ಕವನದ ಶೀರ್ಷಿಕೆ
"ಕನ್ನಡ ಸವಿ ನುಡಿ"
ಪ್ರಕಾರ- *ವೃತ್ತ್ಯನುಪ್ರಾಸ*
ನದಿಗಳು ಎರಡು ದಂಡೆಯ ದಡವನು
ಕೆಲವು ಕಾಲ ಗತಿಸಿದಂತೆ ಕಲ್ಪನೆಗೆ
ಸಿಗದೆ ಸರ ಸರನೆ ಹಾವಿನ ಹಾಗೆ
ಊರಿನ ಜನಕೆ ಜನ ಸಮುದಾಯಕ್ಕೆ
ತಿಳಿಯದೆ ತಡಿ ತಟಗಳು ಉಕ್ಕುವವು
ಕಾವೇರಿ ಕೃಷ್ಣಾ ಕಾಳಿ ತುಂಗಾ ಭದ್ರಾ
ಭೀಮಾ ಶರಾವತಿ ಯಮುನಾ ನದಿಗಳು
ಗಗನ ಚುಕ್ಕಿ ಭರಚುಕ್ಕಿ ಶಿವನ ಸಮುದ್ರ
ಹಳ್ಳಿ ಹಳ್ಳಿಗಳಲ್ಲಿ ಹಳ್ಳ ಕೊಳ್ಳಗಳೂ
ಬರದಿಂದ ಹರಿದು ಕರುನಾಡ ತುಂಬುವವು
ಕನ್ನಡ ಸವಿ ನುಡಿ ಸಿರಿ ನುಡಿ ಹಿತವಾಗಿ
ಸರಳವಾಗಿದೆ ಸರಸ ವಿರಸವಿಲ್ಲದೆ
ಬಿಂಕದ ಬಿನ್ನಾಣದ ಬೆಡಗಿನ ಬೆರಗು
ನುಡಿಯ ನುಡಿಯಲು ನಡೆಚನ್ನ
ನುಡಿ ಚೆನ್ನ ನವ ನವೀನವಾದ ಕನ್ನಡ ನುಡಿ
ಕವಿ ಕಾವ್ಯ ಸಬ್ಬವಕಾರರ ಬೀಡು
ಪಂಪ ಪೊನ್ನ ಜನ್ನ ರನ್ನರಂತಹ
ಕುವೆಂಪು ಕನ್ನಡವ ಉಳಿಸಿ ಬೆಳೆಸಿದರೆ
ಬೇಂದ್ರೆ ಬರಹ ಸಖಿಗೀತ ಸುಖ ದಾಂಪತ್ಯ
ಮುಂದಿನ ಜನರಿಗೆ ದಾರಿ ದೀಪವಾಗಿದೆ
ರಚನೆ
ಯಗುಮಾಶ
*ಶರಣಬಸಪ್ಪ ಎಂ ಗುಳೇದ*
*ಸಾ||ಯರಗೋಳ ತಾ||ಜಿ|| ಯಾದಗಿರಿ*
*೧೪೫ ನೇ ಗೋಷ್ಠಿ*
🌼🌼
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🍀🍀
ವಾರ- *ಸೋಮವಾರ*
ದಿನಾಂಕ- *೩೧.೦೮.೨೦೨೦*
🌷🌷
ವಿಷಯ- *ನಿಮಗಿಷ್ಟವಾದ ವಿಷಯ*
🌻
ಪ್ರಕಾರ- *ವೃತ್ತ್ಯನುಪ್ರಾಸ*
🌸🌸
ನಿರ್ವಹಣೆ- *ಶ್ರೀಉಮೇಶ ನರಗುಂದ*
🌺🌺
*ವೃತ್ತ್ಯನುಪ್ರಾಸ ಎಂದರೆ*
ಪದ್ಯದ ಪ್ರತೀ ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು
ಉದಾ-ಕಟ್ಟಾಣಿ ಕಟ್ಯಾಳ ಕಟ್ಟಿಮ್ಯಾನ ನಿಂತಾಳ
ಇಲ್ಲಿ *ಕ* ಮತ್ತು *ಟ* ಅಕ್ಷರಗಳು ಮತ್ತೆ ಬಂದಿರುವಹಾಗೇ ಬರಬೇಕು
🌹🌹
ಐದು ಸಾಲಿನ ಒಂದು ಪದ್ಯ
ನಾಲ್ಕು ಪದ್ಯ ಬರೆಯಬೇಕು
ಪ್ರತೀ ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಮತ್ತೆ ಮತ್ತೆ ಬರಬೇಕು
🙏🙏🙏
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment