Friday, August 21, 2020

ಸ್ವರಚಿತ ಕವನ ೨೧/೦೮/೨೦೨೦

 ಕವನದ ಶೀರ್ಷಿಕೆ:

"ಮತ್ಸರ"


ಅರಿಷಡ್ವರ್ಗಗಳಲಿ ಮತ್ಸರವು ಒಂದು

ನಿಯಂತ್ರಿಸದಿದ್ದರೆ ಹಾಳು ಮಾಡುವುದು

ಜೀವನವನ್ನು ಹದ ಅರಿತು ಬಾಳುವುದ

ಕಲಿಯತರೆ ಸುಂದರ ಬದುಕಿನ ಕದ ತೆರೆವುದು.


ಸಹಪಾಠಿ, ಸಂಬಂಧಿಗಳ ಏಳ್ಗೆಗೆ

ಸಹಿಸದ ಮಾನವ ಒಳಗೊಳಗೆ

ಮತ್ಸರದಿ ಕುದಿಯುವನು ಜೊತೆಗೆ

ಮಾನವ ಸಾರ್ಥಕ ಜನ್ಮದ ಅರಿಯದೆ ಬಾಳ್ಗೆ.


ಗುರುಗಳು ಮಕ್ಕಳ ಬದುಕಲಿ ಮತ್ಸರವ ತೇಜಿಸಿ

ಉನ್ನತ ವ್ಯಕ್ತಿಗಳ ಆದರ್ಶಗಳನು ಪಾಲಿಸಿ

ಮಮತೆ,ಕರುಣೆ, ಸಹಕಾರ, ಸೌಹಾರ್ದತೆ ಕಲಿಸಿ

ಭರವಸೆಯ ಇಟ್ಟು ಗೆಲುವು ಪಡೆಯುವದನು ತಿಳಿಸಿ.


ರಚನೆ:

ಯಗುಮಾಶ

(ಶರಣಬಸಪ್ಪ ಗುಳೇದ)





*೧೩೫ನೇ ಗೋಷ್ಠಿ*
                   🙏🙏
ಬರಹಗಾರರ ಬಳಗ ರಾಜ್ಯ ಘಟಕ
          ಹೂವಿನಹಡಗಲಿ
                   ✍️✍️
            ವಾರ-ಶುಕ್ರವಾರ
                  🌹🌹
      ದಿನಾಂಕ-೨೧.೦೮.೨೦೨೦
                  🌻🌻
            ವಿಷಯ-ಮತ್ಸರ
                (ಚುಟುಕು)
                  🌷🌷
ನಿರ್ವಹಣೆ-ಶ್ರೀನಾಗಭೂಷಣ ಅಯ್.ಎಸ್
                  ☘️☘️
                 ಗಮನಿಸಿ
೧.ಚುಟುಕು ನಾಲ್ಕು ಸಾಲಿರುತ್ತದೆ

೨.ವಿಷಯಕ್ಕೆ ಪೂರಕವಾಗಿರಬೇಕು

೩.೩ ಅಥವಾ ೪ ಚುಟುಕು ಬರೆಯಿರಿ

೪.ಗೋಷ್ಠಿಯ ಮದ್ಯೆ ಬೇರೆ ವಿಷಯ ಹಾಕಬೇಡಿ

೫.ರಾಜಕೀಯ,ವಯಕ್ತಿಕ ಹಾಗೂ ಸಾಮಜಿಕವಾಗಿ ತೊಂದರೆಯಾಗುವ ಕವಿತೆ ಬರೆಯಬೇಡಿ

೬.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

 🙏 *ಮಧುನಾಯ್ಕ.ಲಂಬಾಣಿ* 
 *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos