Monday, August 17, 2020

ಸ್ವರಚಿತ ಕವನ ೧೭/೦೮/೨೦೨೦

 ಕವನದ ಶೀರ್ಷಿಕೆ:

"ಪತಿಯೇ ಪರ ದೈವ"


ನನ್ನ ಹೆಂಡತಿ

ನನಗಾಗಿ ಕಾದಳು

ಭೋಜನಕ್ಕಾಗಿ


ಆದರೆ ಆಕೆ

ಅನುಭವಿಸಿದಳು

ನಿರಾಸೆಯನು


ಏಕೆಂದರೆ ಈ

ಗಂಡನು ಹೇಳದೆಯು

ಎಲ್ಲೂ ಹೋಗನು


ಎಂಬ ಭಾವನೆ

ಭರವಸೆ ಆದಾಗ

ಕಾಯುವುದನು


ಇದೆ ಅಲ್ಲವೇ

ನಮ್ಮ ಭಾರತೀಯರ

ಹೆಣ್ಣು ಮಕ್ಕಳ


ಭವ್ಯ ಸಂಸ್ಕೃತಿ

ಗಂಡನ ಸೇವೆಯಲ್ಲಿ

ಮುಕ್ತಿ ಎಂಬುದು


ಪತಿಯೇ ಪರ

ದೈವವೆಂದು ತಿಳಿದ

ನಾಡು ನಮ್ಮದು


ರಚನೆ:

ಯಗುಮಾಶ

(ಶರಣಬಸ್ಸಪ್ಪ ಗುಳೇದ)



*೧೩೧ನೇ ಗೋಷ್ಠಿ* 
         
 *🌷ಬರಹಗಾರರ ಬಳಗ ರಾಜ್ಯ** *ಘಟಕ* 
 *ಹೂವಿನಹಡಗಲಿ🌷* 
         
 *🌹ವಾರ-ಸೋಮವಾರ🌹* 
         
 *🌷ದಿನಾಂಕ-೧೭.೦೮.೨೦೨೦🌷* 
        
*✍️ನಿರ್ವಹಣೆ : ಶ್ರೀ ಹುಸೇನಪ್ಪ ಸಜ್ಜ್ಯೋಲಿ✍️*
        
 *✍️ವಿಷಯ- *ಮುಕ್ತಿ (ಹಾಯ್ಕು ಪ್ರಕಾರ)✍️* 
         
೧)ಹಾಯ್ಕು
ಮೂರು ಸಾಲಿನ ಪದ್ಯ
ಮೊದಲ ಸಾಲು ೫ ಅಕ್ಷರ
ಎರಡನೇ ಸಾಲು  ೭ ಅಕ್ಷರ
ಮೂರನೇ ಸಾಲು ೫ ಅಕ್ಷರ

ಹೀಗೇ ೬ ರಿಂದ ೭ ಪದ್ಯ ಬರೆಯಿರಿ
ಶಿರೋನಾಮೆಗೆ ತಕ್ಕಂತೆ ಕವಿತೆ
ಅರ್ಥಪೂರ್ಣವಾಗಿ ಸಾಗಲಿ.

೨)ಸಮಯ ಮುಂಜಾನೆ ಎಂಟರಿಂದ ಆರರವರೆಗೆ.
೩)ನಿಮ್ಮ ಕವನಗಳನ್ನು ವಾಟ್ಸಪ್ ಬರಹದಲ್ಲಿಯೇ ಹಾಕಬೇಕು.
೪)ಕವನದ ಕೊನೆಯಲ್ಲಿ ತಮ್ಮ ಹೆಸರನ್ನು ನಮೋದಿಸಿ.
೫)ಗೋಷ್ಠಿಯ ಮಧ್ಯೆ ಬೇರೆ ಕವನ ವಿಷಯ ಹಾಕಬಾರದು.
೬) ಯಾವುದೇ ಕಾರಣಕ್ಕೂ ಬೇರೆ ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ. ಮಾಡಿದರೆ ಮತ್ತು ಇಲ್ಲಿಯ ನಿಯಮಗಳನ್ನು ಮುರಿದರೆ ಬಳಗದಿಂದ ತೆಗೆಯಲಾಗುವುದು.
🙏🙏🙏🙏🙏🙏🙏🙏

 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos