಯುವನು 

                           ೨

ತನ್ನಲ್ಲಿ ಹಣವಿದ್ದಾಗ ಕಷ್ಟದಲ್ಲಿವರ ಗೋಳು ಗೋಳನು

ನೋಡನು ದುಃಖದಲಿ ತನ್ನವರು ಯಾರು ಯಾರು

ಸಹಾಯ ಮಾಡಲಿಲ್ಲ ಎಂದು ಕೊರಗೆ ಕೊರಗುವನು

ಇದೆ ನೋಡು ಪ್ರಕೃತಿಯು ಕಲಿಸುವ ಪಾಠ ಪಾಠ

ಅದಕೆ ಜೋಪಾನ ಮಾಡಿಕೋ ಜೀವನ ಜೀವನ

                          ೩

ತನ್ನವರನು ನಂಬುವವ ಗೆಲ್ಲುವನು

ತನ್ನವರನು ನಂಬದಿರುವವ ಹಾಳಾಗುವನು

ತನ್ನವರು ತನ್ನ ತಿಳಿದವರು ಕಾಪಾಡುವರು

ಮರೆಯದಿರು ಸ್ಥಿರವಲ್ಲದ ಕಾಯವ ನೆಚ್ಚದಿರು

ಮರೆಯದಿರು ತನ್ನವರೇ ನಿನ್ನ ನೋಡುವರು

                           ೪

ಯಾಕೋ ಈ ಜೀವನ ನನ್ದು ನಿನ್ದು ಎನ್ದು

ಬನ್ದು ಭಾನ್ದವರ ಬನ್ದನವ ಭಂನ್ದುತ್ವವ

ಕಳೆದು ಕೊಂಡು ಅಂನ್ದದ ಚಂನ್ದದ ಕುಂನ್ದದ

ಸನ್ಬಂಧದ ಬನ್ದಿಯಾಗಿ ನೆಡೆಯುವದು ಕಲ್ತುಕೋ

ಒನ್ದಾಗಿ ಚನ್ದಾಗಿ ಬಾಳ್ವುದೆ ಜೀವನ ಕಲಿಸೋ ಪಾಠ


ರಚನೆ:

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ||ಯಾದಗಿರಿ*

ಮೋಬೈಲ್ :8655244334


🌹 *೧೩೮ನೇ ಗೋಷ್ಠಿ* 


*ಬರಹಗಾರರ ಬಳಗ ರಾಜ್ಯ ಘಟಕ* 

       *ಹೂವಿನಹಡಗಲಿ* 

                 🌻🌻

     *ದಿನಾಂಕ-೨೪.೦೮.೨೦೨೦* 

                 🌺🌺

         ವಾರ- ಸೋಮವಾರ

                  🌸🌸

 *ನಿರ್ವಹಣೆ- ಶ್ರೀಮತಿ ಸಂಧ್ಯಾರಾವ್* 

                    🍀🍀

ಹೊಸದೊಂದು ಪ್ರಕಾರಕ್ಕೆ ತಮಗೆ ಸ್ವಾಗತ.  ಹೆಸರು *ಅಲಂಕೃತ* 

ಪ್ರತಿಯೊಬ್ಬರು ಒಂದು ಕವಿತೆಯನ್ನು ಬರೆಯಬೇಕು

ಅದನ್ನು ಕವನ ಸಂಕಲನ ಮಾಡಲಾಗುವುದು.ಆದರೆ ಒಬ್ಬರು ನಾಲ್ಕು ಪುಸ್ತಕಗಳನ್ನು ಕೊಂಡುಕೊಳ್ಳಬೇಕು.ಈ ಪುಸ್ತಕವನ್ನು ಬಳಗದ ಸಾಹಿತ್ಯ ಪ್ರೇಮಿಗಳಾದ *ಶ್ರೀ ಅನಿಲ್ ಆಚಾರ*  ಇವರು ಪ್ರಕಾಶಕರು ಮತ್ತು ಮುದ್ರಕರು ಬೆಂಗಳೂರು

ಮುದ್ರಿಸಿ ಕೊಡಲಿದ್ದಾರೆ.ದಯವಿಟ್ಟು ಎಲ್ಲರೂ ಬರೆಯಿರಿ

             *ಅಲಂಕೃತ* 

ಅಲಂಕಾರಗಳಲ್ಲಿ ನಾಲ್ಕು ಅಲಂಕಾರವಿಧಾನಗಳನ್ನು ಮಾತ್ರ ಇಲ್ಲಿ ಬಳಸಲಾಗಿದೆ

 

*೧ ವೃತ್ತ್ಯನುಪ್ರಾಸಅಲಂಕಾರ* 

ಪದ್ಯದ ಒಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಬಿಡಿಬಿಡಿಯಾಗಿ ಮತ್ತೆ ಮತ್ತೆ ಪುನರಾವರ್ತನೆ ಗೊಳ್ಳಬೇಕು

ಐದುಸಾಲಿನಲ್ಲಿ  ಬಂದರೆ ಸರಿ ಆದರೆ ಕಡ್ಡಾಯವಾಗಿ ಮೂರು ಸಾಲಿನಲ್ಲಿ ಬರಲೇ ಬೇಕು

 *ಭವದ ಬಂಧನದಲಿ ಬದುಕುವರು* 

 *ಭವ್ಯ ಬದುಕಿನ ಭರಾಟಯಲಿ* 

 *ಸವೆದು ಸವೆದು ಸೊರಗಿ ಹೋಗ್ವರು* 

 *ಮರೆತು ಮಮತೆ ಮಮಕಾರ* 

 *ಮರೆತು ಮಾನವ ಜನ್ಮವ* 

(ಇಲ್ಲಿ ಭ,ಬ,ವ,ಸ,ಮ,ಮ ಇವು ಒಂದೇ ಸಾಲಿನಲ್ಲಿ ಮತ್ತೆ ಮತ್ತೆ ಬಳಕೆಯಾಗಿವೆ ) 


*೨.ಛೇಕಾನುಪ್ರಾಸಅಲಂಕಾರ* 

ಪದ್ಯದಲ್ಲಿ  ವ್ಯಂಜನಾಕ್ಷರಗಳಿರುವ ಪದಗಳು ಜೋಡಿಯಾಗಿ ಪುನರಾವರ್ತನೆಯಾಗುತ್ತಿರಬೇಕು

 *ಕಾಡಿ ಕಾಡಿ ಕಳೆದು ಹೋಗ್ವರು* 

 *ಬೇಡಿ ಬೇಡಿ ಬಾಡಿಹೋಗ್ವರು* 

 *ಮಾಡಿ ಮಾಡಿ ಮೋಸವನು* 

 *ನರಳಿ ನರಳಿ ಸಾಯ್ವರು* 

 *ಬೇಡ ಬೇಡ ಮನುಜ ಬಾಗಿ* *ಮನುಜ* 

ಇಲ್ಲಿ ಕಾಡಿ ಕಾಡಿ ಬೇಡಿ ಬೇಡಿ,ಮಾಡಿ ಮಾಡಿ ಬೇಡಬೇಡ ನರಳಿ ನರಳಿ ಹೀಗೆ ವ್ಯಂಜನಾಕ್ಷರಗಳಿರುವ ಪದಗಳು ಜೋಡಿಯಾಗಿ ಬರಬೇಕು ಐದು ಸಾಲಿನಲ್ಲಿ ಕನಿಷ್ಟ ಮೂರು ಸಾಲಿನಲ್ಲಿ ಪ್ರಯೋಗಿಸಲ್ಪಡಬೇಕು ಐದು ಸಾಲಿನಲ್ಲಿ ಬಂದರೂ ಸರಿ)

    

     *೩.ಯಮಕಾಲಂಕಾರ* 

ಮೂರು ಅಥವಾ ಮೂರಕ್ಕಿಂತ ಹೆಚ್ಚು ಅಕ್ಷರಗಳಿರು ಪದಗಳು  ಪದ್ಯದ ಮೊದಲು,ಮದ್ಯ ಅಥವಾ ಕೊನೆಯಲ್ಲಿ ಮತ್ತೆ ಮತ್ತೆ ಪ್ರಯೋಗವಾಗಬೇಕು

 *ಮದದಿ ಮೆರೆವರು ಮನುಜರು* 

 *ಮುದವಿಲ್ಲದೇ ಮದದಿ* 

 *ಮರೆತು ಹೋಗ್ವರು ಮದದಿಂ* 

 *ಮರೆತು ಮಾನವೀಯತೆಯನು* 

 *ಮರೆತು ಮಾನವ ಜನ್ಮವ* 

ಇಲ್ಲಿ ಮದದಿ ಮತ್ತು ಮರೆತು 

ಎನ್ನುವ ಪದಗಳು ಸಾಲಿನ ಮೊದಲಿಗೆ ಬಂದಿವೆ ಆದರೆ ಸಾಲಿನ ಮದ್ಯ ಮತ್ತು ಕೊನೆಯಲ್ಲೂ ಕ್ರಮಾನುಗತವಾಗಿ ಬರಬಹುದು)

    

 *೪.ಚಿತ್ರಕವಿತ್ವ ಅಲಂಕಾರ* 

ಅಕ್ಷರಗಳನ್ನು ಆರಿಸಿ ಜೋಡಿಸಿ ವೈಚಿತ್ರ್ಯ ಪೂರ್ಣವಾಗಿ ಪದಗಳನ್ನು ಮಾಡಿ ಪದ್ಯ ರಚಿಸಬೇಕು

*ಚನ್ದದನ್ದದ ಜೀವವಿದು* 

 *ನನ್ದೆಲ್ಲಾ ನಿನ್ದೇನಿಲ್ಲ ಎನ್ದು* 

 *ಅಹಂನಿಂದ* *ಮುಂನ್ದಿದೇನೆನ್ದರಿಯದೇ* *

 *ಮಧಾನ್ದರಾಗಿ* *ಮರಣಿಸುವರು** 

 *ಮತಿಯಿಲ್ಲದೇ ಮನುಜರು* 

ಇಲ್ಲಿ ಚೆಂದ ಅಂದದ ಬದಲಿಗೆ *ಚನ್ದದನ್ದದ* ,ನನ್ನದೆಲ್ಲಾ ಬದಲಿಗೆ *ನನ್ದೆಲಾ*  ನಿನ್ನದೇನಿಲ್ಲಾ ಬದಲಿಗೆ *ನಿನ್ದೇನಿಲ್ಲಾ* 

ಮಂದ ಬದಲಿಗೆ *ಮನ್ದ* 

ಹೀಗೆ ಜೋಡಿಸಿ ಬರೆಯುವುದು ಐದು ಸಾಲಿನಲ್ಲಿ ಬಂದರೂ ಸರಿ ಆದರೆ ಕನಿಷ್ಟ ಮೂರುಸಾಲಿನಲ್ಲಿ ಬರಬೇಕು)


ಈಮೇಲಿನ ನಿಯಮದಂತೆ ಕವಿತೆ ರಚನೆಯಾಗಬೇಕು


ಐದು ಸಾಲಿನ ನಾಲ್ಕು ಪದ್ಯ ಮಾತ್ರ ಬರೆಯಬೇಕು


ಅರ್ಥಕೆಡಬಾರದು


 *ಮಧುನಾಯ್ಕ.ಲಂಬಾಣಿ*


ಸರಳವಾಗಿಯೋ

ಚಿಸಿ ಬರೆಯಿರಿ


 *ವೃತ್ತ್ಯನುಪ್ರಾಸದಲ್ಲಿ* ಪ್ರತಿಯೊಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು ಐದು ಸಾಲಿನಲ್ಲಿ ಬೇರೆ ಬೇರೆ ಪದ ಬರಬೇಕು


 *ಛೇಕಾನುಪ್ರಾಸದಲ್ಲಿ* 

ಪ್ರತಿ ಸಾಲಿನಲ್ಲಿ ವ್ಯಂಜನಾಕ್ಷರಗಳ ಜೋಡಿ ಪದ ಬಳಸಬೇಕು

ಅವು ಬೇರೆ ಬೇರೆ ಆಗಿರಬೇಕು ಅಂದರೆ ಮೊದಲ ಸಾಲಿನಲ್ಲಿ ಬಳಸಿದ ಪದವನ್ನು ಮತ್ತೊಂದು ಸಾಲಿನಲ್ಲಿ ಬಳಸಬಾರದು


 *ಯಮಕಾಲಂಕಾರ* ದಲ್ಲಿ

ಮೂರು ಅಥವಾ ಮೂರಕ್ಕಿಂತ ಹೆಚ್ಚು ಅಕ್ಷರವಿರುವ ಪದವು

ಪ್ರತಿ ಸಾಲಿ ಆದಿ ಮಧ್ಯೆ ಅಂತ್ಯದಲ್ಲಾಗಲಿ ತಾವು ಎಲ್ಲಿ ಬಳಸುವಿರೋw,sww,wq,wz,qa ಅದೇ ರೀತಿಯಾಗಿ ಐದು ಸಾಲಿನಲ್ಲಿ ಬರಬೇಕು ಮೊದಲ ಸಾಲಿನಲಗಲಿ ಆದಿಯಾಗಿದ್ದರೆ ಅದು ಉಳಿದ ನಾಲ್ಕು ಸಾಲಿನಲ್ಲಿ ಆದಿಯಾಗಿರಬೇಕು ಮೊದಲಸಾಲಿನಲ್ಲಿ ಮಧ್ಯೆ ಬಳಸಿದ್ದರೆ ಅದು ಉಳಿದ ನಾಲ್ಕು ಸಾಲಿನ ಮಧ್ಯೆ ಬರಬೇಕು ಹೀಗೆ ಸಾಗಬೇಕು


 *ಚಿತ್ರಕಬಿತ್ವ ಅಲಂಕಾರ* ದಲ್ಲಿ

ಅಕ್ಷರಗಳನ್ನು ಆರಿಸಿ ಜೋಡಿಸಿ ಸುಂದರವಾಗಿ ಪದರಚನೆ ಮಾಡುವುದು

ಐದು ಸಾಲಿನಲ್ಲಿ ಬಳಕೆಯಾಗಬೇಕು


ಈ ನಾಲ್ಕು ಅಲಂಕಾರದ ಪ್ರಕಾರಗಳನ್ನು ಬಳಸಿ ಇಪ್ಪತ್ತು ಸಾಲಿನ ಒಂದು ಸುಂದರ ಕವಿತೆ ಬರೆಯಬೇಕು ಅದು ಒಂದೇ ಅರ್ಥ ಕೊಡಬೇಕು


 *ಮಧುನಾಯ್ಕ.ಲಂಬಾಣಿ*

8th kannada Samveda class 25/08/2020

 

Sunday, August 23, 2020

ಸ್ವರಚಿತ ಕವನ ೨೩/೦೮/೨೦೨೦

 ಕಾವ್ಯ ಚೇತನ ಪ್ರಶಸ್ತಿ ಪ್ರಧಾನ ನೋಡಲು ಇಲ್ಲಿ ಕ್ಲಿಕ್ ಮಾಡಿ

ಕವನದ ಶೀರ್ಷಿಕೆ:

"ಮೋಹ,ವ್ಯಾಮೋಹ"


ಬದುಕಿನಲಿ ಭವಣೆಗೆ ಕಾರಣ ಈ ಮೋಹ

ಜಗದಲಿ  ತೊರೆದರೆ ಈ ಹುಚ್ಚು ವ್ಯಾಮೋಹ

ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ

ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ


ಗಂಡು ಹೆಣ್ಣಿನ ನಡುವಿನ ಈ ಮೋಹ

ಅದುವೇ ಪ್ರೀತಿಯ ‌ಉತ್ತುಂಗದ ವ್ಯಾಮೋಹ

ತಂದೆ ತಾಯಿಯು ಮಕ್ಕಳಿಗೆ ತೋರಿಸುವರು

ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ


ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ

ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ

ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ

ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ


ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ

ಎಂಬ ಭಾವದಿ ನಂಬಿ ನಡೆಯುವುದೋಂದೆ

ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು

ಆಗ ಆಗುವುದು ಸರ್ವಜನಾಂಗದ ಶಾಂತಿಯ ತೋಟವೆಂದು


ರಚನೆ :

*ಯಗುಮಾಶ*

(ಶರಣಬಸಪ್ಪ ಎಂ ಗುಳೇದ)

ಕವನದ ಶೀರ್ಷಿಕೆ:

"ಮೋಹ,ವ್ಯಾಮೋಹ"


ಬದುಕಿನಲಿ ಭವಣೆಗೆ ಕಾರಣ ಈ ಮೋಹ

ಜಗದಲಿ  ತೊರೆದರೆ ಈ ಹುಚ್ಚು ವ್ಯಾಮೋಹ

ಅವರೆ ಜಗತ್ಪ್ರಸಿದ್ಧ ಶ್ರೇಷ್ಠ ಮಹಾನ್ ಸಂತರ

ಒಳ್ಳೆಯ ಕಾರ್ಯಕ್ಕೆ ಬಳಸಬೇಕು ಈ ಮೋಹ


ಗಂಡು ಹೆಣ್ಣಿನ ನಡುವಿನ ಈ ಮೋಹ

ಅದುವೇ ಪ್ರೀತಿಯ ‌ಉತ್ತುಂಗದ ವ್ಯಾಮೋಹ

ತಂದೆ ತಾಯಿಯು ಮಕ್ಕಳಿಗೆ ತೋರಿಸುವರು

ಪರಮ ಪವಿತ್ರವಾದ ಪ್ರೀತಿ ವಾತ್ಸಲ್ಯದ ಮೋಹ


ಪ್ರಕೃತಿಯ ಮಡಿಲಲ್ಲಿ ಎಲ್ಲರೂ ಬೀಳುವರು ಮೋಹ

ಎಂಬ ಬೆಲೆಯಲ್ಲಿ ಅದನಳಿಯಲು ಈ ಮೋಹ

ಪಾಶದಿ ಬಿಡುಗಡೆ ಪಡೆಯಲು ನಾನು ಎಂಬ

ಅಹಂಕಾರವ ಕಳಚಿದರೆ ಸದ್ದಿಲ್ಲದೆ ಓಡಿತು ಮೋಹ


ವಿಶ್ವಭ್ರಾತೃತ್ವವ ತಳೆದು ಮನುಜರೆಲ್ಲ ಒಂದೆ

ಎಂಬ ಭಾವದಿ ನಂಬಿ ನಡೆಯುವುದೋಂದೆ

ಮಾರ್ಗ ಸರ್ವರು ಸ್ವಾರ್ಥವ ತೊರೆದು ಬಾಳಬೇಕು

ಆಗ ಸರ್ವಜನಾಂಗದ ಶಾಂತಿಯ ತೋಟವಾಗುವುದು


ರಚನೆ :

*ಯಗುಮಾಶ*

(ಶರಣಬಸಪ್ಪ ಎಂ ಗುಳೇದ)



🌷 *೧೩೭ನೇ ಗೋಷ್ಠಿ* 🌷

                🌸🌸🌸

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ* 

                ☘️☘️☘️

            *ವಾರ-ಭಾನುವಾರ* 

                🌺🌺🌺

      *ದಿನಾಂಕ-೨೩.೦೮.೨೦೨೦* 

                🌼🌼🌼

  *ವಿಷಯ-ಮೋಹ(ರುಬಾಯಿಪ್ರಕಾರ)* 

                🌹🌹🌹

 *ನಿರ್ವಹಣೆ-ಶ್ರೀಚಂದ್ರಕಾಂತ ಚವ್ಹಾಣ್* 

               🌼🌼🌼

               *ಗಮನಿಸಿ* 

೧.ಕವಿತೆ ರುಬಾಯಿ ಪ್ರಕಾರ ಇರಬೇಕು


೨.ರುಬಾಯಿ ನಾಲ್ಕು ಸಾಲಿರುತ್ತದೆ


೩.ಇಲ್ಲಿ ೧.೨. ಮತ್ತು ನಾಲ್ಕನೇ ಸಾಲಿನಲ್ಲಿ ಅಂತ್ಯ ಪ್ರಾಸವಿರುತ್ತದೆ


೪.ಮೂರನೆ ಸಾಲು ಅಂತ್ಯಪ್ರಾಸ ಇರುವುದಿಲ್ಲ


೫.ನಾಲ್ಕು ಅಥವಾ ಐದು ಪದ್ಯ ಬರೆಯಿರಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




Saturday, August 22, 2020

ಸ್ವರಚಿತ ಕವನ ೨೨/೦೮/೨೦೨೦

 ಯಾದಗಿರಿ ನ್ಯೂಸ್ ಪತ್ರಿಕೆಯಲ್ಲಿ ನನ್ನ ಕವನ ಪ್ರಕಟ

ಇದನ್ನು ವೀಕ್ಷಿಸಲು ☝️ ಇಲ್ಲಿ ಕ್ಲಿಕ್ ಮಾಡಿ


ಕವನದ ಶೀರ್ಷಿಕೆ:

"ಗಜಾನನ"

(ಭಾಮಿನಿ ಷಟ್ಪದಿ ಪ್ರಕಾರದ ರಚನೆಗೆ ಪ್ರಯತ್ನ)


ಗೌರಿ ಹಬ್ಬವ ಕಳೆದ ನಂತರ

ಗೌರಿ ಶಂಕರ ತನಯ ಬರುವನು

ಧರೆಯ ಮೇಲಿನ ಜನನ ಮರಣಗಳ ಗೆದ್ದವ ನೀನು

ಕರದಲಿ ತರತರಹದ ಲಾಡನು

ಪರಮ ಪೂಜೆಯ ಬಯಸಿ ನಾಡಿಗೆ

ವರವ ನೀಡುವ ಗಜಾನನಗಜಮುಖನೆ ಕಾಪಾಡು


ನಿನ್ನ ಮೇಲಿನ ನಂಬಿಕೆಯನ್ನು

ಭಿನ್ನ ರೀತಿಯ ಆಚರಣೆಯನು

ಜನರು ಮಾಡುವರು ಅನುನಯನದಲಿ ಕೃಪೆಮಾಡುಗಜಾ

ನನನೆ ಗಣಪತಿಯೆ ನಿನಗೆ ನಮಿಪೆ

ನಿನ್ನ ಪೂಜೆಗೆ ಜಾತಿ ಬೇಧವ

ತಾನು ಮನದಲ್ಲಿ ಮೇಲುಕೀಳು ಅರಿಯದ ಗಣಪತಿಯೇ


ಜಗದಲಿ ನಡೆದಿರುವ ಕರೋನಾ

ಖಗದಲಿಯು ಕಾಣದೆ ಪಯಣಿಸಲಿ

ಹಾಗೆಯೇ ನಡುಗುತ ಅಂಜುತ ಓಡಿ ಹೋಗುವುದೇ

ಗಗನ ಬಾನಿನಲಿ ಸುಳಿಯದಂತೆ

ಜಗಕೆ ಸಂತಸ ನೀಡು ಗಣಪತಿ

ಜಗದ ಸುಖದುಃಖಗಳ ಸಮವಾಗಿ ಕಾಣುವಂತೆ ಮಾಡು


ರಚನೆ

ಯಗುಮಾಶ

(ಶರಣಬಸಪ್ಪ ಗುಳೇದ)


🌷 *೧೩೭ನೇ ಗೋಷ್ಠಿ* 🌷
 *ಬರಹಗಾರರ ಬಳಗ ರಾಜ್ಯ ಘಟಕ* 
          *ಹೂವಿನಹಡಗಲ* 
🌹 *ವಾರ-ಶನಿವಾರ* 
 🌷 *ದಿನಾಂಕ-೨೨.೦೮.೨೦೨೦** 
 🌻 *ವಿಷಯ-ಮದ(ಸವಿಸಪ್ರಕಾರ* 
 🍀 *ನಿರ್ವಹಣೆ-ಶ್ರೀಚಿದಾನಂದ* *ಕಾನಹಳ್ಳಿ* 
 🌸 *ಸವಿಸ ಪ್ರಕಾರದ ಪರಿಚಯ* 
*ಸ-ವಿ-ಸ ಪದದ ವಿಸ್ತೃತ ರೂಪ*
*ಸ- ಸಮಾನಾರ್ಥಕ ಪದ*
*ವಿ- ವಿರುದ್ಧ ಪದ*
*ಸ- ಸಮಾಸ ಪದ*
೧) ಇದು ಒಂದು ಹೊಸ ವಿಷಯ ಎಲ್ಲೂ ಸಿಗುವುದಿಲ್ಲ.
೨) ಇದು ಆರು ಸಾಲಿನ ಪದ್ಯ ಆರು ಸಾಲಿನಲ್ಲಿ ಯಾವುದಾದರೂ ಸಾಲಿನಲ್ಲಿ ಕನಿಷ್ಟ ಮೂರು ವ್ಯಾಕರಣಾಂಶಗಳು ಬಂದಿರಬೇಕು ಅದಕ್ಕಿಂತ ಹೆಚ್ಚುಬಾರಿ ಬಂದರು
ಪರವಾಗಿಲ್ಲ
 
ಉದಾಹರಣೆಗೆ        
 ಸವಿಸ ಪ್ರಕಾರ   
*ಮದಾಂಧರು*

ಮೋಹ ತುಂಬಿದ ಮನ್ಮಥರವರು
ಸುಖ ದುಃಖವ ಸಮದೂಗಿಸದೆ
ಸಂಪ್ರದಾಯವ ತೂರಿ ನಡೆಯುವವರು..!
ಪ್ರೀತಿ ಪ್ರೇಮದ ಹೊಸ್ತಿಲಲ್ಲಿ ಬೆಳೆದು
ದಯೆ ದಾಕ್ಷಿಣ್ಯದ ಸತ್ವವರಿಯದೆ
ಹೆಬ್ಬಂಡೆಯಂತೆ ವರ್ತಿಸುವ ಮದಾಂಧರು..!!

ಸತ್ಯ ಸಂಗತಿಗಳ ಮಿಥ್ಯವಾಗಿಸುತ
ನೀತಿ ನಿಯಮಗಳ ತುಳಿಯುತಲಿ
ನೋವು ನಲಿವಿನ ಮಾರ್ಗವರಿಯದವರು.!
ಸರಳ ಸುಲಭ ಬವಣೆಯನೆದುರಿಸದೆ
ಹೆಮ್ಮರವಾಗಿಸಿ ನಿತ್ಯ ಬಿಂಬಿಸುತಲಿ
ಕಠಿಣ ಹಾದಿಯಲಿ ಸಾಗುವ ಮದಾಂಧರು..!!

ಸಮಾಜದಿ ಸುಜನರಂತೆ ಬದುಕುತ
ಸಮಾಜ ಬಾಹಿರ ಕಾರ್ಯವೆಸಗುತ
ಒಳಿತು ಕೆಡುಕಿನರಿವಿಲ್ಲದ ಮೃಗೀಯರವರು..!
ಆನಂದ ಹರುಷದ ಬದುಕಿಗೆ ಕುಕ್ಕುತ
ಕಠೋರತನ ತುಂಬಿ ಮದ್ದಾನೆಯಂತೆ
ಮುಂದೆಲೆಯನು ಕೊಡವುವ ಮದಾಂಧರು..!!

                   *✍...ಚಿಕಾಕೋ*
*ಚಿದಾನಂದಕಾನಹಳ್ಳಿಕೋಡಿಹಳ್ಳಿ.*
೩)ಆರು ಸಾಲಿನ ಪದ್ಯ ೩ ರಿಂದ ೪ ಪದ್ಯಬರೆಯಿರಿ

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

*✍️ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನ ಹಡಗಲಿ*
🌷🌷🌷🌷🌷🌷🌷🌷🌷🌷🌷

*ಸವಿಸ ಹೊಸ ಸಾಹಿತ್ಯದ ಪ್ರಕಾರದ ಸಂಪೂರ್ಣ ಪರಿಚಯದೊಂದಿಗೆ*
*ಚಿದಾನಂದ್ ಕಾನಹಳ್ಳಿ.ಕೋಡಿಹಳ್ಳಿ*
✍️✍️✍️✍️✍️✍️✍️✍️✍️✍️

 - ಸ್ನೇಹಿತರೆ ,
ಈಗಾಗಲೆ ನಮ್ಮ ಬಳಗದಲ್ಲಿ *ಅದ್ವಿಜೋ* ಎನ್ನುವ ಹೊಸ ಪ್ರಕಾರ ಬೆಳಕಿಗೆ ಬಂದು, ನಾವೆಲ್ಲರೂ ಆ ಒಂದು ಶೈಲಿಯಲ್ಲಿ ಕವಿತೆಗಳನ್ನ ಬರೆದು ಕಲಿತಿದ್ದೇವೆ. ಈಗಲೂ ಕಲಿಯುತ್ತಲೂ ಇದ್ದೇವೆ. 

ಅಂತಹ ನಿಟ್ಟಿನಲ್ಲಿ ಇದೂ ಒಂದು ಹೊಸ ಪ್ರಕಾರವಾಗಿದ್ದು, ಕನ್ನಡದ ಮೂರು ವ್ಯಾಕರಣಾಂಶ ಪದಗಳ ಅನುಸಾರ, ನನ್ನ ವಿವೇಚನಾ ಶೈಲಿಯಲ್ಲಿ ಹೊಸ ಪ್ರಕಾರದ ಕವಿತೆ ರಚನೆ ಮಾಡಲು ಪ್ರಯತ್ನಿಸಿದ್ದೇನೆ. ಅಲ್ಲದೆ, ಇದಕ್ಕೆ *ಸವಿಸ* ಪ್ರಕಾರವೆಂದು ಹೆಸರಿಸಿ, ಹೊಸತನದ ಬೆಳವಣಿಗೆಗೆ ಕಿರು ಹೆಜ್ಜೆಯನಿಡಲು ತಮ್ಮೆಲ್ಲರ ಸಹಕಾರದೊಂದಿಗೆ ಕಾತರನಾಗಿದ್ದೇನೆ.
 ಈ *ಸವಿಸ* ಪ್ರಕಾರವನ್ನ ನಾವೆಲ್ಲರೂ ಕಲಿತು, ಕಲಿಸೋಣ. ಇದರ ಪ್ರಖರತೆಯ ನಿರೀಕ್ಷೆಯಲ್ಲಿ ಸಾಗೋಣ ಅಂತ ಹೇಳ್ತಾ, ಇವಾಗ ತಮ್ಮ ಮನದಲ್ಲೊಂದು ಚಿಕ್ಕ ಯೋಚನೆ ಬಂದಿರಬಹುದು *ಸವಿಸ* ಅಂದ್ರೆ ಏನು..? ಅಂತ. ಕವಿ ಮಿತ್ರರೆ ಅದು ಬೇರೆ ಏನೂ ಅಲ್ಲ. 

*ಸ-ವಿ-ಸ ಪದದ ವಿಸ್ತೃತ ರೂಪ*-

*ಸ - ಸಮಾನಾರ್ಥಕ ಪದಬಳಕೆ*
*ವಿ - ವಿರುದ್ಧಾರ್ಥಕ ಪದಬಳಕೆ*
*ಸ - ಸಮಾಸ ಪದಗಳ ಬಳಕೆ* 

ಏನಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ಸಲಹೆ ಸೂಚನೆ ನೀಡುತ್ತೀರೆನ್ನುವ ಆಶಾಭಾವನೆಯೊಂದಿಗೆ....
   *ಹೊಸತನದ ಹೆಜ್ಜೆಯಲ್ಲಿ ನಾವು ನೀವು.* 

*ನಿಯಮಗಳು -* 

೧. ಆರು ಸಾಲುಗಳುಳ್ಳ ಒಂದು ಪದ್ಯ
೨. ಪ್ರತಿ ಪದ್ಯದಲ್ಲೂ *ಸವಿಸ* ಪದ ಬಳಕೆಯಾಗಿ ಅರ್ಥಪೂರ್ಣ ಭಾವ ತುಂಬಬೇಕು 
೩. ಯಾವುದೇ ರೀತಿಯ ಗೊಂದಲ, ಅಭಾಸವಾಗದ ರೀತಿ ಕವಿತೆ ರಚನೆಯಾಗಬೇಕು.
೪. ಕವಿತೆಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಪದ್ಯ ಇರಬೇಕು. ಹೆಚ್ಚಾದರೂ ತೊಂದರೆಯಿಲ್ಲ. ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಕೇವಲ ಪದಗಳಿಗೆ ಕಟ್ಟುಬಿದ್ದು ಚರಣ ಕಟ್ಟುವುದು ಬೇಡ. ಆದರೆ ಆ ಮೂರು *ಸ ವಿ ಸ* ಪದಗಳು ಬಳಕೆಯಾಗಲೇಬೇಕು.
೫. *ಸವಿಸ* ದಲ್ಲಿ ಯಾವ ಪದಗಳನ್ನಾದರೂ ಪ್ರಥಮವಾಗಿ ಬಳಸಬಹುದು ಆದರೆ ಅರ್ಥದ ಕಡೆ ಗಮನವಿರಲಿ.
೬. ಶಿರೋನಾಮೆಗೆ ಅನುಸಾರ ಕವಿತೆ ರಚಿಸಬೇಕು.
೭. ವಿರುದ್ಧಾರ್ಥಕ ಪದಗಳು ಜೊತೆಯಾಗಿಯೇ ಬಳಕೆಯಾಗಬೇಕು. ಆದರೆ ಅರ್ಥ ಅನರ್ಥವಾಗಬಾರದು.
*.................................................*

*ಉದಾಹರಣೆಗೆ:-*

ಉದಾಹರಣೆಗೆ        
 ಸವಿಸ ಪ್ರಕಾರ   
*ಮದಾಂಧರು*

ಮೋಹ ತುಂಬಿದ ಮನ್ಮಥರವರು
ಸುಖ ದುಃಖವ ಸಮದೂಗಿಸದೆ
ಸಂಪ್ರದಾಯವ ತೂರಿ ನಡೆಯುವವರು..!
ಪ್ರೀತಿ ಪ್ರೇಮದ ಹೊಸ್ತಿಲಲ್ಲಿ ಬೆಳೆದು
ದಯೆ ದಾಕ್ಷಿಣ್ಯದ ಸತ್ವವರಿಯದೆ
ಹೆಬ್ಬಂಡೆಯಂತೆ ವರ್ತಿಸುವ ಮದಾಂಧರು..!!

ಸತ್ಯ ಸಂಗತಿಗಳ ಮಿಥ್ಯವಾಗಿಸುತ
ನೀತಿ ನಿಯಮಗಳ ತುಳಿಯುತಲಿ
ನೋವು ನಲಿವಿನ ಮಾರ್ಗವರಿಯದವರು.!
ಸರಳ ಸುಲಭ ಬವಣೆಯನೆದುರಿಸದೆ
ಹೆಮ್ಮರವಾಗಿಸಿ ನಿತ್ಯ ಬಿಂಬಿಸುತಲಿ
ಕಠಿಣ ಹಾದಿಯಲಿ ಸಾಗುವ ಮದಾಂಧರು..!!

ಸಮಾಜದಿ ಸುಜನರಂತೆ ಬದುಕುತ
ಸಮಾಜ ಬಾಹಿರ ಕಾರ್ಯವೆಸಗುತ
ಒಳಿತು ಕೆಡುಕಿನರಿವಿಲ್ಲದ ಮೃಗೀಯರವರು..!
ಆನಂದ ಹರುಷದ ಬದುಕಿಗೆ ಕುಕ್ಕುತ
ಕಠೋರತನ ತುಂಬಿ ಮದ್ದಾನೆಯಂತೆ
ಮುಂದೆಲೆಯನು ಕೊಡವುವ ಮದಾಂಧರು..!!


ತಮಗೆ *ಸವಿಸ* ಪ್ರಕಾರ ಕುರಿತು ಯಾವುದೇ ರೀತಿಯ ಗೊಂದಲ, ಸಮಸ್ಯೆಯಾದಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಮಾಹಿತಿ ನೀಡಲು ನಾ ಸದಾ ಸಿದ್ದನಾಗಿರುವೆ. ಧನ್ಯವಾದಗಳು...  👏👏
                            *✍...ಚಿಕಾಕೋ* 
*ಚಿದಾನಂದಕಾನಹಳ್ಳಿಕೋಡಿಹಳ್ಳಿ.*

Friday, August 21, 2020

ಸ್ವರಚಿತ ಕವನ ೨೧/೦೮/೨೦೨೦

 ಕವನದ ಶೀರ್ಷಿಕೆ:

"ಮತ್ಸರ"


ಅರಿಷಡ್ವರ್ಗಗಳಲಿ ಮತ್ಸರವು ಒಂದು

ನಿಯಂತ್ರಿಸದಿದ್ದರೆ ಹಾಳು ಮಾಡುವುದು

ಜೀವನವನ್ನು ಹದ ಅರಿತು ಬಾಳುವುದ

ಕಲಿಯತರೆ ಸುಂದರ ಬದುಕಿನ ಕದ ತೆರೆವುದು.


ಸಹಪಾಠಿ, ಸಂಬಂಧಿಗಳ ಏಳ್ಗೆಗೆ

ಸಹಿಸದ ಮಾನವ ಒಳಗೊಳಗೆ

ಮತ್ಸರದಿ ಕುದಿಯುವನು ಜೊತೆಗೆ

ಮಾನವ ಸಾರ್ಥಕ ಜನ್ಮದ ಅರಿಯದೆ ಬಾಳ್ಗೆ.


ಗುರುಗಳು ಮಕ್ಕಳ ಬದುಕಲಿ ಮತ್ಸರವ ತೇಜಿಸಿ

ಉನ್ನತ ವ್ಯಕ್ತಿಗಳ ಆದರ್ಶಗಳನು ಪಾಲಿಸಿ

ಮಮತೆ,ಕರುಣೆ, ಸಹಕಾರ, ಸೌಹಾರ್ದತೆ ಕಲಿಸಿ

ಭರವಸೆಯ ಇಟ್ಟು ಗೆಲುವು ಪಡೆಯುವದನು ತಿಳಿಸಿ.


ರಚನೆ:

ಯಗುಮಾಶ

(ಶರಣಬಸಪ್ಪ ಗುಳೇದ)





*೧೩೫ನೇ ಗೋಷ್ಠಿ*
                   🙏🙏
ಬರಹಗಾರರ ಬಳಗ ರಾಜ್ಯ ಘಟಕ
          ಹೂವಿನಹಡಗಲಿ
                   ✍️✍️
            ವಾರ-ಶುಕ್ರವಾರ
                  🌹🌹
      ದಿನಾಂಕ-೨೧.೦೮.೨೦೨೦
                  🌻🌻
            ವಿಷಯ-ಮತ್ಸರ
                (ಚುಟುಕು)
                  🌷🌷
ನಿರ್ವಹಣೆ-ಶ್ರೀನಾಗಭೂಷಣ ಅಯ್.ಎಸ್
                  ☘️☘️
                 ಗಮನಿಸಿ
೧.ಚುಟುಕು ನಾಲ್ಕು ಸಾಲಿರುತ್ತದೆ

೨.ವಿಷಯಕ್ಕೆ ಪೂರಕವಾಗಿರಬೇಕು

೩.೩ ಅಥವಾ ೪ ಚುಟುಕು ಬರೆಯಿರಿ

೪.ಗೋಷ್ಠಿಯ ಮದ್ಯೆ ಬೇರೆ ವಿಷಯ ಹಾಕಬೇಡಿ

೫.ರಾಜಕೀಯ,ವಯಕ್ತಿಕ ಹಾಗೂ ಸಾಮಜಿಕವಾಗಿ ತೊಂದರೆಯಾಗುವ ಕವಿತೆ ಬರೆಯಬೇಡಿ

೬.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

 🙏 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

9th kannada Samveda class kannada moulvi patha

 

Thursday, August 20, 2020

10th kannada Samveda class 20/08/2020

 

ಸ್ವರಚಿತ ಕವನ ೨೦/೦೮/೨೦೨೦

 ಕವನದ ಶೀರ್ಷಿಕೆ:

"ಶಕ್ತಿಗಿಂತ ಯುಕ್ತಿ ಮೇಲು"


ಮಂಗನಿಂದ ಮಾನವನೆಡೆಗೆ 

ಸಾಗಿದೆ ಸಹಸ್ರಾರು ವರ್ಷಗಳ ಇತಿಹಾಸ

ಕಲಿಯುಗದಲ್ಲಿ ನಡೆಯುತ್ತಿದೆ ಹತ್ತೆಂಟು

ಯೋಚನೆ ಶಕ್ತಿಗಿಂತ ಯುಕ್ತಿ ಮೇಲೆಂಬಂತೆ


ಆಧುನಿಕತೆಯ ಭರಾಟೆಯಲ್ಲಿ ಸಾಗಿದೆ

ಇಪ್ಪತ್ತೊಂದನೆಯ ಶತಮಾನದೆಡೆಗೆ

ಕಡಿಮೆಯಾಗುತ್ತಿದೆ ಮಾನವೀಯ

ಮೌಲ್ಯಗಳು ಲಕ್ಷಾಂತರ ಮನುಜರಲಿ


ಮಾನವ ಭೂಮಿಯಿಂದಬಾನಿಗೆ 

ಜಿಗಿದನು ನವಗ್ರಹಗಳ ಮಾಹಿತಿ

ಅರಸಲು ಮಂಗನ ಅಂಗಳಕೆ

ಕಳುಹಿಸಿದ ಹತ್ತಾರು ಉಪಗ್ರಹಗಳನು


ಸಂಶೋಧನೆ ಮಾಡಿದನು ತನ್ನಂತೆ

ಇರುವ ನೂರಾರು ಕೃತಕ ಮನುಜರನು

ನೆಲ,ಜಲ, ಆಕಾಶದಲ್ಲಿ ಹೋರಾಡುವ

ದಶಲಕ್ಷ ಯುದ್ಧೋಪಕರಣಗಳನ್ನು


ಆದರೆ ಜಗದಲಿ ಆವರಿಸಲಿ ಕೋಟಿ ಕೋಟಿ

ಮನುಜರನು ಮನುಜರಾಗಿ ನೋಡುವುದನು

ತೂರದಿರು ಗಾಳಿಗೆ ಸಂಬಂಧಗಳ ಬೆಲೆಯನು

ಮೌಲ್ಯಗಳು ಉಳಿಯಲಿ ನೂರಾರು ವರ್ಷಕಾಲ


ರಚನೆ:

ಯಗುಮಾಶ

(ಶರಣಬಸಪ್ಪ ಗುಳೇದ)



🌹 *೧೩೪ನೇ ಗೋಷ್ಠಿ*🌹

 🌷🌷🌷🌷🌷🌷🌷🌷🌷🌷🌷

 *ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

 🌼🌼🌼🌼🌼🌼🌼🌼🌼🌼🌼

        *ವಾರ-ಗುರುವಾರ*

 💐💐💐💐💐💐💐💐💐💐💐

     *ದಿನಾಂಕ-೨೦.೦೮.೨೦೨೦*

 🌺🌺🌺🌺🌺🌺🌺🌺🌺🌺🌺 *ನಿರ್ವಹಣೆ - ಶ್ರೀ ಗಿರೀಶ್ ಪೂಜಾರ್. ಹೊಳಗುಂದಿ* 

🌻🌻🌻🌻🌻🌻🌻🌻🌻🌻🌻


 *ವಿಷಯ - ಯುಕ್ತಿ (ಸಂಪ ಪ್ರಕಾರ)* 

 ✍️✍️✍️✍️✍️✍️✍️✍️✍️✍️✍️


*ಸಂಪ ಸಾಹಿತ್ಯದ ನಿಯಮಗಳು*


೧)ಇದು ಒಂದು ಹೊಸವಿಷಯ ಎಲ್ಲೂ ಸಿಗುವುದಿಲ್ಲ.ನಾವು ನಮ್ಮ ಕಲಿಕೆಗಾಗಿ ತಯಾರಿಸಿಕೊಂಡ ವಿಧಾನ

೨) *ಸಂಪ*  ಎಂದರೆ ಸಂಖ್ಯಾ ಪದ ಎಂದು

೩)ಪ್ರತೀ ಕವಿತೆಯ ಯಾವುದಾದರೂ ಎರಡು ಸಾಲಿನಲ್ಲ ಸಂಖ್ಯಾ ಸೂಚಕ ಪದ ಬಳಕೆಯಾಗಬೇಕು.

 🌷🌷🌷🌷🌷🌷🌷🌷🌷🌷🌷

         *ಬಳಗದ ನಿಯಮಗಳು*


೧)ಸಮಯ ಮುಂಜಾನೆ ಎಂಟರಿಂದ ಆರರ ವರೆಗೆ.

೨)ನಿಮ್ಮ ಕವನಗಳನ್ನು ವಾಟ್ಸಪ್ ಬರಹದಲ್ಲಿಯೇ ಹಾಕಬೇಕು.

೩)ಕವನದ ಕೊನೆಯಲ್ಲಿ ತಮ್ಮ ಹೆಸರನ್ನು ನಮೋದಿಸಿ.

೪)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು.

೫) ರಾಜಕೀಯ ಮತ್ತು ವ್ಯಕ್ತಿಗತ ಕವಿತೆಗಳು ಬೇಡಾ.

೬) ಯಾವುದೇ ಕಾರಣಕ್ಕೂ ಬೇರೆ ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ. ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತೆಗೆಯಲಾಗುವುದು.



 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






Wednesday, August 19, 2020

ಸ್ವರಚಿತ ಕವನ ೧೯/೦೮/೨೦೨೦

 ಕವನದ ಶೀರ್ಷಿಕೆ:

"ಮೌಡ್ಯತೆ"


ಎಂಜಲೆಲೆಯ ಮೇಲೆ ಉರುಳಿ ಉರುಳಿ

ದೇವರ ಮೇಲೆ ಭಕ್ತಿಯ ತುತ್ತ ತುದಿಯ

ಪ್ರದರ್ಶನ ಮಾಡಿದರೋ ಮಾಡಿದರೋ

ಗಡ್ಡ ಮೀಸೆಯನ್ನು ಬಿಟ್ಟು ಬಿಟ್ಟು


ದೇವರು ಗಿವರು ಅಂತ

ಮಡಿ ಮೈಲಿಗೆ ಹೆಸರಲ್ಲಿ

ಮನೆ ಮಠವ ತಿರುಗ್ಯಾರೋ

ಮಾತು ಮಾತಿಗೆ ಜಗಳವ ಕಾಯ್ದಾರೋ



ಮನುಜಮತ ವಿಶ್ವಪಥದ ತುತ್ತತುದಿ

ಮರೆತು ಮೌಡ್ಯತೆಯ ನಂಬಿ ನಂಬಿ

ಮನುಷ್ಯತ್ವವೇ ಬಿಟ್ಟರೋ ಬಿಟ್ಟರೋ

ಮೂಡ ನಂಬಿಕೆ ಬಿತ್ಯಾರೋ ಬಿತ್ಯಾರೋ


ನಮ್ಮ ಜನರ ನೋಡಿ ಅಡ್ಡ ಅಡ್ಡ

ಬಿದ್ದು ನಕ್ಕರೋ ನಕ್ಕರೋ ಜ್ಞಾನಿಗಳು

ವೈಚಾರಿಕತೆ ಮೂಡಿ ಮೂಡಿ ಬರುವುದು

ಯಾವಾಗ ಯಾವಾಗ ಎಂದು ಅತ್ತರೋ


ರಚನೆ

ಯಗುಮಾಶ

(ಶರಣಬಸಪ್ಪ ಗುಳೇದ)


ಹೊಸ ಸಾಹಿತ್ಯದ ಪರಿಚಯದೊಂದಿಗೆ ನಿಮ್ಮ ಮುಂದೆ........ಒಂದು ಪ್ರಯತ್ನ ಅಷ್ಟೇ...

       *ಖಂಡು ಬಂಜಾರ*

●●●●●●●●●●●●●●●●●●



*ಅನುಕರಣಾವ್ಯಯ,ದ್ವಿರುಕ್ತಿ ಜೋಡುನುಡಿ  ಪದಗಳಿಂದ ಕವನಗಳ ರಚನೆ*


    🌷  *ಅದ್ವಿಜೋ 🌷ಕವನಗಳ ರಚನಾ ಮಾಹಿತಿ*

@@@@@@@@@@@@


ಹಾಗಾದರೆ ಯಾವ ರೀತಿ? ಎಂಬ ಪ್ರಶ್ನೆ ನಮಗೆ ಬರುವುದು ಸಹಜ....ಅಲ್ಲವೇ.


ನಾವುಗಳು ಸದಾ ಕವನಗಳನ್ನು ಬರೆಯುತ್ತ ಹೋದರೆ ಅವುಗಳಿಗೆ ಕೊನೆಯೆಂಬುದಿಲ್ಲ.......ಅದು ನಿರಂತರ ಅನಂತ..........!!!

ಹಾಗಾಗಿ ಒಂದು ನಿಯಮ,ಪದ್ಧತಿ ಗಳ ಅಡಿಯಲ್ಲಿ ಬರೆದಾಗ ನಮ್ಮಲ್ಲಿರುವ ಸಾಹಿತ್ಯವು ಪ್ರಬುದ್ಧವಾಗಿ ಪ್ರಕಟಗೊಳ್ಳುವುದು. ಅದಕ್ಕಾಗಿ ನಿಮ್ಮ ಸಾಹಿತ್ಯ ಜ್ಞಾನಕ್ಕೆ ಒರೆಗಚ್ಚುವ ಕೆಲಸ ನಮ್ಮಿಂದ...


 ಯಾರೂ ಬೇಸರ ಮಾಡಿಕೊಳ್ಳಬೇಡಿ........ಪ್ರಯತ್ನಿಸಿ.


ಹಾಗಾದರೆ... *ದ್ವಿರುಕ್ತಿ ಎಂದರೇನು?* ಎಂಬುದನ್ನು ತಿಳಿಯೋಣ.


#ಮೊದಲ ಪದದಂತೆ ಎರಡನೇ ಪದವು ಅರ್ಥವನ್ನು ಹೊಂದಿದ್ದರೆ.(ದ್ವಿ =ಎಂದರೇ ಎರಡು. ಉಕ್ತಿ = ಎಂದರೇ ಮಾತು) ಅದನ್ನು ದ್ವಿರುಕ್ತಿ ಎನ್ನುವರು.

ಇದು ಸರಳ,ಎಲ್ಲರಿಗೂ ಗೊತ್ತಿರುವಂತಹದ್ದು.....


ನನಗೆ ಸಿಕ್ಕ ಕೆಲವು ದ್ವಿರುಕ್ತಿ ಪದಗಳ ಪಟ್ಟಿ ಇಲ್ಲಿ ನೀಡಿರುವೆ.


(ನಿಮಗೆ ಸಿಕ್ಕರೆ ಸೇರಿಸಿ ಇನ್ನೂ ಬರೆಯಿರಿ)


*ದ್ವಿರುಕ್ತಿ ಯ ಪದಗಳ ಪಟ್ಟಿ*


*ಕೆಮ್ಮಿ - ಕೆಮ್ಮಿ

*ಮಾತು -ಮಾತು

*ಬಾ - ಬಾ

*ಹೋಗು-ಹೋಗು

*ಕೇಳು -ಕೇಳು

*ಹೌದು-ಹೌದು

*ನಿಲ್ಲು -ನಿಲ್ಲು

*ಬಂದೆ -ಬಂದೆ

*ದೊಡ್ಡ -ದೊಡ್ಡ

*ಹೆಚ್ಚು -ಹೆಚ್ಚು

*ಮನೆ - ಮನೆ

*ಕೇರಿ -ಕೇರಿ

*ಊರು -ಊರು(ಊರೂರು)

*ಎಲೇ -ಎಲೇ

*ಬನ್ನಿ-ಬನ್ನಿ

*ಹತ್ತಿರ -ಹತ್ತಿರ

*ಅಗೋ -ಅಗೋ

*ಅಬ್ಬಬ್ಬಾ!

*ಆಹಾಹಾ!

*ಬೇಡ -ಬೇಡ

*ಕೊಡು-ಕೊಡು

*ನಡೆ -ನಡೆ

*ಅಮ್ಮ -ಅಮ್ಮ

*ಆಗಲಿ -ಆಗಲಿ

*ಬೇಗ -ಬೇಗ

*ಓದು -ಓದು

*ಅಯ್ಯೋ -ಅಯ್ಯೋ

*ಶಿವ -ಶಿವ

*ಚಿಕ್ಕ -ಚಿಕ್ಕ

*ತಲೆ -ತಲೆ

*ಕಣ - ಕಣ

*ತೂತು -ತೂತು

*ಬೆಳಗ್ಗೆ-ಬೆಳಿಗ್ಗೆ

*ಕಣ್ಣು -ಕಣ್ಣು

*ಕದ್ದು -ಕದ್ದು

*ದೇವರೇ -ದೇವರೆ

*ಬೆಂಕಿ -ಬೆಂಕಿ

*ತಿರುಗಿ -ತಿರುಗಿ

*ನೋಡಿ -ನೋಡಿ

*ಒಬ್ಬೊಬ್ಬ

*ಇರಲಿ -ಇರಲಿ

*ಸಾಕು -ಸಾಕು

*ಹಾವು -ಹಾವು

*ಕೆಟ್ಟೆ -ಕೆಟ್ಟೆ

*ಈಗೀಗ

*ಇರುಳಿರುಳು

*ಮುಖ ಮುಖ

*ಭಯ ಭಯ

*ಸೀಕಲು ಸೀಕಲು

*ದುಡ್ಡು ದುಡ್ಡು

 *ಮೊತ್ತ ಮೊದಲು (ಮೊಟ್ಟ)

*ಕಟ್ಟ ಕಡೆಗೆ

*ನಟ್ಟ ನಡುವೆ

*ಬಟ್ಟ ಬಯಲು

*ತುತ್ತ ತುದಿ

*ಕೊನೆ ಕೊನೆಗೆ

*ಮೆಲ್ಲ ಮೆಲ್ಲನೆ

*ಬುರು - ಬುರು

*ಗಡ -ಗಡ

*ಲಬ್ -ಲಬ್


ಈ ರೀತಿಯ  ಪದಗಳು....‌



ಈಗ... *ಜೋಡು ನುಡಿ ಎಂದರೇ?*

#ಒಂದೆ ತರಹದ,ವಿರುದ್ಧಾರ್ಥ,ಪೂರಕಾರ್ಥ, ಸಮನಾರ್ಥಕ.,ಹೀಗ ಬೇರೆ ಬೇರೆ ಅರ್ಥ ಗಳನ್ನು ಕೊಡುವ ಎರಡು ಪದಗಳು.....


*ಜೋಡು ನುಡಿ ಪದಗಳ ಪಟ್ಟಿ*


ಅಸ್ಪಷ್ಟ ಪದಗಳು : 


*ದುಡ್ಡು ಗಿಡ್ಡು

*ಒಡ್ಡು ಪಡ್ಡು

*ಅನ್ನ ಗಿನ್ನ

*ಮೊಸರು ಗಿಸರು

*ಚಟ್ನಿ ಪಟ್ನಿ

*ಲಬ್ ಡಬ್

*ಹೊಲ ಗಿಲ

*ಬಳೆ ಗಿಳೆ

*ಸಾಲ ಗೀಲ

*ಅರೆ ಬರೆ

*ಅಡ್ಡ ದಿಡ್ಡ

*ಕೂಲಿ ನಾಲಿ

*ಹಾಳು ಗೀಳು

*ಓದು ಗೀದು

*ತಲೆ ಗಿಲೆ

*ಕಲ್ಲು ಗಿಲ್ಲು


ಸಮಾನಾರ್ಥಕ ಪದಗಳು :


*ಅವಳಿ ಜವಳಿ

*ಅಂದ ಚೆಂದ

*ಎಡರು ತೊಡರು

*ಏರು ಪೇರು

*ಉಡುಗೆ ತೊಡುಗೆ

*ಕಸ ಕಡ್ಡಿ

*ನೆರೆ ಹೊರೆ


ಪೂರಕಾರ್ಥ ಪದಗಳು :


*ಹಾಲ್ಜೇನು

*ಕೆನೆ ಮೊಸರು

*ನ್ಯಾಯ ನೀತಿ

*ರೂಢಿ ಸಂಪ್ರದಾಯ

*ಅಂಕೆ ಸಂಕೆ

*ಅಚ್ಚು ಮೆಚ್ಚು

*ಅಕ್ಕ ಪಕ್ಕಾ

*ಅಲ್ಲೋಲ ಕಲ್ಲೋಲ

*ಆಚಾರ ವಿಚಾರ

*ಆಸ್ತಿ ಅಂತಸ್ತು

*ನೀತಿ ನಿಯಮ


ವಿರುದ್ದಾರ್ಥಕ ಪದಗಳು :


*ಮಡಿ ಮೈಲಿಗೆ

*ಪರ ವಿರೋಧ

*ಸೋಲು ಗೆಲುವು

*ಆದಿ ಅಂತ್ಯ

*ಏಳು ಬೀಳು

*ಕಳ್ಳ ಕಾಕರ

*ನೋವು ನಲೀವು

*ಕಾಡು ನಾಡು

*ಬೇವು ಬೆಲ್ಲ

*ಪಂಡಿತ ಪಾಮರ

*ಸತಿ ಪತಿ

*ಹುಳ ಹುಪ್ಪಡಿ

*ಸೊಪ್ಪು ಸೇದೆ

*ಬಟ್ಟೆ ಬರೆ

*ಮಕ್ಕಳು ಮರಿ

*ಮನೆ ಮಠ


ಈ ರೀತಿಯ ಪದಗಳು....


*ಅನುಕರಣಾವ್ಯಯ ಎಂದರೇ*?

# ನಿರ್ಧಿಷ್ಟ ಅರ್ಥವಿಲ್ಲದ ಧ್ವನಿ ವಿಶೇಷಣಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳು...


*ಅನುಕರಣಾವ್ಯಯ ಪದಗಳ ಪಟ್ಟಿ*


*ಚಟ ಚಟ

*ರೊಯ್ಯನೆ

*ಕರ ಕರ

*ವಟವಟ

*ಚುರು ಚುರು

*ಧಗ ಧಗ

*ದಡ ದಡ

*ಸುಯ್ಯನೆ

*ಘುಳು ಘುಳು

*ಢವ ಢವ

*ರಪ ರಪ

*ಲಕ ಲಕ

*ಢಣ ಢಣ

*ಪಟ ಪಟ

*ಘಮ ಘಮ

*ಪಟ ಪಟ..... ಇತ್ಯಾದಿ

ಹೀಗೆ 


(ಈ ಮೇಲಿನ ಪದಗಳೇ ಅಂತಿಮವಲ್ಲ ನಿಮ್ಮಲ್ಲಿರುವ ಅದ್ವಿಜೋ ಪದಗಳನ್ನು ಸೇರಿಸಿ ಕವನ ರಚಿಸಲು ಮುಕ್ತ ಅವಕಾಶವಿದೆ)


ಈ ಮೇಲಿನ ಮೂರು ತರಹದ ಪದಗಳನ್ನು ಬಳಸಿಕೊಂಡು ನಾವುಗಳು ಕವನವನ್ನು ರಚಿಸುವುದು.

ಯಾವುದೇ ಅದ್ವಿಜೋ ಪದಗಳನ್ನು ಎಲ್ಲಿಯಾದರು ಬಳಸಿಕೊಳ್ಳಬಹುದು...


ಹಾಗಾದರೆ.....ಕೇಲವು ನಿಯಮಗಳನ್ನು ನೊಡೋಣವೇ...


🌼 *ನಿಯಮಗಳು*🌼


*ಪ್ರತಿಯೊಂದು ಸಾಲಿನಲ್ಲಿ ಕನಿಷ್ಠ ಎರಡು,ಗರಿಷ್ಠ ನಾಲ್ಕು ವ್ಯಾಕರಣಾಂಶ ಬಂದು ಕೊನೆಯ ಅಂದರೇ ಎರಡು/ನಾಲ್ಕು ನೇಯ ಪದದಲ್ಲಿ ಅರ್ಥ ಹೊಂದಣಿಕೆಯ ಶಬ್ದ ವನ್ನು ಸೇರಿಸಿ ರಚನೆ ಮಾಡಿಕೊಳ್ಳಬಹುದು*.


*ಎಲ್ಲಾ ಸಾಲುಗಳು ಅರ್ಥ ಹೊಂದಣಿಕೆಯಾಗುತ್ತ ಒಂದು ಕಥೆ,ಸನ್ನಿವೇಶ, ಘಟನೆ,ವಿಡಂಬನೆಯ ರೂಪದಲ್ಲಿ ರೂಪಗೊಳ್ಳಬೇಕು.


*ಗರಿಷ್ಠ 20 ಸಾಲುಗಳಿರಬೇಕು.


*ಅರ್ಥ ಪ್ರಾಧಾನ್ಯವಾಗಿ ಕವನ ಹೊರ ಬರಬೇಕು.


ಇದಿಷ್ಟು ಪಾಲಿಸಿದರೆ ಸಾಕು.


 (ಖಂಡು ಬಂಜಾರರ ರಚನೆ)

👇🏼


     *ಅದ್ವಿಜೋ* *(4 ಪದಗಳಿಗೆ ಸಂಬಂಧಿಸಿದ ಉದಾ*)ನಾನು ಇಲ್ಲಿ 2 ಸಾಲಿನ ಪ್ರಕಾರ ಮಾಡಿರುವೆ ನಿಮಗಿಷ್ಟವಾದಂತೆ ಸಾಲು ಮಾಡಿಕೊಳ್ಳಿ

           (೧)

------------------------------


*ಅಬ್ಬಬ್ಬಾ !,ಕೆಮ್ಮಿ ಕೆಮ್ಮಿ,ಮೆಲ್ಲ ಮೆಲ್ಲನೆ, ಜಡ್ಡು ಗಿಡ್ಡು ಬಂತು ನೋಡಾ||*.


*ಶಿವ ಶಿವ,ಹಾಲ್ಜೇನು, ಸಂಸಾರ ಗಿಂಸಾರ,ಬಟ್ಟಬಯಲಾಯ್ತು ನೋಡಾ||*.


*ಮಕ್ಕಳು ಮರಿ,ಸತಿ ಪತಿ,ಮನೆ ಮಠ,ಕಳೆ ಕಳೆದೊಯ್ತು ನೋಡಾ||*


*ಬೇಗ ಬೇಗ,ಹೋಗು ಹೋಗು,ತಿರು ತಿರುಗಿ,ಬರ ಬರ ಬ್ಯಾಡ ನೋಡಾ||*.





*ಅದ್ವಿಜೋ* *(2 ಪದಗಳ ಉದಾ*) ನಾನು ಇಲ್ಲಿ 3 ಸಾಲಿನ ಪ್ರಕಾರ ಮಾಡಿರುವೆ ನಿಮಗಿಷ್ಟವಾದಂತೆ ಸಾಲು ಮಾಡಿಕೊಳ್ಳಿ


ಕೆ.ಬಾರವಲಿ ಸರ್ ರವರ ರಚನೆ

     👇🏼


            (೨)

ಕೂಲಿ-ನಾಲಿ ಮಾಡಿ-ಮಾಡಿ

ಕಲ್ಲು-ಗಿಲ್ಲು ತಂದು-ತಂದು

ಮನೆ-ಮಠ ಕಟ್ಟಿಕೊಂಡ||



ಅಂಕೆ-ಸಂಖೆ ಮೀರಿ-ಮೀರಿ

 ಹಣ-ಗಿಣ ಗಳಿಸಿ-ಗಳಿಸಿ

ಅಂದದ ಅರಮನೆ ಕಟ್ಬಿಟ್ಟ||

 


ಅಬ್ಬಬ್ಬಾ! ಊರೂರು 

ತಿರುಗಿ-ತಿರುಗಿ ಅಂದ-ಚಂದದ

ಹುಡ್ಗಿ ನೋಡಿ ಮಾಡ್ಕೊಂಡ||

*************************


ಇದರಂತೆ ಕವನ ಹೊಂದಾಣಿಕೆ ಯ ರೂಪದಲ್ಲಿ ಬಂದು ಕೊನೆಯಾಗ ಬೇಕು.


ಬರಿತಿರಿ ತಾನೇ..‌‌..💝💝💝💝


ಧನ್ಯವಾದಗಳು


ನಿಮ್ಮವ

             *ಖಂಡು ಬಂಜಾರ*

        ಸೇವಾನಗರ.ಹರಪನಹಳ್ಳಿ

Tuesday, August 18, 2020

ಸ್ವರಚಿತ ಕವನ ೧೮/೦೮/೨೦೨೦

 ಕವನದ ಶೀರ್ಷಿಕೆ:

"ಯಾವುದು ಭಕ್ತಿ"


ಜಗತ್ತಿನಲ್ಲಿ

ಡಾಂಭಿಕದ ಭಕ್ತಿಯೇ

ಹೆಚ್ಚಾಗುತ್ತಿದೆ

ನಿಜವಾದ ಭಕ್ತರ

ನೋಡಿ ನಾಚಿಸುವಂತೆ


ದೇವಾಲಯದ

ಪೂಜೆ ಮಾಡುವಲ್ಲಿಯೂ

ಮನವಿಲ್ಲದೆ

ಎತ್ತೆಲೋ ಅಲೆದಿದೆ

ಮನವೆಂಬ ಮರ್ಕಟ


ಮನ ಶಾಂತಿಯ

ಬಯಸಿ ಬರುತ್ತಾರೆ

ಜನ ತನ್ನದೆ

ದುಃಖವನು ತೋಡಲು

ವರವ ನೀಡು ದೇವ


ಕರುಣೆದೋರು

ಮನುಜರ ಕಾಪಾಡು

ನಿನ್ನ ನಂಬಿದ 

ಭಕ್ತರ ನಿಜವಾದ

ಭಕ್ತಿ ಗಮನಿಸದೆ


ಯಾವುದು ಭಕ್ತಿ

ಮುಖ್ಯವಲ್ಲ ಪ್ರಭು

ನಿನ್ನ ದರ್ಶನ

ಬಯಸಿ ಬಂದುದನು

ನೋಡಿ ಮುಕ್ತಿಯ ನೀಡು


ರಚನೆ:

ಯಗುಮಾಶ

(ಶರಣಬಸ್ಸಪ್ಪ ಗುಳೇದ)








Samveda 8th class kannada 18/08/2020

 

Monday, August 17, 2020

ಸ್ವರಚಿತ ಕವನ ೧೭/೦೮/೨೦೨೦

 ಕವನದ ಶೀರ್ಷಿಕೆ:

"ಪತಿಯೇ ಪರ ದೈವ"


ನನ್ನ ಹೆಂಡತಿ

ನನಗಾಗಿ ಕಾದಳು

ಭೋಜನಕ್ಕಾಗಿ


ಆದರೆ ಆಕೆ

ಅನುಭವಿಸಿದಳು

ನಿರಾಸೆಯನು


ಏಕೆಂದರೆ ಈ

ಗಂಡನು ಹೇಳದೆಯು

ಎಲ್ಲೂ ಹೋಗನು


ಎಂಬ ಭಾವನೆ

ಭರವಸೆ ಆದಾಗ

ಕಾಯುವುದನು


ಇದೆ ಅಲ್ಲವೇ

ನಮ್ಮ ಭಾರತೀಯರ

ಹೆಣ್ಣು ಮಕ್ಕಳ


ಭವ್ಯ ಸಂಸ್ಕೃತಿ

ಗಂಡನ ಸೇವೆಯಲ್ಲಿ

ಮುಕ್ತಿ ಎಂಬುದು


ಪತಿಯೇ ಪರ

ದೈವವೆಂದು ತಿಳಿದ

ನಾಡು ನಮ್ಮದು


ರಚನೆ:

ಯಗುಮಾಶ

(ಶರಣಬಸ್ಸಪ್ಪ ಗುಳೇದ)



*೧೩೧ನೇ ಗೋಷ್ಠಿ* 
         
 *🌷ಬರಹಗಾರರ ಬಳಗ ರಾಜ್ಯ** *ಘಟಕ* 
 *ಹೂವಿನಹಡಗಲಿ🌷* 
         
 *🌹ವಾರ-ಸೋಮವಾರ🌹* 
         
 *🌷ದಿನಾಂಕ-೧೭.೦೮.೨೦೨೦🌷* 
        
*✍️ನಿರ್ವಹಣೆ : ಶ್ರೀ ಹುಸೇನಪ್ಪ ಸಜ್ಜ್ಯೋಲಿ✍️*
        
 *✍️ವಿಷಯ- *ಮುಕ್ತಿ (ಹಾಯ್ಕು ಪ್ರಕಾರ)✍️* 
         
೧)ಹಾಯ್ಕು
ಮೂರು ಸಾಲಿನ ಪದ್ಯ
ಮೊದಲ ಸಾಲು ೫ ಅಕ್ಷರ
ಎರಡನೇ ಸಾಲು  ೭ ಅಕ್ಷರ
ಮೂರನೇ ಸಾಲು ೫ ಅಕ್ಷರ

ಹೀಗೇ ೬ ರಿಂದ ೭ ಪದ್ಯ ಬರೆಯಿರಿ
ಶಿರೋನಾಮೆಗೆ ತಕ್ಕಂತೆ ಕವಿತೆ
ಅರ್ಥಪೂರ್ಣವಾಗಿ ಸಾಗಲಿ.

೨)ಸಮಯ ಮುಂಜಾನೆ ಎಂಟರಿಂದ ಆರರವರೆಗೆ.
೩)ನಿಮ್ಮ ಕವನಗಳನ್ನು ವಾಟ್ಸಪ್ ಬರಹದಲ್ಲಿಯೇ ಹಾಕಬೇಕು.
೪)ಕವನದ ಕೊನೆಯಲ್ಲಿ ತಮ್ಮ ಹೆಸರನ್ನು ನಮೋದಿಸಿ.
೫)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು.
೬) ಯಾವುದೇ ಕಾರಣಕ್ಕೂ ಬೇರೆ ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ. ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತೆಗೆಯಲಾಗುವುದು.
🙏🙏🙏🙏🙏🙏🙏🙏

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

ಸ್ವರಚಿತ ಕವನ ೧೬/೦೮/೨೦೨೦

 ಕವನದ ಶೀರ್ಷಿಕೆ :

"ಭಾವೈಕ್ಯತೆಯ ಬೀಡು ನಮ್ಮ ನಾಡು"


ಭಾಷೆ ವೇಷ ಭೂಷಣ ಬೇರೆ ಬೇರೆ

ಜಾತಿ ಮತಗಳು ಬೇರೆ ಬೇರೆ

ಸಂಸ್ಕೃತಿ ಸಮಾಜ ಬೇರೆ ಬೇರೆ

ವೃತ್ತಿ ಧರ್ಮಗಳು ಬೇರೆ ಬೇರೆ


ಮೇಲು ಕೀಳು ಎಂಬುದ ಬಿಡು ಬಿಡು

ಅನೇಕತೆಯಲಿ ಏಕತೆಯನು ಹಿಡಿ ಹಿಡಿ

ಮತ,ಪಂಥ, ದ್ವೇಷಗಳ ನೀ ಅಳಿ ಅಳಿ

ಶಿಕ್ಷಣದ ಜಾಗೃತಿಯ ಬೆಳೆಸು ಬೆಳೆಸು


ನದಿಗಳು ಹಲವು ಹರಿದರೂ ಕೂಡುವುದೊಂದು

ಮತಗಳು ಕೆಲವು ಇದ್ರೂ ನೀತಿ ಒಂದು

ಮಾನವರು ಅಷ್ಟು ಇದ್ರೂ ಮಾನವತೆ ಒಂದೆ

ಗಿಡಮರಗಳು ಇನಿತಿದ್ದರೂ ಗಾಳಿಯೂ ಒಂದೆ


ಮನೆ-ಮಠಗಳಲಿ ಮೂಡಲಿ ಭಾವೈಕ್ಯತೆಗೆ

ಆಚಾರ-ವಿಚಾರಗಳು ಬೆಳಗಲಿ ವೈಚಾರಿಕತೆಗೆ

ಹೊಲ-ಗಿಲಗಳು ಬೆಳೆಯಲಿ ಸಮೃದ್ಧಿಯಾಗಿ

ಊರು-ಕೇರಿಯಲಿ ಬಾಳಲಿ ರಾಮ ರಹಿಮರೊಂದಾಗಿ


ಹೆಚ್ಚು ಹೆಚ್ಚು ಬೆಳೆಯಲಿ ಜನತೆಯಲಿ ಭ್ರಾತೃತ್ವ

ಅಹಾಹಾ ಅದರ ಆನಂದಿಸಲಿ ಪ್ರೇಮಾಮೃತ

ತುತ್ತತುದಿಯನು ತಲುಪಲಿ ಕರುನಾಡು

ಹಾಗಾಗುವುದು ಭಾವೈಕ್ಯತೆಯ ಬೀಡು ನಮ್ಮ ನಾಡು


ರಚನೆ :

ಯಗುಮಾಶ

(ಶರಣಬಸ್ಸಪ್ಪ ಗುಳೇದ)




*೧೩೦ನೇ ಗೋಷ್ಠಿ* 

          🇮🇳🇮🇳🇮🇳🇮🇳

 *ಬರಹಗಾರರ ಬಳಗ ರಾಜ್ಯ** *ಘಟಕ* 

 *ಹೂವಿನಹಡಗಲಿ* 

          🇮🇳🇮🇳🇮🇳🇮🇳

 *ವಾರ-ಬಾನುವಾರ* 

          🇮🇳🇮🇳🇮🇳🇮🇳

 *ದಿನಾಂಕ-೧೬.೦೮.೨೦೨೦* 

         🇮🇳🇮🇳🇮🇳🇮🇳

ನಿರ್ವಹಣೆ   *ಶ್ರೀಮತಿ ಕಲಾಶ್ರೀ ಮ ಹಾದಿಮನಿ** 

        🇮🇳🇮🇳🇮🇳🇮🇳

 *ವಿಷಯ-ಭಾವೈಕ್ಯತೆ** 

         🇮🇳🇮🇳🇮🇳🇮🇳

೧)ಕವಿತೆ ೧೬ ರಿಂದ ೨೫ ಸಾಲಿರಲಿ

೨)ಸಮಯ ಮುಂಜಾನೆ ಎಂಟರಿಂದ ಆರರವರೆಗೆ ಮಾತ್ರ ಹಾಕಿ ನಂತರದ ಅಥವಾ ಮುಂಚೆ ಹಾಕುವ ಕವನಗಳನ್ನು ಪರಿಗಣಿಸುವುದಿಲ್ಲ

೩)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು

೪)ನಿಮ್ಮ ಕವನಗಳನ್ನು ವಾಟ್ಸಾಪ್ ಬರಹದಲ್ಲಿಯೇ ಬರೆದು ಹಾಕಬೇಕು

೫)ಯಾವುದೇ ಕಾರಣಕ್ಕೂ ಬೆರೆಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತಗೆಯಲಾಗುವುದು 

🙏🙏🙏🙏🙏🙏🙏🙏


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



ಸ್ವರಚಿತ ಕವನ ೧೫/೦೮/೨೦೨೦

 ಉತ್ತಮ ಬರಹಗಾರ ಪ್ರಶಸ್ತಿ 


"ಸ್ವಾತಂತ್ರ್ಯ ಸಂಭ್ರಮ"


ಭಾರತ ಮಾತೆಯ ಮಮತೆಯ ಮಕ್ಕಳು

ಮರ ಮರುಗುವ ಕಾಲ ಬಂದಿತಲ್ಲ

ಕನಸು ಮನಸಲಿ ಬಯಸಿರಲಿಲ್ಲ ಜನ

ಮಹಾ ಮಾರಿ ಕರೋನಾ ಕದಡಿತು ಮನ


ಈ ಮಾಯೆಯ ಕರೋನಾ ಛಾಯೆ

ತೊಲಗಿ ಹೋಗಲು ಒದ್ದೋಡಿಸಿ ತಾಯೆ

ಸ್ವಾತಂತ್ರ್ಯ ಸಂಭ್ರಮ ಅನುಭವಿಸಲು

ಮಕ್ಕಳ ಅಕ್ಕರೆಯನು ನೋಡಲು


ಸ್ವಾತಂತ್ರ್ಯೋತ್ಸವ ಹಬ್ಬದಿ ಜನ

ಸಂಭ್ರಮಕೆ ಕವಿದಿದೆ ಕಾರ್ಮೋಡ

ಅಬಾಲ ವೃದ್ಧರಾದಿಯಾಗಿ ಉತ್ಸಾಹಕ್ಕೆ

ಹಾತೊರೆದು ಮನೆ-ಮನದಲ್ಲಿ ಆಚರಿಸೋಣ


ಭಾರತಾಂಬೆಯೇ ಭವ್ಯ ಜನತೆಗೆ

ಇದ್ದಲ್ಲಿಯೇ ಸಂಭ್ರಮಿಸಲು ಆರೈಸು

ಸ್ವಾತಂತ್ರ್ಯದಿ ಜನ ಸ್ವಚ್ಛಂದವಾಗಿ

ಆಚರಿಸಲಿ ಮನೆ ಮಕ್ಕಳೊಂದಿಗೆ ಜನ


ರಚನೆ

ಯಗುಮಾಶ

(ಶರಣಬಸ್ಸಪ್ಪ ಗುಳೇದ)

Vidyagama Samveda 10th kannada program 17/08/2020

 

Tuesday, August 4, 2020

vidyagama program



ವಿದ್ಯಾಗಮ ಕಾರ್ಯಕ್ರಮದ ಅಂಶಗಳು
https://drive.google.com/file/d/129227bpRf0PeU-e4MgVFiBalUN8E6tx4/view?usp=drivesdk

9th kannada setubandha 31/07/2020


10th kannada setubandha 30/07/2020


8th kannada setubandha 28/07/2020


10th kannada setubandha 27/07/2020


9th kannada setubandha 24/07/2020


10th kannada setubandha 23/07/2020


8th kannada setubandha 21/07/2020


10th kannada setubandha 20/07/2020


10th kannada Bridge course 03/08/2020


8th kannada Bridge course 04/08/2020


Videos