Tuesday, August 25, 2020

ಸ್ವರಚಿತ ಕವನ ೨೫/೦೮/೨೦೨೦

 ಕವನದ ಶೀರ್ಷಿಕೆ:

"ಪ್ರಗತಿಯ ಪಥ"

                

               ೧

ನಮ್ಮ ಜನತೆಯ ಸತತ ದುಡಿಮೆ

ನಿರಂತರ ವೈಜ್ಞಾನಿಕ ಅನ್ವೇಷಣೆ

ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆಯನು

ಯುವ ಶಕ್ತಿಯ ಸದ್ಭಳಕೆಯನು

ಕೃಷಿ ಉತ್ಪನ್ನಗಳ ಅಭಿವೃದ್ಧಿಯಲಿ 

ಸಾಗಿದ ದೇಶ ಮುನ್ನಡೆಯುವದು ಪ್ರಗತಿ ಪಥದಲಿ 


                        ೨

ಮಾನವ ತನ್ನಲಿನ ಅಂಧಕಾರವ ಕಳೆದು

ಸುಜ್ಞಾನ,ಸದ್ಗುಣ, ಸದಾಚಾರ ಪಡೆದು 

ದುರ್ಗುಣ, ದುರಹಂಕಾರವ ತೊರೆದು

ದುಶ್ಚಟ, ದುರ್ಜನರ ಸಹವಾಸ ಬಿಟ್ಟುಬಿಡುವುದು

ಮಮಕಾರ,ಕರುಣೆ,ಸರಳ ಜೀವನಶೈಲಿ ರೂಢಿಯಿಂದ

ಜೀವನವೆಂಬ ಬಂಡಿ ಪ್ರಗತಿ ಪಥದಲಿ ಸಾಗುವುದು


ರಚನೆ:

ಯಗುಮಾಶ

*ಶರಣಬಸಪ್ಪ ಗುಳೇದ*


🌺 *೧೩೯ ನೇಗೊಷ್ಠಿ*


🍀 *ಬರಹಗಾರರ ಬಳಗ ರಾಜ್ಯ* *ಘಟಕ* 

         *ಹೂವಿನಹಡಗಲಿ* 


🌷ದಿನಾಂಕ- *೨೫.೦೮.೨೦.೨೦* 


🌹ವಾರ- *ಮಂಗಳವಾರ* 


🌼ವಿಷಯ- *ಪ್ರಗತಿಯ ಪಥ* 


✍️ ನಿರ್ವಹಣೆ- *ಶ್ರೀಮತಿ ಲಲಿತ* *ಕಪ್ಪರ್ ಮಠ* 


೧.ಕವಿತೆಯನ್ನು ಹನಿಗವನದಲ್ಲಿ ಬರೆಯಿರಿ


೨.ಹನಿಗವಿತೆ ಆರು ಸಾಲಿರುತ್ತದೆ


೩ ಆರು ಸಾಲಿನ ಎರಡು ಅಥವಾ ಮೂರು ಹನಿಗವಿತೆ ಬರೆಯಬೇಕು


೪ ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ



 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



          




No comments:

Post a Comment

Videos