ಕವನದ ಶೀರ್ಷಿಕೆ:
"ಈ ಹಾಳು ಕರೋನ ಬಾರದಿದ್ದರೆ"
(ಸಿಂಹ ಪ್ರಾಸ)
ವಿದ್ಯಾರ್ಥಿಗಳ ಗುಂಪು ಇಲ್ಲದೆ ಶಾಲೆಗಳು
ಸದಾ ಬಿಕೋ ಎನ್ನುತ್ತಿವೆ ಆಟದ ಮೈದಾನ
ಸದ್ದು ಗದ್ದಲಗಳಿಂದ ಗಿಜಿಗಿಡುವುದು ಕಂಡು
ಗದರಿಸಲು ಶಿಕ್ಷಕರು ಹರಸಾಹಸ ಪಡುವುದು
ಗದ್ಯ,ಪದ್ಯ,ಪಾಠ ಆಟೋಟಗಳನು ಆಡುವುದು
ಅದನ್ನೆಲ್ಲ ನೆನಸಿಕೊಂಡರೆ ದುಃಖವಾಗುವದು
ದಿನಾಲು ಪ್ರಾರ್ಥನೆ ಮಾಡುವುದು
ಅನುದಿನವು ಶಿಕ್ಷಕರಗೆ ಗೌರವ ಕೊಟ್ಟು
ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯ
ಜನಪದರ ಜೀವನ ತಿಳಿಸಿ ಕೊಡುವುದು
ಮನೆಗೆಲಸ ನೀಡಿ ಕಳುಹಿಸುವುದು ಸದಾ
ನೆನಪಿಗೆ ಬಂದು ಕಾಡುತ್ತಿದೆ ನನ್ನ ಮನವನು
ನಮ್ಮ ಶಾಲೆ ಯಾವಾಗ ತೆರೆಯುವುದೋ
ಅಮ್ಮ ಅಪ್ಪ ನಮಗೆ ಯಾವಾಗ ಬಿಟ್ಟು ಬರುವರೋ
ಸುಮ್ಮನೆ ಮನೆಯಲ್ಲಿ ಕೂಡುವ ಬದುಕು
ನಮಗೆ ಬೇಸರ ತರುತ್ತಿದೆ ಯಾಕಾದರೂ ಬಂತು
ನಮ್ಮ ಜಗಕೆ ಈ ಹಾಳು ಕರೋನ ಬಾರದಿದ್ದರೆ
ನಮ್ಮ ಸಂತಸಕೆ ಸಾಟಿಯೇ ಇದ್ದಿಲ್ಲ ಅನ್ನೊ ಕೊರಗು ಕಾಡುತ್ತಿದೆ.
ರಚನೆ :
ಯಗುಮಾಶ
*ಶರಣಬಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ||ಯಾದಗಿರಿ*
೧೪೪ನೇಗೋಷ್ಠಿ
🌷🌷🌷
*ಬರಹಗಾರರ ಬಳಗ ರಾಜ್ಯ ಘಟಕ*
*ಹೂವಿನಹಡಗಲಿ*
🌸🌸🌸
*ದಿನಾಂಕ-೩೦.೦೮.೨೦೨೦*
🌻🌻🌻
*ವಾರ-ಬಾನುವಾರ*
🍀🍀🍀
*ವಿಷಯ-ನಿಮ್ಮ ಅಯ್ಕೆಯ ವಿಷಯ*
*(ಸಿಂಹಪ್ರಾಸ)*
🌼🌼🌼
*ನಿರ್ವಹಣೆ*
*ಶ್ರೀ ನಾಗೇಶ ಚವ್ಹಾಣ್*
*ಸಿಂಹಪ್ರಾಸ* (ಷಟ್ಪದಿ)
ಪ್ರಾಸ ಅಕ್ಷರದ ಹಿಂದಿನ ಅಕ್ಷರವು
ಹ್ರಸ್ವಸ್ವರ ಆಗಿರಬೇಕು
*ಉದಾಹರಣೆ*
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಮಾಳ್ವರಿಂದ ಕಲ್ತು
ಇಲ್ಲಿ
ಲ ಅಕ್ಷರ ಪ್ರಾಸ
ಕೆ ಇದರಲ್ಲಿ ಕ+ಎ=ಕೆ ಇದರಲ್ಲಿ ಎ ಹ್ರಸ್ವಸ್ವರ
ಎ.ಒ.ಅ.ಇ.ಉ
ಇವುಗಳ ಜೊತೆ ವ್ಯಂಜನಗಳು ಬರಬಹುದು
ಕೆ,ಗೆ,ಚೆ,ಕು,ತೆ,ದೆ ಮೆ ನೆ.ಅ,ರ,ರೊ,ಲೊ,ಮೊ,ಗೊ,ಉ,ದು,ನು,ಮು,ನೆ,ರೆ ಯೆ ಗಿ ಕಿ ದಿ ರಿ ಚಿ ಸಿ ವಿ ಹಿ ..ಹೀಗೆ ಬರಬಹುದು
ಕೊಟ್ಟ ವಿಷಯವನ್ನು ಕವಿತೆಯಲ್ಲಿ ಹಿಡಿದಿಡಬೇಕು
ಆರು ಸಾಲಿನ ಒಂದು ಷಟ್ಪದಿ
ಮೂರು ಷಟ್ಪದಿ ಬರೆಯಿರಿ
೨.ಕೊಟ್ಟ ವಿಷಯಕ್ಕೆ ಪೂರಕವಾಗಿರಬೇಕು
೩.ಆರು ಸಾಲುಗಳ ಪದ್ಯ ಮೂರು ಪದ್ಯ ಬರೆಯಿರಿ
೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment